Purnapramati Jaatre 2013-14: Day 2

Purnapramati Jaatre 2013-14: Day 2

Monday, January 13th, 2014

ಪೂರ್ಣಪ್ರಮತಿ ಉತ್ಸವ ೨೦೧೩-೧೪ ಜಾತ್ರೆ – ೨ ದಿನಾಂಕ: ೨೬.೧೨.೨೦೧೩ ಸ್ಥಳ: ಎನ್.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ: ಬೆಳಗ್ಗೆ ೯.೦೦-ಸಂಜೆ ೫.೩೦ ಎರಡನೆಯ ದಿನದ ಜಾತ್ರೆಯಲ್ಲಿ ಹುಲ್ಲುಗಾವಲು, ಸಂಖ್ಯೆಗಳಲ್ಲಿ ಜೀವೋ ಜೀವಸ್ಯ ಜೀವನಮ್, ಹಿಮಾಲಯದ ಗಂಗಾ, ಪ್ರಾಚೀನ ಸಂಸ್ಕೃತಿಯಲ್ಲಿ ಜೀವೋ ಜೀವಸ್ಯ ಜೀವನಮ್ ವಿಷಯಗಳ ಕುರಿತು ವಸ್ತುಪ್ರದರ್ಶನವಿತ್ತು. ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂತರ್ ಶಾಲಾ ಚಟುವಟಿಕೆಗಳು ಮಕ್ಕಳಲ್ಲಿ ವಿಷಯಾಧಾರಿತ ಚಿಂತನೆಯನ್ನು ಬೆಳೆಸಲು ರೂಪುಗೊಂಡಿದ್ದವೇ ಹೊರತಾಗಿ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಅಲ್ಲ. ಹಾಗಾಗಿ ಈ ಚಟುವಟಿಕೆಗಳಲ್ಲಿ ವಿಜೇತರು, ಸೋತವರು ಎಂಬ ವಿಭಾಗಗಳಿರಲಿಲ್ಲ. ಎಲ್ಲರಿಗೂ ಪ್ರಶಸ್ತಿ ಪತ್ರ-ಪುಸ್ತಕವನ್ನು ನೀಡಲಾಯಿತು. ಈ ಬಾರಿ ಪತ್ರಿಕಾ ಗೋಷ್ಠಿ ಮತ್ತು ವರದಿ ತಯಾರಿ ಒಂದು ವಿಭಿನ್ನ ಪ್ರಯೋಗವಾಗಿತ್ತು. ಹಲವು ಶ್ರೇಷ್ಠ ಪತ್ರಿಕಾವರದಿಗಾರರನ್ನು ನಾವು ಕಂಡಿದ್ದೇವೆ. ಅವರ ಬೆಳವಣಿಗೆಯ ಹಂತಗಳನ್ನು ತಿಳಿದುಕೊಳ್ಳುವ ಅವಕಾಶವಾಗಿರುವುದಿಲ್ಲ. ಎಷ್ಟೋ ಮಂದಿಗೆ ವಿಷಯ ಅರ್ಥವಾದರೂ ಶುದ್ಧ ಭಾಷೆ ಇರುವುದಿಲ್ಲ, ಭಾಷೆ ಚೆನ್ನಾಗಿ ಬಂದರೂ ವಿಷಯವನ್ನು ಗ್ರಹಿಸುವ, ಚೆನ್ನಾಗಿ ಪ್ರಸ್ತುತ ಪಡಿಸುವ ಸಾಮರ್ಥ್ಯವಿರುವುದಿಲ್ಲ. ಇವೆಲ್ಲದರ ಮೇಳೈಸುವಿಕೆ ಒಬ್ಬ ಉತ್ತಮ ಬರಹಗಾರನನ್ನು ಸೃಷ್ಟಿಸುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಬರವಣಿಗೆ ಮತ್ತು ವಿಷಯಗ್ರಹಣೆ, ಪ್ರಶ್ನಿಸುವ ವಿಧಾನಗಳನ್ನು ತಿಳಿಸುವ ಸಲುವಾಗಿ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ನಾಗೇಶ್ ಹೆಗಡೆ ಮತ್ತು ಅನಿತಾ ಪೈಲೂರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗುಂಡ್ಯಾ ಅಣೆಕಟ್ಟಿನ ಬಗ್ಗೆ ಮಕ್ಕಳಿಗೆ ವಿಷಯ ಪ್ರಸ್ತಾಪಿಸಿದರು, ಮಕ್ಕಳು ಪ್ರಶ್ನಿಸಿತ್ತಾ ಹೋದರು. ಅತಿಥಿಗಳು ಮಕ್ಕಳ ಉತ್ಸಾಹ ಮತ್ತು ಒಳ್ಳೆಯ ಚಿಂತನೆಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಿ ಖುಷಿಪಟ್ಟರು. ಉತ್ತರಾಖಂಡದ ಜಲಪ್ರಳಯವನ್ನು ಅದರ ಕಾರಣಗಳನ್ನು ಚರ್ಚಿಸುವ ಸಲುವಾಗಿ ಅಂತರ್ ಶಾಲಾ ಮಟ್ಟದ ಗೀತ ರೂಪಕವನ್ನು ಯೋಜಿಸಲಾಯಿತು. ಹಿಮಾಲಯದ ಗಂಗೆ ವಿಷಯವಾಗಿ ಮಕ್ಕಳ ತಂಡವನ್ನು ತಯಾರು ಮಾಡಿದ ನಮ್ಮ ಶಾಲೆಯ ಅಧ್ಯಾಪಕರು ಹೊಸದೊಂದು ಹಾಡನ್ನು ರಚಿಸಿ, ಸಂಗೀತ ಅಧ್ಯಾಪಕರೊಡಗೂಡಿ ರಾಗ ಸಂಯೋಜನೆಯನ್ನೂ, ನೃತ್ಯ ಅಧ್ಯಾಪಕರೊಡಗೂಡಿ ಹಾಡಿಗೆ ತಕ್ಕ ಹೆಜ್ಜೆಗಳನ್ನು ತಯಾರು ಮಾಡಿಸಿದರು. ದೇವದೇವನ ಅಂಗಜಾತಳ ಮಂಗಳಾಂಗಳ  ಭಂಗರಹಿತಳ ದೇವಗಂಗೆಯ  ಕಥೆಯ  ಕೇಳಿರಿ ಭಾವುಕರು ನೀವೆಲ್ಲರು… ಎಂದು ಮುಂದುವರೆಯುವ ಈ ಹಾಡು ಸುಮಾರು ೧೧ ನಿಮಿಷಗಳದ್ದು. ಉತ್ತರಾಖಂಡದಲ್ಲಿ ನಡೆಯುತ್ತಿರುವ ಅಣೆಕಟ್ಟುಗಳು, ಲೆಕ್ಕವಿಲ್ಲದೆ ಹೆಚ್ಚುತ್ತಿರುವ ವಿದ್ಯುತ್ ಯೋಜನೆಗಳು, ಹೋಟೇಲ್‌ಗಳು, ಕಾರ್ಖಾನೆಗಳ ನಿರ್ಮಾಣವನ್ನು ನಿಲ್ಲಿಸುವಂತೆ, ಧಾರೀ ದೇವಿ ಮಂದಿರವನ್ನು ಸ್ಥಳಾಂತರಗೊಳಿಸಿದಕ್ಕಾಗಿ ಎದ್ದು ಬಂದ ಗಂಗೆಯ ರೌದ್ರ ನರ್ತನವನ್ನು ತೋರಿಸುವ ಈ ಗೀತರೂಪಕ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಖನಿಜಗಳ ನಂತರ ಅತಿ ಹೆಚ್ಚು ಗಣಿಗಾರಿಕೆ ನಡೆಯುತ್ತಿರುವುದು ಮರುಳಿಗಾಗಿ. ಮರುಳು ಸಾಗಾಣಿಕೆಯನ್ನು, ಅದರ ಬಗೆಗೆ ಅರಿವು ಮೂಡಿಸುವ ಸಲುವಾಗಿ ನಾಗೇಶ್ ಹೆಗಡೆ ಅವರು ರಚಿಸಿದ್ದ ಮರುಳು ನಾಟಕವನ್ನು ಪ್ರದರ್ಶಿಸಲಾಯಿತು. ಹುಲ್ಲುಗಾವಲಿನ ಪ್ರಾಮುಖ್ಯತೆಯನ್ನು ತೋರಿಸುವ ಗೀಗೀಪದವನ್ನು ನಮ್ಮ ಶಾಲೆಯ ಅಧ್ಯಾಪಕರೇ ರಚಿಸಿ ಮಕ್ಕಳಿಗೆ ತರಬೇತಿ ನೀಡಿದ್ದರು. ಜಾತ್ರೆಯ ದೆಸೆಯಿಂದ ಹಲವು ಹೊಸ ನಾಟಕ, ಹಾಡಿನ ರಚನೆಗಳ ಸಾಧ್ಯವಾಯಿತು. ಹೊಸ ಹೊಸ ಪ್ರಯೋಗಗಳಿಗೆ ಪೂರ್ಣಪ್ರಮತಿ ತೆರೆದ ಪ್ರಯೋಗಾಲಯವೇ ಆಗಿದೆ. ನಮ್ಮ ಪ್ರಯೋಗಾಲಯವನ್ನು ಕುರಿತು ಆಗಮಿಸಿದ್ದ ಅತಿಥಿಗಳ ಅಭಿಪ್ರಾಯವನ್ನು ಕೇಳೋಣ: ಡಾ. ಅಬಿ ತಮೀಮ್ ವನಕ್ (Fellow, ATREE) I am quite happy to see so many different stalls, so many different items displayed here, being child we did not even hear about ecology, we did about forest and wild life. It is really excellent . So much interest from all these children and from the teachers about neglected eco system, grass land, wet land and so on. I would like congratulate all teachers and little participants putting together an excellent show. I do help and participate in Purnapramati activities in future. ಪ್ರೊ. ವಿದ್ಯಾನಂದ ನಂಜುಂಡಯ್ಯ (CES, IISc) ಇಲ್ಲಿಗೆ ಬಂದು ತುಂಬಾ ಸಂತೋಷವಾಯಿತು, ಮಕ್ಕಳು ತೋರಿಸಿದ ವಿಷಯಗಳು, ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯವಾಗುತ್ತಿದೆ. ಈ ವಯಸ್ಸಿನ ಮಕ್ಕಳು ಇಷ್ಟೆಲ್ಲ ಮಾಡಲು ಸಾಧ್ಯವೇ ಎಂದು. ಮಕ್ಕಳು ಎಷ್ಟು ಚೆನ್ನಾಗಿ ಇಲ್ಲಿ ಭಾಗವಹಿಸಿದ್ದಾರೋ ಹಾಗೇ ಅಧ್ಯಾಪಕರೂ ಮಾಡಿರುವುದು ಕಂಡುಬರುತ್ತಿದೆ. ಇದನ್ನೆಲ್ಲಾ ಏರ್ಪಾಡು ಮಾಡಲು ಬಹಳ ಕಷ್ಟಪಟ್ಟಿರಬೇಕು. ನನಗೆ ಬಹಳ ಇಷ್ಟವಾಯಿತು. ಇಲ್ಲಿ ಕರೆದುದ್ದಕ್ಕೆ ಧನ್ಯವಾದಗಳು. ಕೃಷ್ಣ ಶೆಟ್ಟಿ (Ex-chairman, Karnataka Chitrakala Academy) ನಿನ್ನೆಯಿಂದ ಇಲ್ಲಿ ಪ್ರಕೃತಿ, ಅದರ ಜೊತೆ ನಾವು ಹೇಗಿರಬೇಕು ಎಂಬ ವಿಷಯವನ್ನು ಮಕ್ಕಳು ಬಹಳ ಚೆನ್ನಾಗಿ ತೋರಿಸುತ್ತಿದ್ದಾರೆ. ನಿಸರ್ಗ ರಕ್ಷಣೆಯಲ್ಲಿ ಚಿತ್ರಕಲೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಿತ್ರ ಬರೆಯಿಸಿದ್ದಾರೆ. ಮಕ್ಕಳು ಬರೆದ ಚಿತ್ರ ನೋಡಿ ಬಹಳ ಸಂತೋಷವಾಯಿತು. ಚಿಕ್ಕಮಕ್ಕಳಿಗೆ ಪ್ರಕೃತಿಯ ಬಗ್ಗೆ ಇರುವ ಕಾಳಜಿಯನ್ನು ಚಿತ್ರದ ಮೂಲಕ ತೋರಿಸಿದ್ದಾರೆ. ಮುಂದೆ ಈ ಕಾಳಜಿ ಜೀವನದಲ್ಲಿ ನಿರಂತರವಾಗಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಶ್ರೀಮತಿ ಭಾರ್ಗವಿ ನಾರಾಯಣ (Theatre Performer and Director) ಮಕ್ಕಳು ಎಷ್ಟು ಚೆನ್ನಾಗಿ ಪ್ರಕೃತಿ, ಕಾಡು, ಪ್ರಾಣಿಗಳ ಬಗ್ಗೆ ವಿವರಣೆ ಕೊಡುತ್ತಿದ್ದಾರೆ. ಈಗ ಅರ್ಥವಾದಷ್ಟನ್ನು ಹೇಳಿದ್ದರೂ ನಂತರದ ದಿನಗಳಲ್ಲಿ ಅದು ಮನವರಿಕೆ ಆಗುತ್ತದೆ. ಚಿಕ್ಕವಯಸ್ಸಿನಲ್ಲಿ ಇವುಗಳ ಪ್ರಾಮುಖ್ಯತೆ ತಿಳಿದರೆ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ. ದೊಡ್ಡವರು ಏನೋ ಕರ್ತವ್ಯ ಎಂಬ ರೀತಿಯಲ್ಲಿ ಹೇಳುತ್ತೇವೆ, ಅದರೆ ಮಕ್ಕಳು ಮುಗ್ಧವಾಗಿ ಪೂರ್ಣವಾಗಿ ನಂಬಿ ಮಾತನಾಡುತ್ತಿರುತ್ತಾರೆ. ಅವರು ಹೇಳಿದ್ದನ್ನು ಕೇಳಿದರೆ ನಮಗೂ ನಂಬಿಕೆ ಬರುತ್ತದೆ. ಮಕ್ಕಳು ಹೇಳಿದ್ದನ್ನು ಕೇಳಬೆಕು ಎನ್ನುವಷ್ಟು ಮುದ್ದಾಗಿ ಹೇಳಿದರು. ಯಾವ ಗೀತರೂಪಕ ಚೆನ್ನಾಗಿತ್ತು, ಯಾವುದು ಚೆನ್ನಾಗಿರಲಿಲ್ಲ ಎಂಬುದಕ್ಕಿಂತ ತಮ್ಮನ್ನು ತೊಡಗಿಸಿಕೊಂಡು ಅಷ್ಟು ಆಸಕ್ತಿಯಿಂದ ತೋರಿಸುತ್ತಿರುವುದು ಮುಖ್ಯ. ಈ ಕಾರ್ಯಕ್ರಮವೇ ಉತ್ತಮವಾದುದು. ಮಕ್ಕಳಿಗಷ್ಟೇ ಅಲ್ಲ, ಎಂತಹವರಿಗೂ ಸ್ವಲ್ಪ ಕಾಲವಾದರೂ ಇದರ ಬಗ್ಗೆ ಯೋಚಿಸಬೇಕು ಎನಿಸುತ್ತದೆ. ಮೊದಲನೆಯದಾಗಿ ಪ್ರಜ್ಞಾಭಾರತಿ, ಮಲ್ನಾಡು ಶಾಲೆಯವರು ತಮ್ಮ ರೂಪಕವನ್ನು ತೋರಿಸಿದರು. ಹೆಚ್ಚು ಮನದಟ್ಟಾಗುವಂತೆ ಹೇಳಲು ಸಾಧ್ಯವಾಗಲಿಲ್ಲ ಎನಿಸಿತು. ಮಾತುಗಳೂ ಸರಿಯಾಗಿ ಕೇಳುತ್ತಿರಲಿಲ್ಲ. ನಿರೂಪಣೆಯನ್ನು ಪರದೆ ಹಿಂದಿನಿಂದ ಹೇಳಿದರು. ಅದು ಸೂಕ್ತವಲ್ಲ. ಸೂತ್ರಧಾರನಂತೆ ಪರದೆಯ ಮುಂದೆ ಬಂದು ಹೇಳಬೇಕು. ಎರಡನೆಯದಾಗಿ ಪೂರ್ಣಪ್ರಮತಿ ಶಾಲೆಯ ರೂಪಕ. ಬಹಳ ಅಚ್ಚುಕಟ್ಟಾಗಿ, ಸ್ಪಷ್ಟವಾಗಿ ಏನು ಹೇಳುತ್ತಿದ್ದಾರೆ ಎಂಬುದು ತಿಳಿಯಿತು. ಅನಿಸಿದಷ್ಟೇ ಅಲ್ಲ. ಒಂದು ಕ್ಷಣ ಬೇಸರವಾಯಿತು. ಒಳ್ಳೆಯ ವೇಷಭೂಷಣವಿತ್ತು. ಚೆನ್ನಾಗಿ ಅಭ್ಯಾಸಮಾಡಿರುವುದು ಕಂಡುಬಂದಿತು. ಹಾಡು ಬಹಳ ಅರ್ಥಪೂರ್ಣವಾಗಿತ್ತು. ಬೇಂದ್ರೆ-ಕುವೆಂಪು ಅವರ ಪರಿಣಾಮ ಇಲ್ಲಿ ಕಾಣುತ್ತಿತ್ತು. ಹಾಡು ಹೇಳಿದವರೂ ಬಹಳ ಚೆನ್ನಾಗಿ ಹಾಡಿದರು. ಮನಸ್ಸಿಗೆ ತಟ್ಟಿತು ಅದು. ತುಂಬ ಸಂತೋಷವಾಯಿತು. ವೇದಿಕೆಯನ್ನೂ ಬಹಳ ಚೆನ್ನಾಗಿ ಬಳಸಿಕೊಂಡರು. ಇದರ ಹಿಂದಿರುವ ಅಧ್ಯಾಪಕರ-ಮಕ್ಕಳ ನಿಷ್ಠೆ ಕಾಣುತ್ತಿತ್ತು. ಚಿಮಂಗಳ ಶಾಲೆಯವರು ಚೆನ್ನಾಗಿ ಅವರು ತಿಳಿಸಬೇಕೆಂದುಕೊಂಡದ್ದನ್ನು ತಿಳಿಸಿದರು. ಪ್ರೌಢಶಾಲೆ, ಬಸವನಗುಡಿ ಅವರು ಮಾಡಿದ್ದು ಬಹಳ ಸ್ತಬ್ಧ ಎನಿಸಿತು. ಒಂದೆಡೆ ನಿಂತು ಭಾಷಣ ಮಾಡಿದಂತಿತ್ತು. ಯಾವುದೇ ಚಲನೆ, ಸಂಭಾಷಣೆಯಲ್ಲಿ ಚುರುಕುತನವಿರಲಿಲ್ಲ. ಶಿವನಹಳ್ಳಿಯಿಂದ ಬಂದಂತಹ ಶಾಲೆ ಅವರು ಉತ್ತರಖಂಡದ ಪ್ರವಾಹದ ಬಗ್ಗೆ ಹೆಚ್ಚಗೆ ಏನೂ ಹೇಳಲಿಲ್ಲ. ಪುಣೆಯ ಮಕ್ಕಳು ಮೈಕನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ವೇಷಭೂಷಣ, ರಂಗದ ಮೇಲಿನ ಚಲನೆ ಚೆನ್ನಾಗಿತ್ತು. ಯಾವುದೇ ಪ್ರತಿಕ್ರಿಯೆಗಳಿದ್ದರೂ ಮಕ್ಕಳನ್ನು ತಿದ್ದಲು ಮಾತ್ರ. ಮಕ್ಕಳ ಪ್ರಯತ್ನಕ್ಕೆ ನಾನು ಧನ್ಯವಾದ ಹೇಳುತ್ತೆನೆ. ಮಥುರ ಕಲೌನಿ(Author, Playwright and Director) Such a wonderful programe. Very hard to say anything. I went throught the exhibition, children deep understanding, they explained both in Kannada and English so well, problems are faced in Uttarakhand explaind verry well,  It is very difficult to judge their program. Intensity of this program is very high. You should select some 10-15 children send them Uttarakhand, let them see there, how plastic and etc are dump into the water. Once upon a time it was such a pure place that no where in the country. Children tried to show that in their performance. Thanks for inviting me here.   For more photos click here ಅನಿತಾ ಪೈಲೂರು (ಪತ್ರಕರ್ತರು) ನಾನೊಂದು ಸಣ್ಣ ಕತೆಯನ್ನು ಹೇಳುವ ಮೂಲಕ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಸಿ.ವಿ.