Haribhaktisaara

ದಾಸವರ್ಯ ಕವಿ ಕನಕದಾಸ ವಿರಚಿತ ಹರಿಭಕ್ತಿಸಾರ

ಶ್ರೀಯರಸ ಗಾಂಗೇಯನುತ ಕೌಂ | ತೇಯ ವಂದಿತಚರಣ ಕಮಲದ | ಳಾಯತಾಂಬಕರೂಪ ಚಿನ್ಮಯ ದೇವಕೀತನಯ ||
ರಾಯ ರಘುಕುಲವರ್ಯ ಭೂಸುರ | ಪ್ರೀಯಸುರಪುರನಿಲಯ ಚೆನ್ನಿಗ | ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ ||

ದೇವದೇವ ಜಗದ್ಭರಿತ ವಸು | ದೇವಸುತ ಜಗದೇಕನಾಥ ರ | ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ||
ಭಾವಜಾರಿಪ್ರಿಯ ನಿರಾಮಯ | ರಾವಣಾಂತಕ ರಘುಕುಲಾನ್ವಯ | ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ || ೨ ||

ಅನುಪಮಿತ ಚಾರಿತ್ರ ಕರುಣಾ | ವನದಿ ಭಕ್ತ ಕುಟುಂಬಿ ಯೋಗೀ | ಆನಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ ||
ವನಜನಾಭ ಮುಕುಂದ ಮುರಮ | ರ್ದನ ಜನಾರ್ದನ ತ್ರೈ ಜಗತ್ಪಾ | ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ || ೩ ||

ಕಮಲಸಂಭವವಿನುತ ವಾಸವ | ನಮಿತ ಮಂಗಳ ಚರಿತ ದುರಿತ | ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ ||
ಅಮಿತವಿಕ್ರಮ ಭೀಮ ಸೀತಾ | ರಮಣ ವಾಸುಕಿಶಯನ ಖಗವತಿ | ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ || ೪ ||

ಕ್ಷೀರವಾರಿಧಿಶಯನ ಶಾಂತಾ | ಕಾರಾ ವಿವಿಧವಿಚಾರ ಗೋಪೀ | ಜಾರ ನವನೀತಚೋರ ಚಕ್ರಾಧಾರ ಭವದೂರ ||
ಮಾರಪಿತ ಗುಣಹಾರ ಸರಸಾ | ಕಾರ ರಿಪುಸಂಹಾರ ತುಂಬುರ | ನಾರದಪ್ರಿಯ ವರದ ರಕ್ಷಿಸು ನಮ್ಮನನವರತ || ೫ ||

ತಾಮರಸದಳನಯನ ಭಾರ್ಗವ | ರಾಮ ಹಲಧರರಾಮ ದಶರಥ | ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ ||
ಸಾಮಗಾನಪ್ರೇಮ ಕಾಂಚನ | ಧಾಮಧರ ಸುತ್ರಾಮವಿರಚಿತ | ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ || ೬ ||

ವೇದಗೋಚರ ವೇಣುನಾದವಿ | ನೊದ ಮಂದರಶೈಲಧರ ಮಧು | ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ ||
ಯಾದವೇಂದ್ರ ಯಶೋದೆನಂದನ | ನಾದಬಿಂದುಕಳಾತಿಶಯ ಪ್ರ | ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ || ೭ ||

ಅಕ್ಷಯಾಶ್ರಿತ ಸುಜನಜನ ಸಂ | ರಕ್ಷಣ ಶ್ರೀವತ್ಸ ಕೌಸ್ತುಭ | ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ ||
ಪಕ್ಷಿವಾಹನ ದೇವಸಂಕುಲ | ಪಕ್ಷಜಗದಧ್ಯಕ್ಷವರನಿಟಿ | ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ || ೮ ||

ಚಿತ್ರಕೂಟನಿವಾಸ ವಿಶ್ವಾ | ಮಿತ್ರ ಕ್ರತುಸಂರಕ್ಷಕ ರವಿ ಶಶಿ | ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ ||
ಧಾತ್ರಿಜಾಂತಕ ಕಪಟನಾಟಕ | ಸೂತ್ರ ಪರಮಪವಿತ್ರ ಫಲ್ಗುಣ | ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ || ೯ ||

ಮಂಗಳಾತ್ಮಕ ದುರಿತತಿಮಿರ ಪ | ತಂಗ ಗರುಡತುರಂಗ ರಿಪುಮದ | ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ ||
ಅಂಗದಪ್ರಿಯನಂಗಪಿತ ಕಾ | ಳಿಂಗಮರ್ದನ ಅಮಿತಾ ಕರುಣಾ | ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ || ೧೦ ||

ದಾಶರಥಿ ವೈಕುಂಠನಗರಿ ನಿ | ವಾಸ ತ್ರೈಜಗದೀಶ ಪಾಪ ವಿ | ನಾಶ ಪರಮವಿಲಾಸ ಹರಿಸರ್ವೇಶ ದೇವೇಶ ||
ವಾಸುದೇವ ದಿನೇಶ ಶತಸಂ | ಕಾಶ ಯದುಕುಲವಂಶತಿಲಕ ಪ | ರಾಶರಾನತ ದೇವ ರಕ್ಷಿಸು ನಮ್ಮನನವರತ || ೧೧ ||

ಕುಂದಕುಟ್ಮಲರದನ ಪರಮಾ | ನಂದ ಹರಿ ಗೋವಿಂದ ಸನಕ ಸ | ನಂದ ವಂದಿತ ಸಿಂಧುಬಂಧನ ಮಂದರಾದ್ರಿಧರ ||
ಇಂದಿರಾಪತ ವಿಜಯಸಖ ಅರ | ವಿಂದನಾಭ ಪುರಂದರಾರ್ಚಿತ | ನಂದಕುಲ ಮುಕುಂದ ರಕ್ಷಿಸು ನಮ್ಮನನವರತ || ೧೨ ||

ಬಾಣಬಾಹುಚ್ಛೇದ ರಾವಣ | ಪ್ರಾಣನಾಶನ ಪುಣ್ಯನಾಮ ಪು | ರಾಣಪುರು?ತ್ತಮ ನಿಪುಣ ಅಣುರೇಣು ಪರಿಪೂರ್ಣ ||
ಕ್ಷೆಣಿಪತ ಸುಲಲಿತ ಸುದರ್ಶನ | ಪಾಣಿ ಪಾಂಡವರಾಜಕಾರ್ಯಚ ಧು | ರೀಣ ಜಗನಿರ್ಮಾಲಣ ರಕ್ಷಿಸು ನಮ್ಮನನವರತ || ೧೩ ||

ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲಪಾಲ ಲಕ್ಷ್ಮೀ | ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ ||
ಮೂಲಕಾರಣ ವಮಲ ಯಾದವ | ಜಾಲಹಿತ ಗೋಪಾಲ ಅಗಣಿತ | ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ || ೧೪ ||

ನಾಗನಗರಿ ಧರಿತ್ರಿ ಕೋಶ ವಿ | ಭಾಗ ತಂತ್ರ ನಿಯೋಗಗಮನ | ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸೀಮ ||
ಯೋಗಗಮ್ಯ ಭವಾಬ್ಧಿ ವಿ?ಧರ | ನಾಗ ಗಾರುಡಮಂತ್ರವಿದ ಭವ | ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ || ೧೫ ||

