Newsletters for 2024-25
Sunday, December 29th, 2024Purnashiksha (Prashikshana Newsletter) for the year 2024-25 July 2024 Aug and Sep 2024 Oct and Nov 2024
Purnashiksha (Prashikshana Newsletter) for the year 2024-25 July 2024 Aug and Sep 2024 Oct and Nov 2024
Purnashiksha (Prashikshana Newsletter) for the year 2023-24 June – July 2023 Oct- Nov 2023
♣ . ರಾಮೋತ್ಸವ ವಿಶೇಷ आनन्दिनी ಶಾರ್ವರಿ ಸಂವತ್ಸರ, ಶಿಶಿರ ಋತು, ಮಾಘ-ಫಾಲ್ಘುಣ ಮಾಸ – ಮಾರ್ಚ್ ೨೦೨೦ ಸಂಪಾದಕೀಯ – ಲತಾ ಎಂ (ಪ್ರತಿನಿಧಿ, ಪ್ರಕಾಶನ ವಿಭಾಗ) ♦ “ಮನೆ ಚಿಕ್ಕದಾದರೂ ಮನಸ್ಸು ಚಿಕ್ಕದೇ” – ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಈ ಗಾದೆಯಿಂದ ಸ್ಪೂರ್ತಿ ಪಡೆದು ಪೂರ್ಣಪ್ರಮತಿ online ಆದರೇನು ಕಲಿಕೆಯ ಸಂಭ್ರಮಕ್ಕೆ ಕೊರತೆಯೇ ಎಂಬಂತೆ ೨೦೨೦-೨೧ ರಲ್ಲಿ ಎಲ್ಲಾ ಪಾಠಗಳನ್ನು ಮಾಡುತ್ತಾ ಉತ್ಸವವನ್ನೂ ನಡೆಸಿತು. […]
♣ . आनन्दिनी ಶಾರ್ವರಿ ಸಂವತ್ಸರ, ಹೇಮಂತ ಋತು, ಕಾರ್ತೀಕ ಮಾಸ – ನವೆಂಬರ್೨೦೨೦ ಸಂಪಾದಕೀಯ ಪೂರ್ಣಪ್ರಮತಿ ಕಲಿಕಾ ತಾಣ…..ಯಾರಿಗೆಲ್ಲಾ? ಎಂದು ಯಾರಾದರೂ ಪ್ರಶ್ನಿಸಿದರೆ ! ಯಾರು ಕಲಿಯಲು ಸಿದ್ಧರೋ ಅವರಿಗೆ ಇದು ಕಲಿಕಾತಾಣ. ಪೋಷಕರು, ಮಕ್ಕಳು, ಅಧ್ಯಾಪಕರು….ಇದಕ್ಕೆ ಮಿತಿಯಿಲ್ಲ. ನಮ್ಮ ಕಲಿಕೆಯ ಪ್ರಯಾಣ ಮುಂದುವರೆದಿದೆ. ನವೆಂಬರ್ ಮಾಸದ ಕಲಿಕೆಯನ್ನು […]
♣ – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಆಶ್ವಯುಜ ಮಾಸ – ಅಕ್ಟೋಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಕಾಲಾಯ ತಸ್ಮೈ ನಮಃ ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಮುಗುಳು ನಗುತ್ತಾ ಮುಂದೆ ಸಾಗುವುದು ಕಾಲದ ಗುಣ. ಕರೋನ ಎಂಬ ಬೇಡದ ಅಧ್ಯಾಯನವನ್ನು ಜೀರ್ಣಿಸಿಕೊಳ್ಳುತ್ತಾ ಈ ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿದೇ ಹೋಯಿತು. ಮಕ್ಕಳು – ಅಧ್ಯಾಪಕರು Online ನಲ್ಲಿ […]
♣ – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಬಾದ್ರಪದ ಮಾಸ – ಸೆಪ್ಟೆಂಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಆತ್ಮೀಯರೇ, “ಬಯಸದೇ ಬಂದ ಭಾಗ್ಯ” ಏನಿರಬಹುದು !!! ಪೂರ್ಣಪ್ರಮತಿಯ ಕನಸು ಒಂದು ಕಲಿಕಾ ಸಮುದಾಯವಾಗಬೇಕು ಎಂಬುದು. ಪರಸ್ಪರ ಭಾವಿಸುತ್ತಾ, ಕಲಿಸುತ್ತಾ – ಕಲಿಯುತ್ತಾ ಸ್ವಧರ್ಮದಲ್ಲಿ ತೊಡಗುವ ಒಂದು ಜೀವನಯಾತ್ರೆಯಾಗಿಸಬೇಕೆಂಬುದು. ಆಧುನಿಕ ಅನೇಕ ವ್ಯವಸ್ಥೆಗಳಿಗೆ ಸಿಕ್ಕು ಕಳೆದುಕೊಂಡಿರುವ ಅವಿಭಕ್ತ ಕುಟುಂಬವನ್ನು ಪೂರ್ಣಪ್ರಮತಿಯ ಮೂಲಕ ಮರಳಿ ಪಡೆಯಬಹುದು ಎಂಬುದು. ಈ ಕನಸಿಗೆ ಕರೋನ ಪೂರಕವಾಯಿತು. ಅದಕ್ಕೆ […]
♣ – ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿಎಂಬ ಮಾತನ್ನು ಕೇಳುತ್ತಾ ಬೆಳೆದವರು ನಾವು. ನದಿ, ಬೆಟ್ಟ, ಮಣ್ಣು – ಪ್ರಕೃತಿಯ ಕಣಕಣವನ್ನೂ ತಾಯಿಯಂತೆ ಕಾಣುವ ಸಂಸ್ಕಾರವನ್ನು ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ. ಭಾರತ ಒಂದು ಭೌಗೋಳಿಕ ಅಸ್ತಿತ್ವ ಮಾತ್ರವಲ್ಲ. ಕಲೆ, ಶಾಸ್ತ್ರಜ್ಞಾನ, ಋಷಿ ಪರಂಪರೆಗಳ ಅಸ್ತಿತ್ವವೂ ಹೌದು. ಸಂಪ್ರದಾಯಗಳ ಭದ್ರಬುನಾದಿಯ ಮೇಲೆ ಉನ್ನತಜೀವನ ಮೌಲ್ಯಗಳನ್ನು ಜೀವಂತವಾಗಿ ಉಳಿಸಿಕೊಂಡಿರುವ ಭವ್ಯ ಭಾರತ […]
” ಗುರುಪೂರ್ಣಿಮೆ ವಿಶೇಷ ಸಂಚಿಕೆ “ ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ) ಮೂರನೇ ತರಗತಿಯ ಮಗುವೊಂದು ಕಣ್ಣು ತೆರೆಸಿದ ಪ್ರಸಂಗ ನಿಮಗೆ ಹೇಳಬೇಕು. ಆಕೆ ಮುದ್ದು ಮುದ್ದು ಮಾತಾಡುವ, ಗುಂಡು ಮುಖದ ಚೆಲುವೆ. ತನ್ನ ಜೊತೆಗಾರರಂತೆ ಓದುವ – ಬರೆಯುವ ಆಸೆ ಅವಳಿಗೂ ಇತ್ತು. ಆದರೆ ಅವಳ ವೇಗಕ್ಕೆ, ಗ್ರಹಿಕೆಗೆ ಸಿಗುವಂತೆ ಹೇಳಿಕೊಡುವವರು ಬೇಕಿತ್ತು. ಅವಳಿಗೆ ಯಾವ ಕಾರಣಕ್ಕೆ ನನ್ನನ್ನು ಕೇಳಬೇಕೆನಿಸಿತೋ ತಿಳಿಯಲಿಲ್ಲ. ಅವಳ ಮುಗ್ಧ ಆಸೆಗೆ […]
ಸಂಪಾದಕೀಯ – ಶಶಿರೇಖಾ.ಎಂ.ಜಿ (ಪ್ರಾಂಶುಪಾಲರು) ಆನಂದಿನಿಯ ಈ ಸಂಚಿಕೆ ಒಂದು ಹೊಸ ಕಾಲಘಟ್ಟದಲ್ಲಿ ಹೊರಬರುತ್ತಿದೆ. ಮಾನವ ಪ್ರಕೃತಿಮಾತೆಗೆ ಮಾಡಿದ ಅತಿರೇಕದ ಅಪಚಾರಕ್ಕಾಗಿ ಆಕೆ ಮುನಿದು ಮಾನವನ ಮೇಲೆ ಮಾರಕಾಸ್ತ್ರ ಪ್ರಯೋಗಿಸುತ್ತಿದ್ದಾಳೆ ಎನ್ನುವ ಭಾವ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ಎರಗಿದ ಆಕೆಯ ಶಾಪವಾದ ಕೋವಿಡ್-೧೯ನಿಂದಾಗಿ ಇಡಿಯ ವಿಶ್ವಕ್ಕೇ ದಿಗ್ಭ್ರಮೆ ಆವರಿಸಿ, ಎಲ್ಲ ದೇಶಗಳ ಲಕ್ಷಾಂತರ ಜನರ ನೋವು, ಸಾವು, Lockdown, ಆರ್ಥಿಕ ಪತನ, ಬಡಜನರ ಬದುಕಿನ ಬವಣೆ ಇದೆಲ್ಲ ಸಾಲುಸಾಲಾಗಿ ಮೆರವಣಿಗೆಯಾಗುತ್ತಿದೆ. […]
ಸಂವತ್ಸರ ಸೂತ್ರ-ಕಲಿಕೆ-ಹಂಚಿಕೆ ಸರಣಿ – 2 ಸಂಪಾದಕೀಯ ಆತ್ಮೀಯರೇ, ೨೦೧೯-೨೦ ನೇ ಸಾಲಿನ ಆನಂದಿನಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ಈ ವರ್ಷ ನಮಗೆ ಒಂದು ಮೈಲಿಗಲ್ಲಿನ ವರ್ಷ. ೨೦೧೦ ಜೂನ್ ನಲ್ಲಿ ಪ್ರಾರಂಭವಾದ ಪೂರ್ಣಪ್ರಮತಿ ೧೦ನೇ ವರ್ಷಕ್ಕೆ ಕಾಲಿಟ್ಟಿದೆ. ಅದನ್ನು ವಿಶೇಷವಾಗಿ ಆಚರಿಸುವ ಯೋಜನೆ ವರ್ಷ ಪ್ರಾರಂಭದಲ್ಲಿ ರೂಪುಗೊಂಡಿದ್ದು ಬಹಳ ಮುಖ್ಯವಾಗಿ ಮೂರು ಮುಖಗಳ ಕಾರ್ಯಕ್ರಮ ಮೂಡಿಬಂತು. ಮೊದಲನೆಯದಾಗಿ ಪ್ರತಿ ವಿಷಯಗಳ “ಹಬ್ಬ”, ಎರಡನೆಯದಾಗಿ ರಾಮಾಯಣ ಸಮೀಕ್ಷೆ, ಮೂರನೆಯದಾಗಿ ಕಳೆದ ಹತ್ತುವರ್ಷಗಳ ಒಟ್ಟು ಸಂವತ್ಸರ ಸೂತ್ರಗಳ ಮುಂದುವರೆದ […]