ರಾಮನ್ ಅವರು ಬೆಂಗಳೂರಿನಲ್ಲಿ ಬಹಳ ದಿನ ಕೆಲಸ ಮಾಡಿದ್ದರು. ಅಲ್ಲಿಗೆ ಹೋಮಿಬಾಬಾ ಮತ್ತು ವಿಕ್ರಮ್ ಸಾರಾಬಾಯಿ ಬಂದರು. ಏನೋ ಚರ್ಚೆ ಮಾಡುತ್ತಿರುವಾಗ, ಸಿ.ವಿ. ರಾಮನ್ ಅವರು ಎದ್ದು ಹೊರಗೆ ಹೋಗುತ್ತಾರೆ. ಅರ್ಧಗಂಟೆಯಾದರೂ ಮರಳಿ ಬರುವುದೇ ಇಲ್ಲ. ನಂತರ ಅವರು ಬರುತ್ತಾರೆ. ಇವರಿಬ್ಬರಿಗೂ ಆಶ್ಚರ್ಯ. ಯಾಕಾಗಿ ಹೊರಗೆ ಹೋಗಿದ್ದರು. ‘ನಾವಿಬ್ಬರೂ ಇಲ್ಲೇ ಇದ್ದೆವಲ್ಲ ನೀವು ಏಕೆ ಹೊರಗೆ ಹೋಗಿದ್ದಿರಿ’ ಎಂದು ಕೇಳಿದರು. ಅವರು ಹೇಳಿದರು ‘ನಿಮಗೆ ಹೊರಗೆ ಏನೂ ಶಬ್ದ ಕೇಳಿಸಲೇ ಇಲ್ಲವೆ? ಇವರಿಬ್ಬರೂ ‘ಇಲ್ಲ, ನಮಗೇನು ಕೇಳಿಸಲಿಲ್ಲ’ ಎನ್ನುತ್ತಾರೆ. ಸಿ.ವಿ.ರಾಮನ್ ಅವರು ‘ಅಲ್ಲೊಂದಷ್ಟು ಮಕ್ಕಳು ಬಂದಿದ್ದರು. ಅವರಲ್ಲಿ ಯಾರಾದರೂ ವಿಜ್ಞಾನಿ ಸಿಗುತ್ತಾರೇನೋ ಎಂದು ನೋಡುತ್ತಿದ್ದೆ’ ಎಂದು ಹೇಳುತ್ತಾರೆ. ಇವರು ‘ಹಾಗಾದರೆ ನಾವಿಬ್ಬರೂ ಒಳ್ಳೆಯ ವಿಜ್ಞಾನಿಗಳಲ್ಲವೆ? ನಮ್ಮನ್ನು ಏಕೆ ಪರಿಗಣಿಸಲಿಲ್ಲ’ ಎಂದು ಕೇಳಿದಾಗ ‘ಒಲಿಂಪಿಕ್ಸ್‌ಗೆ ಯಾರಾನ್ನಾದರೂ ತಯಾರು ಮಾಡಬೇಕಿದ್ದರೆ ೫೦ ವರ್ಷ ದಾಟಿದವರನ್ನು ತಯಾರು ಮಾಡುವುದಿಲ್ಲ ಎಳೆಯ ವಯಸ್ಸಿನಲ್ಲಿಯೇ ಹುಡುಕಬೇಕು ಅವರನ್ನು’ ಎನ್ನುತ್ತಾರೆ. ನಾಗೇಶ್ ಹೆಗಡೆ ಅವರು ಪುಟ್ಟ ಮಕ್ಕಳ ಜೊತೆ ನಡೆಸಿದ ಸಂವಾದ ನೋಡಿ ಈ ಕತೆ ಹೇಳಬೇಕು ಎನಿಸಿತು. ಪತ್ರಕರ್ತರನ್ನು ಎಳವೆಯಲ್ಲಿಯೇ ಹುಡಕಬೇಕು. ನಿಜವಾದ ತರಬೇತಿ ನೀಡಬೇಕು ಎಂದರು. ಪತ್ರಿಕಾ ಗೋಷ್ಠಿ ಬಹಳ ವಿಶಿಷ್ಠವಾದ ಕಾರ್ಯಕ್ರಮವಾಗಿತ್ತು. ಗುಂಡ್ಯಾ ಜಲವಿದ್ಯುತ್ ಯೋಜನೆಯನ್ನು ಕುರಿತು ನಾಗೇಶ್ ಹೆಗಡೆ ಅವರು ಮೊದಲಿಗೆ ಪ್ರಸ್ತಾವ ಇಟ್ಟರು. ಅದಕ್ಕಿಂತ ಮೊದಲು ಪತ್ರಕರ್ತರು ಯಾವ ರೀತಿ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿದ್ದರು. ನಂತರ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ನಿಜಕ್ಕೂ ಅಚ್ಚರಿಯಾಯಿತು. ಗುಂಡ್ಯ ಜಲವಿದ್ಯುತ್ ಯೋಜನೆ ಎಂಬುದು ದೊಡ್ಡವರಿಗೂ ನಿಲುಕದ ವಿಷಯ. ಸಾಕಷ್ಟು ಹೋಮ್ ವರ್ಕ್ ಮತ್ತು ವಿಷಯ ಜ್ಞಾನ ಕೂಡ ಬೇಕು ಪ್ರಶ್ನೆಗಳನ್ನು ಕೇಳಲು. ಮಕ್ಕಳು ಬಹಳ ಚೆನ್ನಾಗಿ ಪ್ರಶ್ನೆಗಳನ್ನು ಕೇಳಿದರು. ನಾಗೇಶ್ ಹೆಗಡೆ ಅವರು ವಿದ್ಯುತ್ ಸಚಿವರಾಗಿ ವಿಷಯವನ್ನು ಪ್ರಸ್ತಾಪಿಸಿದ್ದರು. ಅವರ ಮೊದಲ ಪ್ರಶ್ನೆ ಪ್ರಕೃತಿ ಜೊತೆ ನೀವೇನು ಆಟ ಆಡ್ತಾ ಇದ್ದೀರಾ? ಈ ಅಣೆಕಟ್ಟನ್ನು ಕಟ್ಟುವುದರಿಂದ ಅಲ್ಲಿರುವ ಪ್ರಾಣಿಗಳಿಗೆ, ಪ್ರಕೃತಿಗೆ ಏನು ಪ್ರಯೋಜನ? ನಗರದಲ್ಲಿ ಜನರಿದ್ದಾರೆ ಅಂದ ಮಾತ್ರಕ್ಕೆ ಅಲ್ಲಿರುವ ಜೀವ ವೈವಿಧ್ಯತೆಯನ್ನು ಕಡೆಗಣಿಸಲು ಸಾಧ್ಯವೇ? ಅದರ ಬದಲು ಪರ್ಯಾಯ ವಿದ್ಯುತ್ ಯೋಜನೆಗಳನ್ನು ಏಕೆ

Purnapramati Jaatre 2013-14: Day 1

Purnapramati Jaatre 2013-14: Day 1

Monday, January 13th, 2014

ಜಾತ್ರೆ ೧ ದಿನಾಂಕ:     à³¨à³«/೧೨/೨೦೧೩ ಸ್ಥಳ:         à²Žà²¨à³.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ:     à²¬à³†à²³à²—್ಗೆ ೯.೦೦ – ಸಂಜೆ ೫.