ಶ್ರೀಮದುತ್ಸಹ ದೇವನುತ ಶ್ರೀ | ರಾಮ ನಿನ್ನಯ ಚರಣಸೇವಕ | ಪ್ರೇಮದಿಂ ಸಾ?ಂಗವೆರಗಿಯೆ ಮಾಳ್ಪೆ ಬಿನ್ನಪವ ||
ಈ ಮಹಿಯೊಳೀವರಿಗೆ ನಾವು ಸು | ಕ್ಷೀಮಿಗಳು ನಿನ್ನಯ ಪದಾಬ್ಜ | ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ || ೧೬ ||

ಈಗಲೀ ಮರ್ಯಾೆದೆಯಲಿ ಶರ | ಣಾಗತರ ಸೇವೆಯೊಳು ಹೊಂಪುಳಿ | ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ ||
ಭೋಗಭಾಗ್ಯವ ಬಯಸಿ ಮುಕ್ತಿಯ | ನೀಗಿ ನಿಮ್ಮನು ಭಜಿಸಲರಿಯದ | ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || ೧೭ ||

ಭಕ್ತಿಸಾರದ ಚರಿತೆಯನು ಹರಿ | ಭಕ್ತರಾಲಿಸುವಂತೆ ರಚಿಸುವೆ | ಯುಕ್ತಿಯಲಿ ಬರೆದೋದಿದವರಿ?ರ್ಥ ಸಿದ್ಧಿಪುದು ||
ಮುಕ್ತಿಗಿದು ನೆಲೆದೋರಿಪುದು ಹರಿ | ಭಕ್ತರನು ಲಾಲಿಪುದು ನಿಜವತಿ | ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ || ೧೮ ||

ನಳಿನಲೋಚನ ನಿನ್ನ ಮೂರ್ತಿಯ | ಕಳೆ ಬೆಳಗುತಿದೆ ಲಹರಿಯಲಿ ಭೂ | ತಳದೊಚ್ಚರಿಯಾದ ನಾಮಾಮೃತ ಸಮುದ್ರದಲಿ ||
ಬಳಸುವರು ಸತ್ಕವಿಗಳಿವರಗ್ಗಳಿಕೆ ಎನಗಿನಿತಿಲ್ಲ ಸನ್ಮತಿ | ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ || ೧೯ ||

ಗಿಳಿಯಮರಿಯನು ತಂದು ಪಂಜರ | ದೊಳಗೆ ಪೋಷಿಸಿ ಕಲಿಸಿ ಮೃದು | ನುಡಿಗಳನು ಲಾಲಿಸು ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾ | ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ || ೨೦ ||

ಪೊಗಲಳೆವೇ ನಿನ್ನ ನಾಮದ | ಸುಗುಣ ಸಚ್ಚಾರಿತ್ರ ಕಥನವ | ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು ||
ನಿಗಮತತಿ ಕೈವಾರಿಸುತ ಪದ | ಯುಗವ ಕಾಣದೆ ಬಳಲುತಿದೆ ವಾ | ಸುಕಿಶಯ ಸರ್ವೇಶ ರಕ್ಷಿಸು ನಮ್ಮನನವರತ || ೨೧ ||

ವೇದಶಾಸ್ತ್ರಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ | ವಾದದಲಿ ಗುರುಹಿರಿಯರರಿಯದ ಮೂಢಮತಿ ಎನಗೆ ||
ಆದಿಮೂರುತಿ ನೀನು ನೆರೆ ಕರುಣೊ | ದಯನು ಹೃದಯಾಂಗಣದಿ ಜ್ಞಾ | ನೋದಯವೆನಗಿತ್ತು ರಕ್ಷಿಸು ನಮ್ಮನನವರತ || ೨೨ ||

ಹರಿವರಿತು ತಾಯ್ತನ್ನ ಶಿಶುವಿಗೆ | ಒಸೆದು ಮೊಲೆ ಕೊಡುವಂತೆ ನೀ ಪೋ | ಷಿಸದೇ ಬೇರಿನ್ನಾರು ಪೋ?ಕರಾಗಿ ಸಲಹುವರು ||
ಬಸಿರೊಳಗೆ ಬ್ರಹ್ಮಾಂಡಕೋಟಿಯ | ಪಸರಿಸಿದ ಪರಮಾತ್ಮನೀನೆಂ | ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ || ೨೩ ||

ಇಬ್ಬರಣುಗರು ನಿನಗೆ ಅವರೊಳ | ಗೊಬ್ಬಮಗನೀರೇಳು ಲೋಕದ | ಹೆಬ್ಬೆಳೆಸು ಬೆಳೆವಂತೆ ಕಾರಣಕರ್ತನಾದವನು ||
ಒಬ್ಬ ಮಗನದ ಬರೆದ ಕರಣಿಕ | ರಿಬ್ಬರೀ ಲೋಕಪ್ರಸಿದ್ಧರು | ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ || ೨೪ ||

ಸಿರಿಯು ಕುಲಸತಿ ಸುತನು ಕಮಲಜ | ಹಿರಿಯ ಸೊಸೆ ಶಾರದೆ ಸಹೋದರಿ| ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ||
ನಿರುತ ಮಾಯೆಯು ದಾಸಿ ನಿಜಮಂ | ದಿರವಜಾಂಡವು ಜಂಗಮಸ್ಥಾ | ವರುಕುಟುಂಬಿಗ ನೀನು ರಕ್ಷಿಸು ನಮ್ಮನನವರತ || ೨೫ ||

ಸಾಗರನ ಮಗಳರಿಯದಂತೆ ಸ | ರಾಗದಲಿ ಸಂಚರಿಸುತಿಹ ಉ | ದ್ಯೋಗವೇನು ನಿಮಿತ್ತ ಕಾರಣವಿಲ್ಲಲೋಕದಲಿ ||
ಭಾಗವತರಾದವರ ಸಲಹುವ | ನಾಗಿ ಸಂಚರಿಸುವುದು ಈ ಭವ | ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ || ೨೬ ||

ಹಸ್ತಿವಾಹನನಾದಿಯಾದ ಸ | ಮಸ್ತ ದೇವನಿಕಾಯಾದೊಳಕೆ ಪ್ರ | ಶಸ್ತನಾವನು ನಿನ್ನ ವೋಲ್ ಶರಣಾಗತರ ಪೊರೆದೆ ||
ಹಸ್ತ ಕಲಿತ ಸುದರ್ಶನದೊಳರಿ | ಮಸ್ತಕವನಿಳುಹುವ ಪರಾಪರ | ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ || ೨೭ ||

ಹಗೆಯರಿಗೆ ವರವೀವರಿಬ್ಬರು | ತೆಗೆಯಲರಿಯರು ಕೊಟ್ಟ ವರಗಳ | ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ ||
ಸುಗುಣರಿನ್ನಾರುಂಟು ಕದನವ | ಬರೆದು ನಿನ್ನೊಳು ಜೈಸುವವರೀ | ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ || ೨೮ ||

ಸುಮನರಸ ವೈರದಲಿ ಕೆಲಬರ | ಕುಮತಿಗಳು ತಪದಿಂದ ಭರ್ಗನ | ಕಮಲಜನ ಪದಯುಗವ ಮೆಚ್ಚಿರಿ ವರವ ಪಡೆದಿಹರು ||
ಸಮರಮುಖದೊಳಗುಪಮೆಯಲಿ ವಿ | ಕ್ರಮದಿ ವೈರವ ಮಾಡಿದವರಿಗೆ | ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ || ೨೯ ||

ಬಲಿಯ ಬಂಧಿಸಿ ಮೊರೆಯಿಡುವ ಸತಿ | ಗೊಲಿದು ಅಕ್ಷಯವಿತ್ತು ಕರುಣದಿ | ಮೊಲೆಯುಣಿಸಿದ ಬಾಲಕಿಯ ಪಿಡಿಸುವನಪಹರಿಸಿ ||
ಶಿಲೆಯ ಸತಿಯಳ ಮಾಡಿ ತ್ರಿಪುರದ | ಲಲನೆಯರ ವ್ರತಗೆಡಿಸಿ ಕೂಡಿದ | ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ || ೩೦ ||

ಕರಿಯ ಕಾಯ್ದಾ ಜಲದಿ ಮಕರಿಯ | ತರಿದು ಹಿರಣ್ಯಾಕ್ಷಕನ ಸೀಳ್ದಾ | ತರಳನನು ತಲೆಗಾಯ್ದು ಶಕಟಾಸುರ ಹತಮಾಡಿ ||
ದುರುಳಕಂಸನ ಕೊಂದು ಮಗಧನ ಮುರಿದು ವತ್ಸನ ಸಂಹರಿಸಿ ಖರ | ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ || ೩೧ ||

ಶಿಶುತನದ ಸಾಮರ್ಥ್ಯದಲಿ ಕೆಲಸುರರನು ಸಂಹರಿಸಿ ಚಕ್ರವ | ಬಿಸುಟು ಯೌವನಕಾಲದಲಿಯಾ ಪಾಂಡು ಸುತರಿಂದ ||
ವಸುಮತಿಯ ಭಾರವನಿಳುಹಿ ಸಾ | ಹಸದಿ ಮೆರೆದವನಾಗೆ ನೀ ಮೆ | ಚ್ಚಿಸಿದೆ ತ್ರಿಜಗವನ್ನೆಲ್ಲ ರಕ್ಷಿಸು ನಮ್ಮನನವರತ || ೩೨ ||

ಎಲ್ಲರಲಿ ನೀನಾಗಿ ಸುಮನಸ | ರಲ್ಲಿ ಅತಿಹಿತಿನಾಗಿ ಯಾದವ | ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ ||
ಕೊಲ್ಲಿಸಿದೆ ಭೀಮಾರ್ಜುನರ ಕೈ | ಯಲಿ ಕೌರವ ಕುಲವನೆಲ್ಲವ | ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ || ೩೩ ||

ನರಗೆ ಸಾರಥಿಯಾಗಿ ರಣದೊಳು | ತುರಗ ನೀರಡಿಸಿದರೆ ವಾರಿಯ | ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ ||
ಶಿರವನು ಕೆಡುಹಿಸಿ ಅವನ ತಂದೆಯ | ಕರತಲಕೆ ನೀಡಿಸಿದೆ ಹರಹರ | ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ || ೩೪ ||

ಬವರದಲಿ ಖತಿಗೊಂಡು ಗದೆಯೊಳು | ಕವಿದು ನಿನ್ನಶ್ರುತಾಯಧನು ಹೊ | ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ ||
ವಿವರವೇನೋ ತಿಳಿಯೆ ಈ ಮಾ | ಯವನು ನೀನೇ ಬಲ್ಲೆ ನಿನ್ನಾ | ಯುವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ || ೩೫ ||

ಇಳೆಗೆ ಪತಿಯಾದವನು ಯಾದವ | ರೊಳಗೆ ಬಾಂಧವ ನಿನಗೆ ಸೋದರ | ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ ||
ಅಳಲಿನಬುಧಿಯಳದ್ದಿತಂಗಿಯ | ಬಳಲಿಸಿದೆ ಕುಲಗೋತ್ರ ಬಾಂಧವ | ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ || ೩೬ ||

ತಾಯನಗಲಿದ ತನಯನೀ ರಾ | ಧೇಯನೊಳು ರಹಸ್ಯದಲಿ ಕುಲ | ತಾಯವನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ ||
ಮಾಯಾಮಂತ್ರದ ಕುಟಿಲಗುಣದ | ನ್ಯಾಯವೋ ಇದನ್ಯಾಯವೋ ನೀ | ನ್ಯಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ || ೩೭ ||

ಕೊಲ್ಲುಬಗೆದವನಾಗಿ ನೀ ಹಗೆ | ಯಲ್ಲಿಸಖ್ಯವ ಬೆಳೆಸದು ಹಿತ | ವಲ್ಲ ನಿನ್ನಯ ಗುಣವ ಬಲ್ಲವರಿಗೆ ಯದುಕುಲದಿ ||
ಗೊಲ್ಲನಾರಿಯರೊಳು ಪ್ರವರ್ತಕ | ನಲ್ಲವೇ ಭಾವಿಸಲು ಲೋಕದೊ | ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ || ೩೮ ||

ಮಗನ ಕೊಂದವನಾಳುವಂತಾ | ಸುಗುಣೆಯರು ಹದಿನಾರು ಸಾವಿರ | ಸೊಗಸುಗಾತಿಯವರ ಮೋಹದ ಬಲೆಗೆ ವಿಟನಾಗಿ ||
ಬಗೆಬಗೆಯ ರತಿಕಲೆಗಳಲಿ ಕೂ | ರುಗರ ನಾಟಿಸಿ ಮೆರೆದು ನೀನಿ | ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ || ೩೯ ||

ಏನು ಮಾಡಿದರೇನು ಕರ್ಮವ | ನೀನೊಲಿಯದಿನ್ನಿ ದಿಲ್ಲದಕನು | ಮಾನವುಂಟೇ ಭ್ರಮರಕೀಟನ್ಯಾಯದಂದಲಿ ||
ನೀನೊಲಿಯೆ ತೃಣ ಪರ್ವತವು ಪುಸಿ | ಯೇನು ನೀ ಪತಿಕರಿಸೆ ಬಳಿಕಿ | ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ || ೪೦ ||

ಎ? ಮಾಡಲು ಮುನ್ನತಾ ಪಡ | ದ? ಎಂಬುದು ಲೋಕದೊಳುಮತಿ | ಗೆಟ್ಟ ಮಾನವರಾಡುತಿಹರಾಮಾತದಂತಿರಲಿ ||
ಪಟ್ಟವಾರಿಂದಾಯ್ತು ದ್ರುವನಿಗೆ | ಕೊಟ್ಟ ವರ ತಪ್ಪಿತೇ ಕುಚೇಲನೀ | ಗಿ? ಬಾಂಧವ ನೀನು ರಕ್ಷಿಸು ನಮ್ಮನನವರತ || ೪೧ ||

ತನ್ನ ದೇಹಾತುರದೊಳಡವಿಯೊ | ಳನ್ಯರನು ಸಂಹರಿಸುತಿರುತಿರೆ | ನಿನ್ನ ನಾಮದೊಳಧಿಕವೆರಡಕ್ಷರವ ಬಣ್ಣಿಸುತ ||
ಧನ್ಯನಾದನೆ ಮುನಿಕುಲದಿ ಸಂ | ಪನ್ನನಾದನು ನೀನೊಲಿದ ಬಳಿ | ಕಿನ್ನು ಪಾತಕವುಂಡೆ ರಕ್ಷಿಸು ನಮ್ಮನನವರತ || ೪೨ ||

ನಿನ್ನ ಸತಿಗಳುಕಿದ ದುರಾತ್ಮನ | ಬೆನ್ನಿನಲಿ ಬಂದವನ ಕರುಣದಿ | ಮನ್ನಿಸಿದ ಕಾರನ ದಯಾಪರಾಮೂರ್ತಿ ಎಂದೆನುತ ||
ನಿನ್ನ ಭಜಿಸಿದ ಸಾರ್ವಭೌಮರಿ | ಗಿನ್ನು ಇಹಪರವುಂಟು ಸದ್ಗುಣ | ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ || ೪೩ ||