೦೦ ‘ಜೀವೋ ಜೀವಸ್ಯ ಜೀವನಮ್’ ವಿಷಯವನ್ನು ಆಧರಿಸಿ ಎಲ್ಲಪ್ಪ ರೆಡ್ಡಿ ಮತ್ತು ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇಡೀ ಉತ್ಸವದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ೧೯/೧೨/೨೦೧೩ರಂದು ಶುಭ ಚಾಲನೆಯೂ ದೊರಕಿತ್ತು. ಡಿಸೆಂಬರ್ ೨೫ರಂದು ಜಾತ್ರೆಯ ಮೊದಲ ದಿನ. ಹಿಂದಿನ ದಿನವೇ ವಸ್ತುಪ್ರದರ್ಶನಕ್ಕೆ ಬೇಕಾದಂತೆ ಆವರಣವನ್ನೆಲ್ಲಾ ಅಣಿಗೊಳಿಸಿದೆವು. ಬಯಲುರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅಂತರ್ ಶಾಲಾ ಚಟುವಟಿಕೆಗಳು, ವಸ್ತುಪ್ರದರ್ಶನಗಳನ್ನು ನಡೆಸಲು ವಿಭಿನ್ನವಾದ ತಯಾರಿಯೇ ಬೇಕು. ಗಾಳಿ, ಬೆಳಕು, ಮಳೆ, ಚಳಿಗಳಿಗೆ ಮೈಯ್ಯೊಡ್ಡಿ ವಸ್ತುಪ್ರದರ್ಶನಕ್ಕೆ ತಯಾರಾದೆವು. ಜಾತ್ರೆಯ ದಿನ ಬೆಳಗಿನಿಂದಲೇ ಮಕ್ಕಳು ವಿಭಿನ್ನ ವೇಷ-ಭೂಷಣಗಳೊಂದಿಗೆ ಪೋಷರೊಂದಿಗೆ ಆಗಮಿಸತೊಡಗಿದರು. ರಾಜಸ್ಥಾನ, ಪುಣೆ, ಮಲೆನಾಡು, ಚಿಕ್ಕಬಳ್ಳಾಪುರ, ಧಾರವಾಡ, ಶಿವನಹಳ್ಳಿ ಮತ್ತು ಬೆಂಗಳೂರಿನ ವಿವಿಧ ಶಾಲೆಗಳ ಮಕ್ಕಳು-ಅಧ್ಯಾಪಕರು ಜಾತ್ರೆಯಲ್ಲಿ ಭಾಗವಹಿಸಲು ನಮ್ಮೊಂದಿಗಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಆರ್. ಲಕ್ಷ್ಮೀನಾರಾಯಣ (Chief Endowment office, Azim Premji Foundation) ಜಿ.ವಿ.  ರೆಡ್ಡಿ (ಸಂಸ್ಥಾಪಕರು, ಸನಾತನ ಪಬ್ಲಿಷರ್), ಡಾ. ಸಂಜೀವ್ ಕುಲಕರ್ಣಿ (ಅಧ್ಯಕ್ಷರು, ಬಾಲಬಳಗ, ಧಾರವಾಡ), ಶ್ರೀಮತಿ ವಿಜಯಲಕ್ಷ್ಮೀ (ಮುಖ್ಯಸ್ಥರು, ತೀರ್ಥಹಳ್ಳಿ ಪ್ರೌಢಶಾಲೆ), ಮಥುರ ಕಲೌನಿ (ರಂಗನಿರ್ದೇಶಕರು) ಡಾ.ಆರ್.ನಾಗೇಂದ್ರನ್ (ಹಸಿರು ನ್ಯಾಯಾಲಯ), ಡಾ.ಆರ್.ಉಮಾಶಂಕರ್ (ಕೃಷಿ ವಿಶ್ವವಿದ್ಯಾಲಯ) ಡಾ. ಹರೀಶ್ ಭಟ್ (ಪರಿಸರ ತಜ್ಞರು, ಐ.ಐ.ಎಸ್.ಸಿ), ಪೋ.ಕೆ.ಎಸ್.ಕಣ್ಣನ್ (ಸಂಸ್ಕೃತ ವಿಸ್ವಾಂಸರು), ಡಾ. ಎಂ.ಬಿ. ಕೃಷ್ಣ (ವೈದ್ಯರು), ಶ್ರೀಮತಿ ಗೌರಿ ದತ್ತು (ಪ್ರಾಂಶುಪಾಲರು, ಅಭಿನಯ ತರಂಗ), ಆರ್.ಹೆಚ್.ಸಾವ್ಕಾರ್ (Secretary,  Geological Society of India) ನಮ್ಮವರೇ ಆದ ನಾಗೇಶ್ ಹೆಗಡೆ, ಪ್ರಮೋದ್ ಶಿಗ್ಗಾಂವ್ ಹೀಗೆ ಹಿರಿಯರ ದಂಡೇ ಜಾತ್ರೆಯಲ್ಲಿ ನೆರೆದಿತ್ತು. ಈ ಬಾರಿಯ ವಿಶೇಷವೆಂದರೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತಂದದ್ದು. ಹುಲಿವೇಷ, ಕೋಲಾಟ, ಹಲವು ಪ್ರಾಣಿಗಳ ವೇಷ, ಡಂಬಲ್ಸ್, ಜೀವೋ ಜೀವಸ್ಯ ಜೀವನಮ್ ಎಂಬ ವಾಕ್ಯವನ್ನು ಹೊತ್ತ ಮೂರು ಮಡಿಕೆಗಳು ಹೀಗೆ ಹಲವು ತಂಡಗಳ ಮಕ್ಕಳು ಚಂಡೆಯ ವಾದ್ಯಕ್ಕೆ ಹೆಜ್ಜೆ ಹಾಕುತ್ತಾ ಅತಿಥಿಗಳನ್ನು ಜಾತ್ರೆಗೆ ಬರಮಾಡಿಕೊಂಡರು. ದೀಪಪ್ರಜ್ವಾಲನೆಯ ನಂತರ ಪ್ರಾರ್ಥಮೆಯೊಂದಿಗೆ ಜಾತ್ರೆಗೆ ಔಪಚಾರಿಕ ಚಾಲನೆ ಸಿಕ್ಕಿತು. ಮುಂದೆ ಅತಿಥಿಗಳು ಅಮೃತ ಮಹಲ್ ಕಾವಲ್, ಪಶ್ಚಿಮ ಘಟ್ಟಗಳು, ಜೈವಿಕ ಸಂಬಂಧಗಳು, ಪ್ರಾಚೀನ ಸಾಹಿತ್ಯದಲ್ಲಿ ಜೀವೋ ಜೀವಸ್ಯ ಜೀವನಮ್, ವನ್ಯಜೀವಿ ವ್ಯವಸ್ಥೆ, ಬುಡಕಟ್ಟು ಜನಾಂಗ ಮಳಿಗೆಗಳಿಗೆ ಭೇಟಿಕೊಟ್ಟರು. ಬೆಳಗಿನ ಅವಧಿಗೆ ಮೂರು, ಮಧ್ಯಾಹ್ನದ ಅವಧಿಗೆ ಮೂರು ವಿಷಯಗಳನ್ನು ಆಧರಿಸಿ ಜಾತ್ರೆಯು ನಡೆಯಿತು. ಮಕ್ಕಳು ತಾವು ತಯಾರಿಸಿದ ಪ್ರಾತ್ಯಕ್ಷಿಕೆಗಳನ್ನು, ನಕ್ಷೆಗಳನ್ನು ಆಯಾ ಕ್ಷೇತ್ರದಲ್ಲಿ ವಿಶೇಷ ಕೆಲಸ ಮಾಡಿರುವ ಅತಿಥಿಗಳಿಗೆ ವಿವರಿಸಿದರು. ಅದೊಂದು ತೆರೆದ ತರಗತಿಯೇ ಆಗಿತ್ತು. ಅತಿಥಿಗಳು ಮಕ್ಕಳು ತಿಳಿದ ವಿಷಯಗಳನ್ನು ತಿದ್ದುತ್ತಾ ಮತ್ತಷ್ಟು ಹೊಸ ವಿಷಯಗಳನ್ನು ತಿಳಿಸುತ್ತಾ, ಕಿರಿವಯಸ್ಸಿನಲ್ಲೇ ಪ್ರಕೃತಿಯ ಬಗ್ಗೆ ಇಷ್ಟು ಜಾಗೃತಿ ಹೊಂದಿರುವುದನ್ನು ಅಚ್ಚರಿಯಿಂದ ಮೆಚ್ಚುತ್ತಾ ಮುನ್ನಡೆದರು. ಆಯಾ ಸ್ಥಳದ ವಿಶೇಷವಾದ ಖಾದ್ಯವನ್ನು ಕೊಟ್ಟು ಅತಿಥಿಗಳನ್ನು ಸ್ವಾಗತಿಸುತ್ತಾ ಹಬ್ಬದ ವಾತಾವರಣವೇ ಸೃಷ್ಟಿಯಾಯಿತು. ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಜಾತ್ರೆಯಲ್ಲಿ ವಿಶೇಷವಾಗಿ ದೊಡ್ಡ ಪ್ಲಾಸ್ಟಿಕ್ ಭೂತವನ್ನು ತಯಾರಿಸಲಾಗಿತ್ತು. ಪ್ಲಾಸ್ಟಿಕ್ ನಿರ್ಮೂಲ ಹೇಗೆ? ಎಂಬ ಮಂಥನಕ್ಕಾಗಿ ಮತ್ತು ಮಕ್ಕಳಿಗೆ ಅರಿವನ್ನು ಮೂಡಿಸುವ ಸಲುವಾಗಿ ನಿಲ್ಲಿಸಲಾಗಿದ್ದ ಈ ಪ್ಲಾಸ್ಟಿಕ್ ಭೂತ ಎಲ್ಲರ ಆಕರ್ಷಣೆಯಾಯಿತು. ಅಂತರ್ ಶಾಲಾ ಚಟುವಟಿಕೆಗಳಲ್ಲಿ ನಾಟಕ, ವಿಷಯ ಮಂಡನೆ, ಏಕಪಾತ್ರಾಭಿನಯ, ಕಥಾಕಥನ, ರೂಪಕ, ಬುಡಕಟ್ಟು ನೃತ್ಯಗಳು ಪ್ರದರ್ಶನಗೊಂಡವು. ಒಂದೇ ಸಮಯದಲ್ಲಿ ವಿವಿಧ ತರಗತಿಗಳಲ್ಲಿ ನಡೆದ ಇಷ್ಟೂ ಚಟುವಟಿಕೆಗಳು ಎಲ್ಲಿಗೆ ಹೋಗಿ ಯಾವುದನ್ನು ನೋಡೋಣ!? ಎಂಬ ಆಯ್ಕೆಯನ್ನು ಪ್ರೇಕ್ಷಕರ ಮುಂದೆ ಇಟ್ಟಂತಾಯಿತು. ಹಲವು ವಿಷಯಗಳನ್ನು ಕಲಿಯಲು ಪ್ರೇಕ್ಷಕರಲ್ಲಿಯೇ ಸ್ಪರ್ಧೆ ಮೂಡಿದ್ದು ವಿಶೇಷ. ಯಾವುದನ್ನು ಬಿಟ್ಟರೂ ವಿಶೇಷವಾದದ್ದೇನೋ ಕಳೆದುಕೊಂಡ ಭಾವವನ್ನು ಪ್ರೇಕ್ಷಕರಲ್ಲಿ ಕಾಣಬಹುದಾಗಿತ್ತು. ನಂತರ ಇದೇ ವಿಷಯಗಳನ್ನು ಆಧರಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಇಷ್ಟು ಆಯಾಮಗಳಿಂದ ನೋಡಲು ಸಾಧ್ಯವೇ?! ಎಂಬ ಅಚ್ಚರಿಯನ್ನು ಹೊತ್ತ ಅತಿಥಿಗಳ ಮಾತುಗಳನ್ನು ಗಮನಿಸಿ: ಡಾ.ಆರ್.ನಾಗೇಂದ್ರನ್ ಈ ತರಹದ ಒಂದು ಹೊಸ ಪರಿಕಲ್ಪನೆಯನ್ನು ಇಷ್ಟು ಕಡಿಮೆ ಸಮಯದಲ್ಲಿ ಎಷ್ಟು ಚೆನ್ನಾಗಿ ಬಂದಿದೆ ಎಂಬುದನ್ನು ನಾವು ಎಲ್ಲರಿಗೂ ಸಾರಿ ಹೇಳಬೇಕು. ಇಂದು ನಡೆದ ಅಂತರ್ ಶಾಲಾ ಕಾರ್ಯಕ್ರಮದಲ್ಲಿ ಎರಡು ತಂಡಗಳು ಮಾತ್ರ ಭಾಗವಹಿಸಿದ್ದರು. ಮುಂದಿನ ಬಾರಿ ಬೆಂಗಳೂರಿನ ಎಲ್ಲಾ ಶಾಲೆಯಿಂದಲೂ ತಂಡಗಳು ಇಂತಹ ಹೊಸ ಪ್ರಯೋಗಗಳಿಗೆ ಒಳಪಡಬೇಕು. ಇದರಿಂದ ರಾಷ್ಟ್ರದ ಉನ್ನತಿ ಹೇಗೆ? ಮತ್ತು ಸಂಸ್ಕೃತಿಯನ್ನು ಉಳಿಸುವುದು ಹೇಗೆ? ಎಂಬುದನ್ನು ತಿಳಿಯಬಹುದಾಗಿದೆ. ಇಂತಹ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಧನ್ಯವಾದಗಳು. ಇಂದು ಮಕ್ಕಳನ್ನು ಕೇವಲ ಇಂಜಿನಿಯರಿಂಗ್, ಡಾಕ್ಟರ್‌ಗಳಾಗಿ ಮಾತ್ರ ತಯಾರು ಮಾಡುವ ಶಾಲೆಗಳಿವೆ. ಪೂರ್ಣಪ್ರಮತಿ ಎಂಬ ಪ್ರಯೋಗವನ್ನು ಎಷ್ಟು ಜನ ಎಷ್ಟು ಬೇಗ ಒಪ್ಪಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಇದನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು. ಫ್ರೊ. ಆರ್. ಉಮಾಶಂಕರ್ Let me thank all of the organizers here. When I visited school two years back in my address I told to children, parents and to the teachers that I am very envious of the children of here, the reason is I did not get such schooling, then I was wondering for such school. Some one call to Utopia…something is not possible. West and east is mixed in such a nice cocktail, that the students of this school are get away with the richness of tradition, the Indian ethos as well as best in west knowledge. I should truly appreciate and congratulate parents assembled here, for having thought differently and send children to such school, I wish that this school, mind set of this school prelifate so that it reach  benefit of larger number of children in the country. Coming to today’s theme I and my colleague had an opportunity to visit 2-3 stalls , for example controversy between Prof.Madhav Gadgil