ವೀರರಾವಣನೊಡನೆ ಹೋರಿದ | ವೀರರಗ್ಗದ ಕಪಿಗಳವರೊಳು | ಮಾರುತ ನವನಿಗೇನು ಧನ್ಯನೋ ಬ್ರಹ್ಮಪಟ್ಟದಲಿ ||
ಸೇರಿಸಿದ ನಿನ್ನಂತೆ ಕೊಡುವ ಉ | ದಾರಿಯಾವನು ತ್ರಿಜಗದೊಳಗಾ | ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ || ೪೪ ||

ಶಿವಶಿವಾ ನೀ ಮಾಡಿದುಪಕಾ | ರವನು ಮರೆತವರುಂಟೆ ಪಾಪದಿ | ನವೆದಳಾಮಿಳಗೊಲಿದ ಪ್ರಾಣವಿಯೊಗಕಾಲದಲಿ ||
ಆವನವರ ಕೈಗೊಪ್ಪಿಸದೆ ಕಾಯ್ದವನು ಮಿಕ್ಕಾ | ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ || ೪೫ ||

ಹೆತ್ತಮಗಳು ಮದುವೆಯಾದವ | ನುತ್ತಮನು ಗುರುಪತ್ನಿಗಳುಪಿದ | ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು ||
ಹೊತ್ತು ತಪ್ಪಿಸಿ ಕಾಮದಲಿ ಮುನಿ | ಪೋತ್ತಮನ ಮಡದಿಯನು ನೆರೆದವ | ಗಿತ್ತೆ ಕೈವಲ್ಯವನ್ನು ರಕ್ಷಿಸು ನಮ್ಮನನವರತ || ೪೬ ||

ಇಲ್ಲಿಹನು ಅಲ್ಲಿಲ್ಲವೆಂಬೀ | ಸೊಲ್ಲು ಸಲ್ಲದು ಹೊರಗೊಳಗೆ ನೀ | ಇಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು ||
ಬಲ್ಲರಿಳೆಯೊಳು ಭಾಗವತರಾ | ದೆಲ್ಲರಿಗೆ ವಂದಿಸಿದ ಕುಜನರಿ | ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ || ೪೭ ||

ಸಿರಿ ಸಂಪತ್ತಿನಲಿ ನೀ ಮೈ | ಮರೆದು ಮದಗರ್ವದಲಿ ದೀನರ | ಕರುಣದಿಂದೀಕ್ಷಿಸದೆ ಕಡೆಗಣ್ನಿಂದ ನೋಡುವರೇ ||
ಹರಹರ ಅನಾಥರನು ಪಾಲಿಸಿ | ಕೊಡುವ ಉದಾರಯೆಂಬೀ | ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ || ೪೮ ||

ದೀನ ನಾನು ಸಮಸ್ತ ಲೋಕಕೆ | ದಾನಿ ನೀನು ವಿಚಾರಿಸಲು ಮತಿ | ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ||
ಏನು ಬಲ್ಲೆನು ನಾನು ನೆರೆ ಸುಜ್ಙಾನಮೂರುತಿ ನೀನು ನಿನ್ನ ಸ | ಮಾನರುಂಟೇ ದೇವ ರಕ್ಷಿಸು ನಮ್ಮನನವರತ || ೪೯ ||

ತರಳತನದಲ ಕೆಲವು ದಿನ ದುರು | ಭರದ ಗರ್ವದಿ ಕೆಲವು ದಿನ ಮೈ | ಮರೆದು ನಿಮ್ಮಡಿಗೆರಗದಾದೆನು ವಿ?ಯಕೇಳಿಯಲಿ ||
ನರಕಭಾಜನನಾಗಿ ಕಾಮಾ | ತುರದಿ ಪರಧನ ಪರಸತಿಗೆ ಮನ | ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ || ೫೦ ||

ಮರೆದನಭ್ಯುದಯಲಿ ನಿಮ್ಮನು | ಮರೆಯೆನಾಪತ್ತಿನಲಿ ಹರಿಯೆಂ | ದೊರೆಯುವೆನು ಮನವೇಕಭಾವದೊಳಿಲ್ಲ ನಿಮ್ಮಡಿಯ ||
ಮರೆದು ಬಾಹಿರನಾದವ ನೀ | ಮರೆವರೇ ಹಸು ತನ್ನ ಕಂದನ | ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ || ೫೧ ||

ದಾರುಣಿಗೆ ವರಚಕ್ರವರ್ತಿಗಳಾರುಮಂದಿ ನೃಪಾಲಕರು ಹದಿ | ನಾರಮಂದಿಯು ಧರಣಿಯನು ಮುನ್ನಾಳ್ದನೃಪರೆನಿತೋ ||
ವೀರರನು ಮೆಚ್ಚಿದಳೆ ಧರಣೀ | ನಾರಿ ಬಹು ಮೋದದೊಳು ನಿನ್ನನು | ಸೇರಿ ಓಲೈಸುವಳು ರಕ್ಷಿಸು ನಮ್ಮನನವರತ || ೫೨ ||

ಭಾರಕರ್ತನು ನೀನು ಬಹು ಸಂ | ಸಾರಿಯೆಂಬುದು ನಿಗಮತತಿ ಕೈ | ವಾರಿಸುತಿದೆ ದಿವಿಜ ಮನುಜ ಭುಜಂಗರೊಳಗಿನ್ನು ||
ಆರಿಗುಂಟು ಸ್ವತಂತ್ರ ನಿನ್ನಂ | ತಾರು ಮುಕ್ತಿಯನೀವ ಸದ್ಗುರು | ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ || ೫೩ ||

ಗತಿವಿಹೀನರಿಗಾರು ನೀನೇ | ಗತಿಕಣಾ ಪತಿಕರಿಸಿ ಕೊಡುಸ | ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ ||
ಶ್ರುತಿವಚನವಾಡುವುದು ಶರಣಾಗತರ ಸೇವಕನೆಂದು ನಿನ್ನನು | ಮತಿವಿಡಿದು ನಂಬಿದೆನು ರಕ್ಷಿಸು ನಮ್ಮನನವರತ || ೫೪ ||

ಈಗಲೋ ಈ ದೇಹವಿನ್ಯಾ | ವಾಗಲೋ ನಿಜವಿಲ್ಲವೆಂಬುದ | ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆ ಎಂದೆಂಬ ||
ರಾಗಲೋಭದಿ ಮುಳುಗಿ ಮುಂದಣ | ತಾಗು ಬಾಗುಗಳರಿಯೆ ನಿನ್ನ ಸ | ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ || ೫೫ ||

ಮಾಂಸ ರಕ್ತದ ಮಡುವಿನಲ್ಲಿ | ನವಮಾಸ ಜನನಿಯ ಜಠರದೊಳಗಿರು | ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು ||
ನೀ ಸಲಹಿದವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ | ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ || ೫೬ ||

ಬಲು ಮೃಗ ಮರವು ಪಕ್ಷಿ ಕೀಟಕ | ಜಲ?ರೌಘದಿ ಜನಿಸಿದೆನು ಕೋ | ಐಲೆಗೊಳಿಸಬೇಡಕಟ ಮಾನವನಾದ ಬಳಿಕಿನ್ನು ||
ಕೊಲಿಸದಿರು ಯಮನಿಂದ ಮುರಚದ | ಒಲಿದು ನಿನ್ನನು ಭಜಿಸುವವರಿಗೆ | ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ || ೫೭ ||

ಪಂಚಭೂತದ ಕಾಯದೊಳು ನೀ | ವಂಚಿಸದೆ ಇರುತಿರಲು ಪೂರ್ವದ | ಸಂಚಿತದ ಫಲವೆನ್ನಲೇಕಿದು ಮರುಳುತನದಿಂದ ||
ಮಿಂಚಿದವರಿನ್ನುಂಟೆ ತಿಳಿಯೆ ಪ್ರ | ಪಂಚವೆಲ್ಲಕೆ ತಪ್ಪಿದವನೀ | ಕೊಂಚಗಾರನೆ ಕೃ? ರಕ್ಷಿಸು ನಮ್ಮನನವರತ || ೫೮ ||

ಹಲವು ಕರ್ಮಗಳಿಂದ ಮೂತ್ರದ | ಬಲಗಳಲಿ ಸಂಚರಿಸಿ ಪದವಿಯ | ಫಲ ಕಾಣದೆ ಹೊಲವು ತಪ್ಪಿದೆನೆನ್ನ ದೇಹದಲಿ ||
ಒಲಿದು ನೀನಿರೆ ನಿನ್ನ ಸಲುಗೆಯ ಒಲುಮೆಯಲಿ ಬರಸೆಳೆವ ಮುಕುತಿಯ | ಲಲನೆಯನೆ ತಳುವಿಲ್ಲ ರಕ್ಚಿಸು ನಮ್ಮನನವರತ || ೫೯ ||

ಎತ್ತಿದೆನು ನಾನಾ ಶರೀರವ | ಹೊತ್ತಲಿಸಿದೆನು ಸಲೆ ಬೇ | ಸತ್ತು ನಿನ್ನಯ ಪದವ ಕಾಣದೆ ತೊಳಲಿಬಳಲಿದೆನು ||
ಸತ್ತು ಹುಟ್ಟುವ ಹುಟ್ಟೆ ಹಿಂಗುವ | ಸತ್ತ ತೊಡಕನು ಮಾಣಿಸಲೆ ಪುರು | ?ತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ || ೬೦ ||

ಇಂದು ಈ ಜನ್ಮದಲಿ ನೀನೇ | ಬಂಧು ಹಿಂದಣ ಜನ್ಮದಲಿ ಬಳಿ | ಸಂದು ಮುಂದಣ ಜನ್ಮಕಧಿಪತಿಯಾಗಿ ಇರುತಿರಲು ||
ಎಂದಿಗೂ ತನಗಿಲ್ಲ ತನಸಂ | ಬಂಧ ನಿನ್ನದು ಎನಗೆ ನೀ ಗತಿ | ಯೆಂದು ಬಿನ್ನೈಸಿದೆನು ರಕ್ಷಿಸು ನಮ್ಮನನವರತ || ೬೧ ||

ಗಣನೆಯಿಲ್ಲದ ಜನನಿಯರ ಮೊಲೆ | ಯುಣಿಸಲಾಪಯಬಿಂದುಗಳನದ | ನೆಣಿಸಲಳವೇ ಸಪ್ತಸಾಗರಕಧಿಕವೆನಿಸುವುದು ||
ಬಣಗು ಕಮಲಜನದಕೆ ತಾನೇ | ಮಣೆಯಗಾರನು ಈತ ಮಾಡಿದ | ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ || ೬೨ ||

ಲೇಸಕಾಣೆನು ಜನನ ಮರಣದಿ ಘಾಸಿಯಾದೆನು ನೊಂದೆನಕಟಾ | ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ ||
ನೀ ಸಲಹುವವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ | ಲಾಸನನ ಹಂಗೇನು ರಕ್ಷಿಸು ನಮ್ಮನನವರತ || ೬೩ ||

ಕಾಪುರು?ರೈದಾರುಮಂದಿ ಸ | ಮೀಪದಲಿ ಕಾಡುವರು ಎನ್ನೆನು | ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ ||
ಶ್ರೀಪದಾಬ್ಜದ ಸೇವೆಯಲಿ ನೆರೆ ಪಾಪವನು ಪರಿಹರಿಸೇ ನೀ ನಿಜ | ರೂಪಿನಲಿ ಬಂದೊಳಿದು ರಕ್ಷಿಸು ನಮ್ಮನನವರತ || ೬೪ ||

ಐದು ತತ್ವಗಳಾದವೊಂದಕ್ಕೈದು ಕಡೆಯಲಿ ತತ್ವವಿಪ್ಪ | ತ್ತೈದು ಕೂಡಿದ ತನುಳೆನಲಿ ವಂಚಿಸದೆ ನೀನಿರಲು ||
ಭೇದಿಸದೆ ಜೀವಾತ್ಮ ತಾ ಸಂ | ಪಾದಿಸಿದ ಸಂಚಿತ ಸುಕರ್ಮವ | ನಾದರಸಿ ಕೈಕೊಂಡು ರಕ್ಷಿಸು ನಮ್ಮನನವರತ || ೬೫ ||

ಎಂಟುಗೇಣಿನ ದೇಹ ರೋಮಗಳೆಂಟುಕೋಟಿಯು ಕೀಲ್ಗಳರವ | ತ್ತೆಂಟು ಮಾಂಸಗಳಿಂದ ಮಾಡಿದ ಮನವೊಲಿದು ||
ನೆಂಟ ನೀನಿರ್ದಗಲಿದಡೆ ಒಣ | ಹೆಂಟೆಯಲಿ ಮುಚ್ಚುವರು ದೇಹದ | ಲುಂಟೆ ಫಲ ಪುರು?ರ್ಥ ರಕ್ಷಿಸು ನಮ್ಮನನವರತ || ೬೬ ||

ಸ್ನಾನಸಂಧ್ಯಾಧ್ಯಾನಜಪತಪ | ದಾನ ಧರ್ಮ ಪರೋಪಕಾರ ನ | ಹೀನಕರ್ಮದೊಳುಲಿವನಲ್ಲದೆ ಬೇರೆ ಗತಿಯುಂಟೆ ||
ಏನು ಮಾಡಿದರೇನು ಮುಕ್ತಿಜ್ಞಾನವಿಲ್ಲದಡಿಲ್ಲ ಭಕ್ತಿಗೆ | ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ || ೬೭ ||

ಕೋಪವೆಂಬುದು ತನುವಿರಲಿ ನೆರೆ | ಪಾಪ ಪಾತಕದಿಂದ ನರಕದ | ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೇ ||
ರಾಪುಮಾಡದೆ ಬಿಡನು ಯಮನು ನಿ | ರಪರಾಧಿಯ ನೋಡಿ ಕೀರ್ತಿಕ | ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ || ೬೮ ||

ನಿನ್ನ ಸೂತ್ರದೊಳಾಡುವವು ಚೈ | ತನ್ಯ ಸಚರಾಚರಗಳೆಲ್ಲವು | ನಿನ್ನ ಸೂತ್ರವು ತಪ್ಪಿದರೆ ಮೊಗ್ಗುಪವು ಹೂಹೆಗಳು ||
ಇನ್ನು ನಮಗೆ ಸ್ವತಂತ್ರವೆಲ್ಲಿಯ | ದನ್ಯ ಕರ್ಮಸುಕರ್ಮವೆಲ್ಲವು | ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ || ೬೯ ||

ಒಡೆಯ ನೀನೆಂದರಿತು ನಾ ನೀ | ನಿಮ್ಮಡಿಯ ಭಜಿಸದೆ ದುರುಳನಾದೆನು | ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ ||
ಮಡದಿಯಾರೀ ಮಕ್ಕಳಾರೀ | ಒಡಲಿಗೊಡೆಯನು ನೀನು ನೀ ಕೈ | ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ || ೭೦ ||