and Kasturi Rangan sort of committee report. I am not pretending here that the children would understood the entire implications of that. Parents should convey this message to larger masses of our country through media, formal curriculum and also informal exchange. We could realize impact and import such exhibits into the larger context of the national economy. I have a suggestion here for principal and to the administrators both. Western Ghats and Amrit Mahal Kaval have very intensive background information, teachers brought up to the level of students understanding. It is possible even schools do the primary and secondary research into areas that can be used as a subject matters for education of the other students. Students are not getting material from books without getting what is the spirit, they are actually creating the spirit that is very good way of teaching, rather than teaching them endlessly from book, journals. In this regard my specific suggestion is that, certain British schools actually use children as a means of delivering important policy decision to the public larges number, larger class of the nation. And in this context such events can grow up into such an event, and put proposal before National Biodiversity authority and etc. It can easily fund for such events, that can take children as the communication. I once again congratulate parents, teachers for such a commendable exhbits here. ಪ್ರಮೋದ್ ಶಿಗ್ಗಾಂವ್ ನಾನು ಮೂಲತಃ ಮಾತುಗಾರನಲ್ಲ. ನಾನು ಮಾತಿಗಿಂತ ಕೆಲಸ ಮಾಡುವುದೇ ಸೂಕ್ತ. ಕಳೆದ ವರ್ಷದಿಂದಲೇ ಶಾಲೆಗೆ ಬರಲು ಪ್ರಾಂಶುಪಾಲರು ಹೇಳೀದ್ದರೂ ನನ್ನ ಕೆಲಸಗಳ ನಡುವೆ ಸಾಧ್ಯವಾಗಿರಲಿಲ್ಲ. ಈ ಬಾರಿ ಹೋಗಲೇ ಬೇಕು ಎಂಬ ಕಾರಣಕ್ಕಾಗಿ ಬಂದಾಗ ಇಷ್ಟೆಲ್ಲ ಅದ್ಭುತಗಳನ್ನು ನೋಡಿ ಮಾತನಾಡದೆ ಇರುವುದೇ ಸರಿ ಎನಿಸಿತು. ಶಾಲೆಯ ಮೂಲೆ ಮೂಲೆಗಳಲ್ಲು ಚಟುವಟಿಕೆಗಳು ನಡೆಯುತ್ತಿದ್ದವು. ನಾನು ರಂಗ ಚಟುವತಿಟಿಕೆಗಳಿಗೆ ಸಣ್ಣದಾದ ಸಲಹೆಗಳನ್ನು ನೀಡಲು ಶಾಲೆಗೆ ಹೋಗಿದು. ಇಲ್ಲಿ ನೋಡಿದಾಗ ಇನ್ನೂ ನಾನು ಸಕ್ರಿಯವಾಗಿ ತೊಡಗಿಕೊಳ್ಳದಿದ್ದರೆ ದೊಡ್ಡ ತಪ್ಪು ಮಾಡುಬಿಡುತ್ತೇನೋ ಎಂಬ ಆತಂಕದಿಂದ ಅಧ್ಯಾಪಕರೊಂದಿಗೆ ಒಂದು ದಿನ ರಂಗತರಬೇತಿ ಶಿಬಿರವನ್ನು ನಡೆಸಿದೆ. ಬಹಳ ಅದ್ಭುತವಾದ ಕೆಲಸ. ಅಲ್ಲಿ ಸಣ್ಣ ಸಣ್ಣ ಕೊಠಡಿಗಳಲ್ಲಿ ಎಲ್ಲರೂ ಸ್ಥಳವನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದರು. ಇಷ್ಟು ವಿಶಾಲವಾದ ಕೆಲಸ ಅಲ್ಲಿ ತಯಾರಾಗುತ್ತಿತ್ತು ಎಂಬುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಬಹಳ ದೊಡ್ಡದಾದ, ವಿಶಾಲವಾದ ಉದ್ದೇಶ ಶಾಲೆಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಶಾಲೆಗಳಲ್ಲೂ ಇಂತಹ ಪ್ರಯತ್ನಗಳು ಆಗಲಿ. ನಾನು ಸಂಪೂರ್ಣವಾಗಿ ನಿಮ್ಮ ಶಾಲೆಯೊಂದಿಗೆ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ. ಡಾ.