ವಂಟಿಸಿದ ಮುದಮುಖರು ಕೆಲಗಲ | ರುಂಟು ರಿಪುಗಳು ದಂಟಿಸುತ ಬಲು| ಕಂಟಕದಿ ಕಾಡುವರು ಕಾಯೈ ಕಲು?ಸಂಹಾರ ||
ಬಂಟನಲ್ಲವೆ ನಾನು ದೀನರ | ನೆಂಟನಲ್ಲವೆ ನೀನು ನಿನ್ನೊಳ | ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ || ೭೧ ||

ದಂಡಧರನುಪಟಲದಿ ಮಿಗೆ ಮುಂ | ಕೊಂಡು ಮೊರೆಯಾಗುವವರ ಕಾಣೆನು | ಪುಂಡರೀಕೋದ್ಭವನ ಶಿರವನು ಕಡಿದು ತುಂಡರಿಸಿದ ||
ಖಂಡಪರಶವು ರುದ್ರಭೂಮಿಯೊ | ಳಂಡಲೆದು ತಿರುಗುವನು ನೀನು | ದ್ದಂಡ ದೇವರದೇವ ರಕ್ಷಿಸು ನಮ್ಮನನವರತ || ೭೨ ||

ಶಕ್ತಿಯೆಂಬುದು ಮಾಯೆ ಮಾಯಾ | ಶಕ್ತಿಯದು ತನುವಿನಲಿ ನೀ ನಿಜ | ಮುಕ್ತಿದಾಯಕನಿರಲು ಸುಖದುಃಖಾದಿಗಳಿಗಾರು ||
ಯುಕ್ತಿಯೊಳಗಿದನರಿತು ಮನದಿ ವಿ | ರಕ್ತಿಯಲಿ ಭಜಿಸುವಗೆ ಮುಕ್ತಿಗೆ | ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ || ೭೩ ||

ಮೂರುಗುಣ ಮೊಳೆದೋರಿತದರೊಳು | ಮೂರು ಮೂರ್ತಿಗಳಾಗಿ | ರಂಜಿಸಿ ತೋರಿ ಸೃಷ್ಟಿಸ್ಥಿತಿಲಯಂಗಳ ರಚಿಸಿ ವಿಲಯದಲಿ ||
ಮೂರು ರೂಪೊಂದಾಗಿ ಪ್ರಳಯದ | ವಾರಿಯಲಿ ವಟಪತ್ರಶಯನದಿ | ಸೇರಿದವ ನೀನೀಗ ರಕ್ಷಿಸು ನಮ್ನನನವರತ || ೭೪ ||

ನೀರಮೇಲಣ ಗುಳ್ಳೆಯಂದದಿ | ತೋರಿಯಡಗುವ ದೇಹದೀ ಸಂ | ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದಪದವಿಯ ಸೇರಿಸಕಟಾ ನಿನ್ನ ವೋಲ್ನಮ | ಗಿನ್ನಾರು ಬಾಂಧವರುಂಟು ರಕ್ಷಿಸು ನಮ್ಮನನವರತ || ೭೫ ||

ಹೊದ್ದಿ ನಿಲುವುದೆ ದರ್ಪಣದ ಮೇ | ಲುದ್ದುರುಳಿ ಬೀಳ್ವಂತೆ ನಿಮಿ?ದಿ| ಬಿದ್ದುಹೋಗುವ ಕಾಯವೀ ತನುವೆಂಬ ಪಾಶದಲಿ ||
ಬದ್ಧನಾದೆನು ಮಮತೆಯಲಿ ನೀ | ನಿದ್ದುದಕೆ ಫಲವೇನು ಭಕ್ತವಿ | ರುದ್ಧವಾಗದಪೋಲು ರಕ್ಷಿಸು ನಮ್ಮನನವರತ || ೭೬ ||

ಕೇಳುವುದು ಕಡುಕ? ಕ?ದ | ಬಾಳುವೆಯ ಬದುಕೇನು ಸುಡುಸುಡು | ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ||
ಬಾಳಬೇಕೆಂಬವಗೆ ನೆರೆ ನೀ | ಮ್ಮೂಳಿಗವ ಮಿಗೆ ಮಾಡಿ ಭಕ್ತಿಯೊ | ಳಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ || ೭೭ ||

ದೇಹಧಾರಕನಾಗಿ ಬಹುವಿಧ | ಮೋಹದೇಳಿಗೆಯಾಗಿ ಮುಕುತಿಗೆ | ಬಾಹಿರನು ವಿ?ಯಾದಿಗಳಿಗೊಳಗಾಗಿ ||
ದೇಹವೀ ಸಂಸಾರವೆನ್ನದೆ | ಮೋಹಿಸುವ ಮತಿಗೇಡಿ ಮಾನವ | ಸಾಹಸಿಯೆ ಸಟೆಮಾತು ರಕ್ಷಿಸು ನಮ್ಮನನವರತ || ೭೮ ||

ಅಳಿವ ಒಡಲನು ನೆಚ್ಚಿವಿ?ಯಂ | ಗಳಿಗೆ ಕಾತುರನಾಗಿ ಮಿಗೆ ಕಳ | ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ||
ತಿಳಿದು ಮನದೊಳು ನಿನ್ನ ನಾಮಾವಳಿಯ ಜಿಹ್ವೆಗೆ ತಂದುಪಾಪವ | ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ || ೭೯ ||

ವರು? ನೂರಾಯು?ವದರೊಳ | ಗಿರುಳು ಕಳೆದೈವತ್ತು ಐವ | ತ್ತರಲಿ ವಾರ್ಧಿಕ ಬಾಲ್ಕ ಕೌಮಾರದಲಿ ಮೂವತ್ತು ||
ಇರದೆ ಸಂದದು ಬಳಿಕ ಇಪ್ಪ | ತ್ವರು?ವದರೊಳಗಾದುದಂತಃ | ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ || ೮೦ ||

ಊರು ತನಗೊಂದಿಲ್ಲ ಹೊತ್ತ ಶ | ರೀರಗಳ ಮಿತಿಯಿಲ್ಲ ತಾ ಸಂ | ಸಚ್ಚಾರಿಸ್ಥ ದಳವಿಲ್ಲ ನುಡಿಯದ ಭಾ?ಮತ್ತಿಲ್ಲ ||
ಬೇರೆ ಹೊಸತೊಂದಿಲ್ಲ ಉಣ್ಣದ | ಸಾರವಸ್ತುಗಳಿಯತನು ಸಂ | ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ || ೮೧ ||

ಗೋಪುರದ ಭಾರವನು ಗಾರೆಯ | ರೂಪದೋರಿದ ಪ್ರತಿಮೆಯಂದದೋ | ಳೀಪರಿಯ ಸಂಸಾರಭಾರವನಾರು ತಾಳುವರು ||
ತಾ ಪರಾಕ್ರಮಿಯೆಂದು ಮನುಜನು | ಕಾಪಥವನೈದುವನು ವಿಶ್ವ | ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ || ೮೨ ||

ಬೀಜವೃಕ್ಷದೊಳಾಯ್ತು ವೃಕ್ಷಕೆ | ಬೀಜವಾರಿಂದಾಯ್ತು ಲೋಕದಿ | ಬೀಜವೃಕ್ಷ ನ್ಯಾಯವಿದ ಭೇದಿಸುವರಾರಿನ್ನು ||
ಸೋಸಿಗವ ನೀ ಬಲ್ಲೆ ನಿನ್ನೊಳು | ರಾಜಿಸುತ ಮೊಳೆದೋರುವದು ಸುರ | ರಾಜನಂದನನಮಿತ ರಕ್ಷಿಸು ನಮ್ಮನನವರತ || ೮೩ ||

ತೊಗಲು ಬೊಂಬೆಗಳಂತೆ ನಾಲಕು | ಬಗೆಯ ನಿರ್ಮಾೆಣದಲಿ ಇದರೊಳು | ನೆಗಳದೀ ಚೌ?ಷ್ಟಿ ಲಕ್ಷಣ ಜಾತಿಧರ್ಮದಲಿ ||
ಬಗೆಬಗೆಯ ನಾಮಾಂಕಿತದ ಜೀ | ವಿಗಳದೆಲ್ಲವು ನಿನ್ನ ನಾಮದಿ | ಜಗಕೆ ತೋರುತ್ತಿಹುದು ರಕ್ಷಿಸು ನಮ್ಮನನವರತ || ೮೪ ||

ಹೂಡಿದೆಲು ಮರಮುಟ್ಟು ಮಾಂಸದ | ಗೋಡೆ ಚರ್ಮದ ಹೊದಿಕೆ ನರವಿನ | ಕೂಡೆ ಹಿಂಡಿಗೆ ಬಿಗಿದ ಮನೆಯೊಳಾತ್ಮ ನೀನಿರಲು ||
ಬೀಡು ತೊಲಗಿದ ಬಳಿಕಲಾ ಸುಡು | ಗಾಳಿನಲಿ ಬೆಂದುರಿವ ಕೊಂಪೆಯ | ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ || ೮೫ ||

ಬೀಗಮುದ್ರೆಗಳಿಲ್ಲದೂರಿಗೆ | ಬಾಗಿಲುಗಳೊಂಬತ್ತು ಹಗಲಿರು | ಳಾಗಿ ಮುಚ್ಚದೆ ತೆರದಿಹುದು ಜೀವಾತ್ಮ ತಾನಿರುತ ||
ನೀಗಿ ಎಲ್ಲವ ಬಿಸುಟ್ಟು ಬೇಗದಿ | ಹೋಗುತಿಹ ಸಮಯದಲಿ ಇರುವ | ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ || ೮೬ ||

ಕೀಲು ಬಿಲಿದಿಹದೈದು ತಿರುಗುವ | ಗಾಲಿಯರಡರ ರಥಕೆ ತ್ರೈಗುಣ | ಶೀಲನೋರ್ವನು ಸಂಚರಿಸುತಿಹನಾ ರಥಾಗ್ರಹದಲಿ ||
ಕೀಲು ಕಡೆಗೊಂದೂಡಿ ಬೀಳಲು | ಕಾಲಗತಿ ತಪ್ಪುವುದು ಅದರನು | ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ || ೮೭ ||

ಬಿಗಿದ ರಕುತದ ರೋಮಕೂಪದ | ತೊಗಲ ಕೋಟೆಯ ನಂಬಿ ರೋಗಾ | ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು ||
ವಿಗಡ ಯಮನಾಳು ಬರುತಿರೆ | ತೆಗೆದು ಕಾಲನ ಬಲವ ಬಲು ಮು | ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ || ೮೮ ||

ವಾರುಣಗಳೆಂಟೆಸೆವ ನಗರಕೆ | ದ್ವಾರವೊಂಬತ್ತವಕೆ ಬಲು ಮೊನೆ | ಗಾರರಾದಾಳುಗಳ ಕಾವಲುಗಾರರನು ಮಾಡಿ ||
ಆರರಿಯದಂತರೊಳಗೆ ಹೃದ | ಯಾರವಿಂದದಿ ನೀನಿರಲು ಬರಿ | ದೂರ ನಿನಗುಂಟೆ ರಕ್ಷಿಸು ನಮ್ಮನನವರತ || ೮೯ ||

ಪೇಳಲಿನ್ನಳವಲ್ಲವೀಗೆಮ | ನಾಳುಗಳು ನೆರೆಯಂಗದೇಶವ | ಧಾಳಿಮಾಡುವರಕಟಕಟ ಸೆರೆ ಸೂರೆಗಳ ಪಿಡಿದು ||
ಕಾಳುಮಾಡುವರಿನ್ನು ತನುವಿದು ಬಾಳಲರಿಯದು ಕೋಟೆಯವರಿಗೆ | ಕೋಳುಹೋಗದ ಮುನ್ನ ರಕ್ಷಿಸು ನಮ್ಮನನವರತ || ೯೦ ||

ನಾಲಿಗೆಯು ನಾಸಿಕವು ನಯನ | ಕಪಾಲ ಪದ ಪಾಣಿಗಳ ತನುವಿನ | ಮೂಲಕರ್ತವಿನಲಿ ಪರಿಚಾರಕರು ತಾವಾಗಿ ||
ಲೀಲೆಯಿಂದಿರುತಿರ್ದ ಕಡೆಯಲಿ | ಕಾಲ ತೀರಿದ ಬಳಿಕಲದರನು | ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ || ೯೧ ||

ಸತ್ತವರಿಗಲಲೇಕೆ ತನ್ನನು ಹೊತ್ತವರು ಹೆತ್ತವಗುಗಳು ತಾ | ಸತ್ತು ಹೋಗುವರಲ್ಲದುಳಿದವರೆ ಮರುಗಲೇಕಿನ್ನು ||
ಮೃತ್ಯು ಬೆನ್ನಿನೊಲಿಹುದು ತಾವಿ | ನ್ನತ್ತು ಮಾಡುವುದೇನು ಪೂರ್ವದ | ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ || ೯೨ ||

ಮಣ್ಣು ಮಣ್ಣಿನೊಳುದಿಸಿರಲು | ಮಣ್ಣು ಗೊಂಬೆಗಳಾಗಿ ರಂಜಿಸಿ | ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ ||
ಮಣ್ಣಿನಲಿ ಬಂಧಿಸಿದ ದೇಹವ | ಮಣ್ಣುಗೂಡಿಸಬೇಡ ಜ್ಞಾನದ | ಕಣ್ಣದೃಷ್ಟಿಯನ್ನಿತ್ತು ರಕ್ಷಿಸು ನಮ್ಮನನವರತ || ೯೩ ||

ಬೀಯವಾಗುವ ತನುವಿನಲಿ ನಿ | ರ್ದಾಯಕನು ನೀನಿರ್ದು ಅತಿ ಹಿರಿ | ದಾಯ ಸಂಬಡಿಸುವರೆ ನೀನನುಕೂಲವಾಗಿರ್ದು ||
ತಾಯನಗಲಿದ ಶಿಶುವಿನಂದದಿ | ಬಾಯಬಿಡುವಂತಾಯ್ತಲೇ ಚಿಂತಾ | ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ || ೯೪ ||

ಮೊದಲು ಜನನರಿಯೆ ಮರಣಿದ ಹದನ ಕಡೆಯಲಿ ತಿಳಿಯೆ ನಾನು | ಮದ್ಯsದಲಿ ನೆರೆ ನಿಪುಣನೆಂಬುದು ಬಳಿಕ ನಗೆಗೇಡು ||
ಮೊದಲುಕಡೆ ಮಧ್ಯಗಳ ಬಲ್ಲವ | ಮದನಜನಕನು ನೀನು ನಿನ್ನಯ | ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ || ೯೫ ||

ಸಾರವಿಲ್ಲದ ದೇಹವಿದು ನಿ | ಸ್ಸಾರವಾಗಿಹ ತನುವಿನಲಿ ಸಂ | ಚಾರಿಯಾಗಿಹ ನೀನಿದ್ದು ಕಡೆಯಲಿ ತೊಲಗಿ ಹೋಗುತಲಿ ||
ದೂರ ತಪ್ಪಿಸಿಕೊಂಡು ಬರಿಯಪ | ದೂರ ಹೊರಿಸಿದೆ ಜೀವನದಲಿ ಇದ | ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ || ೯೬ ||

ಅಂಡವೆರಡುದ್ಭವಿಸಿದವು | ಬ್ರಹ್ಮಾಂಡವದರೊಪಾದಿಯಲಿ ಪಿಂ | ಡಾಂಡವೆಸೆದುದು ಸ್ಥೂಲಕಾರಣ ಸೂಕ್ಷ್ಮತನುವಿನಲಿ ||
ಅಂಡ ನಿನ್ನಯ ರೋಮಕೂಪದೊ | ಳಂಡಲೆದವಖಿಲಾಂಡವಿದು ಬ್ರ | ಹ್ಮಾಂಡನಾಯಕ ನೀನು ರಕ್ಷಿಸು ನಮ್ಮನನವರತ || ೯೭ ||

ಒಂದು ದಿನ ತನುವಿನಲಿ ನಡೆವುದು | ಭಾಸ್ಕರಸ್ವರಗಳಿಪ್ಪ | ತ್ತೊಂದು ಸಾವಿರದಾನೂರನು ಏಳುಭಾಗದಲಿ ||
ಬಂದದನು ಉಡುಚಕ್ರದಲ್ಲಿಗೆ | ತಂದು ಧಾರೆಯನೆರೆದ ಮುನಿಕುಲ | ವೃಂದಹೃದಯನು ನೀನು ರಕ್ಷಿಸು ನಮ್ಮನನವರತ || ೯೮ ||

ತೊಲಗುವರು ಕಡೆಕಡೆ ತಾ ಹೊಲೆ | ಹೊಲೆನುತ ಕಳವಳಿಸಿ ಮೂತ್ರದ | ಬಿಲದೊಳಗೆ ಬಂದಿಹುದು ಕಾಣ ಬರಿದೆ ಮನನೊಂದು ||
ಜಲದೊಳಗೆ ಮುಳುಗಿದರೆ ತೊಲಗದು | ಹೊಲಗೆಲಸವೀದೇಹದೊಳು ನೀ | ನೆಲೆಸಿರಲು ಹೊಲೆಯುಂಡೆ ರಕ್ಷಿಸು ನಮ್ಮನನವರತ || ೯೯ ||

ಬರಿದಹಂಕಾರದಲಿ ತತ್ವದ | ಕುರುಹ ಕಾಣದೆ ನಿನ್ನ ದಾಸರ | ಜರೆದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ||
ನರರು ದು?ರ್ಮದಲಿ ಮಾಡಿದ | ದುರಿತವಡಗಲು ನಿನ್ನ ನಾಮ | ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ || ೧೦೦ ||

ಎಂಜಲೆಂಜಲು ಎಂಬರಾನುಡಿ | ಎಂಜಲಲ್ಲವೆ ವಾರಿ ಜಲಚರ | ಎಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ||
ಎಂಜಲೆಲ್ಲಿಯನೆಲ್ಲಯುಂ ಪರ | ರೆಂಜಲಲ್ಲದೆ ಬೇರೆ ಭಾವಿಸ | ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ || ೧೦೧ ||

ಕೇಳುವುದು ಹರಿಕಥೆಯ ಕೇಳಲು | ಹೇಳುವುದು ಹರಿಭಕ್ತಿ ಮನದಲಿ | ತಾಳುವುದು ಹಿರಿಯದಾಗಿ ನಿನ್ನಯ ಚರಣಸೇವೆಯಲಿ ||
ಊಳಿಗವ ಮಾಡುವುದು ವಿ?ಯವ | ಹೂಳುವುದು ನಿಜಮುಕ್ತಿ ಕಾಂತೆಯ | ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ || ೧೦೨ ||

ಈ ತೆರೆದೊಳಚ್ಚುತನ ನಾಮದ | ನೂತನದಿ ವಸುಧಾತಲದಿ ವಿ | ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತದಲಿ ತಾನು ||
ನೀತಿಕೋವಿದರಾಲಿಸುವದತಿ | ಪ್ರೀತಿಯಲಿ ಕೇಳ್ದವರಿಗೆ ಅಸುರಾ | ರಾತಿ ಚೆನ್ನಿಗರಾಯ ಸುಖಗಳನೀವನನವರತ || ೧೦೩ ||

ಬಾದರಾಯಣ ಪೇಳ್ದ ಭಾರತಕಾದಿಕರ್ತನು ದಾರ ಶ್ರೀಪುರ | ದಾದಿ ಕೇಶವಮೂರ್ತಿಗಂಕಿತವಾದ ಚರಿತೆಯನು ||
ಮೇದಿನಿಯೊಳಿದನಾರು ಹೃದಯದೋ | ಳಾದರಿಸಿ ಕೇಳ್ದಪರು ಮುದದಲಿ | ಯಾದಿಮೂರುತಿ ವರಪುರಾಧಿಪನೊಲಿವನನವರತ || ೧೦೪ ||

ಕುಲಗಿರಿಗಳನ್ವಯವ ಧಾರಿಣಿ ಜಲದ ಪಾವಕ ಮರುತ ಜಲ ನಭ | ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ||
ಚಲನೆಯಿಲ್ಲದೆ ನಿನ್ನ ಚರಿತೆಯು | ಒಲಿದು ಧರೆಯೊಳಗೊಪ್ಪುವಂದದಿ | ಚಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ || ೧೦೫ ||

ನೂರುಕನ್ಯಾದಾನವನು ಭಾ | ಗೀರಥಿಸ್ನಾನವನು ಮಿಗೆ ಕೈ | ಯಾರ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ||
ಊರುಗಳನೂರಗ್ರಹಾರವ | ಧಾರೆಯೆರದಿತ್ತಂತೆ ಫಲ ಕೈ | ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವರಿಗೆ || ೧೦೬ ||

ಮೇರು ಮಂದರನಿಭಸುವರ್ಣವ ವಾರಿ | ಮಧ್ಯದೊಳಿರುವ ಅವನಿಯ | ನಾರಿಯರ ಗಾಯತ್ರಿ ಪಶುಗಳನ್ನಿತ್ತ ಫಲವಹುದು ||
ಧಾರುಣಿಯೊಳೀ ಭಕ್ತಿಸಾರವ | ನಾರು ಓದುವವರಿಗನುದಿನ | ಚಾರುವರಗಳನ್ನಿತ್ತು ರಕ್ಷಿಪನಾದಿಕೇಶವನು || ೧೦೭ ||

ಲೋಕದೊಳಗತ್ಯಧಿಕವೆನಿಸುವ | ಕಾಗಿನೆಲೆಸಿರಿಯಾದಿಕೇಶವ | ತಾ ಕೃಪೆಯೊಳಗೆ ನುಡಿದನು ಈ ಭಕ್ತಿಸಾರವನು ||
ಜೋಕೆಯಲಿ ಬರೆದೋದಿಕೇಳ್ದರ | ನಾಕುಲದಿ ಮಾಧವನು ಕರುಣಿಪ | ಶ್ರೀಕಮಲವಲ್ಲಭನು ಮಿಗೆ ಬಿಡದಾದಿಕೇಶವನು || ೧೦೮ ||

-: ಹರಿಭಕ್ತಿಸಾರ ಸಂಪೂರ್ಣವು:-

ಮಂಗಳ ಶ್ಲೋಕ
ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ
ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ ಮಂಗಳಂ ದ್ರೌಪದಿಯ ಪೊರೆದಗೆ
ಮಂಗಳಂ ಧ್ರುವರಾಜಗೊಲಿದಗೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.