ಹರೀಶ್ ಭಟ್ ಜೀವೋ ಜೀವಸ್ಯ ಜೀವನಮ್ ಇಲ್ಲೇ ಕಾಣುತ್ತಿದೆ. ಒಳಗೆ ಬರುತ್ತಿದ್ದಂತೆ ನಾನು ನೋಡಿದೆ ಪ್ರತಿಯೊಂದು ಕಡೆಯೂ ಈ ವಾಕ್ಯ ಪ್ರತಿಧ್ವನಿಯಾಗುತ್ತಿದೆ. ಮುಂದೆ ಭೂಗೋಳವಿದೆ, ಮಕ್ಕಳು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಮನುಷ್ಯನನ್ನು ಸೇರಿಸದೆ. ಮನುಷ್ಯನನ್ನು ಬಿಟ್ಟರೆ ಭೂಮಿ ಎಷ್ಟು ಸೊಗಸಾಗಿದೆ ಎನ್ನುವುದು ಕಾಣುತ್ತಿದೆ. ಹಿಂದೆ ದೊಡ್ಡ ಪ್ಲಾಸ್ಟಿಕ್ ಭೂತವಿದೆ. ಸಣ್ಣ ಭೂತ ಅಲ್ಲವೇ ಅಲ್ಲ ಇದು. ಈ ಪೂರ್ಣಪ್ರಮತಿಯ ಮಕ್ಕಳನ್ನು ನೋಡಿದ್ದು ಇದೆ ಎನ್.ಎಸ್.ಎಸ್. ಭವನದ ಹಿಂಭಾಗಕ್ಕಿರುವ ಕಾಡಿನಲ್ಲಿ. ಎಲ್ಲ ಮಕ್ಕಳಂತೆ ಇವರೂ ಗಲಾಟೆ ಮಾಡುತ್ತಾರೆ ಎಂದು

Purnapramati Utsava 2013-14 Inaugural Day

Purnapramati Utsava 2013-14 Inaugural Day

Saturday, January 11th, 2014

ಪ್ರಾರಂಭೋತ್ಸವ ದಿನಾಂಕ: ೧೯ನೇ ಡಿಸೆಂಬರ್, ೨೦೧೩ ಸ್ಥಳ:  ಕೆ.ಹೆಚ್.ಕಲಾಸೌಧ, ಹನುಮಂತನಗರ, ಬೆಂಗಳೂರು ೨೦೧೩-೧೪ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಪ್ರಮತಿಯ ಕಲಿಕೆ ‘ಜೀವೋ ಜೀವಸ್ಯ ಜೀವನಮ್’ ಎಂಬ ವಿಷಯವನ್ನು ಆಧರಿಸಿತ್ತು. ನಿಸರ್ಗದಲ್ಲಿ ಸಹಜವಾಗಿಯೇ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಸಂಪೂರ್ಣ ವ್ಯವಸ್ಥೆ ಒಂದನ್ನೊಂದು ಅವಲಂಬಿಸಿ ಸಹಬಾಳ್ವೆ ನಡೆಸುತ್ತಿವೆ. ಈ ವ್ಯವಸ್ಥೆಯಲ್ಲಿ ಸ್ಪರ್ಧೆ ಇದ್ದರೂ ದ್ವೇಷವಿಲ್ಲ. ಬದುಕಿಗಾಗಿ ಹೋರಾಟವೇ ಹೊರತು ಯಾರನ್ನೋ ಕುರಿತ ಮತ್ಸರವಿಲ್ಲ. ಈ ತತ್ವವನ್ನು ಕಲಿಯುವ ಪ್ರಯತ್ನದಲ್ಲಿ ಹುಲ್ಲುಗಾವಲು, ಬುಡಕಟ್ಟು ಜನಾಂಗ, ಸಂಖ್ಯಾಶಾಸ್ತ್ರ, ಜೀವ ವಿವಿಧತೆ ತಾಣಗಳು, ಪ್ರಾಚೀನ ಸಾಹಿತ್ಯ-ಸಂಸ್ಕೃತಿ, ಹಿಮಾಲಯದ ಗಂಗೆ, ಆಧುನಿಕ ಮಾನವನ ಅಭಿವೃದ್ಧಿ ಪ್ರಯತ್ನಗಳ ದೃಷ್ಟಿಕೋನದಲ್ಲಿ ಜೀವೋ ಜೀವಸ್ಯ ಜೀವನಮ್ ಎಂಬ ವಿಷಯವನ್ನು ಅಧ್ಯಯನವನ್ನು ಮಾಡಲಾಯಿತು. ಕಲಿತ ವಿಷಯಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ, ತಜ್ಞರ ಮುಂದೆ ಪ್ರಸ್ತುತ ಪಡಿಸುವ ತನ್ಮೂಲಕ ಮತ್ತಷ್ಟು ಕಲಿಯುವ ಪ್ರಯತ್ನವಾಗಿ ೨೦೧೩-೧೪ರ ಉತ್ಸವವನ್ನು ನಡೆಸಲಾಯಿತು. ಐದು ದಿನಗಳ ಈ ಕಾರ್ಯಕ್ರಮವು ಪ್ರಾರಂಭೋತ್ಸವ, ಜಾತ್ರೆ, ಮಹೋತ್ಸವ, ವಿಚಾರಸಂಕಿರಣಗಳಾಗಿ ವಿಭಾಗಿಸಲ್ಪಟ್ಟಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತರ್ ಶಾಲಾ ಚಟುವಟಿಕೆಗಳು, ವಸ್ತುಪ್ರದರ್ಶನಗಳ ಮೂಲಕ ನಮ್ಮ ಕಲಿಕೆಗಳನ್ನು ಪೋಷಕರ ಮುಂದೆ, ಆಯಾ ಕ್ಷೆತ್ರಜ್ಞರ ಮುಂದೆ ಇಡಲಾಯಿತು. ಇಡೀ ವರ್ಷದ ತಯಾರಿಯನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸುವ ನಿಟ್ಟಿನಲ್ಲಿ ಹಗಲು-ರಾತ್ರಿ ಯೋಜನೆಗಳು ತಯಾರಾದವು, ಅಧ್ಯಾಪಕರು-ವಿದ್ಯಾರ್ಥಿಗಳು ಉತ್ಸಾಹದಿಂದ ಗಡಿಯಾರವನ್ನು ಲೆಕ್ಕಿಸದೆ, ದೈಹಿಕ ಶ್ರಮಕ್ಕೆ ಧೃತಿಗೆಡದೆ ಕಾರ್ಯೋನ್ಮುಖರಾದರು. ಇವೆಲ್ಲದರ ಫಲವಾಗಿ ದಿನಾಂಕ ೧೯/೧೨/೨೦೧೩ ರಂದು ನಾವೆಲ್ಲ ಕಾಯುತ್ತಿದ್ದ ಪ್ರಾರಂಭದ ದಿನ ಬಂದೇ ಬಿಟ್ಟಿತು. ಪೂರ್ವಪ್ರಾಥಮಿಕ ಶಾಲೆಯ ಮಕ್ಕಳ ಕಾರ್ಯಕ್ರಮಗಳಿಂದ ಪ್ರಾರಂಭೋತ್ಸವವು ನಡೆಯಿತು. ಮುಖ್ಯ ಅತಿಥಿಗಳಾಗಿ ಟಿ.ಜಿ. ವೆಂಕಟೇಶಾಚಾರ್ (ಕಾರ್ಯದರ್ಶಿ, ಪ್ರಭಾತ್ ಕಲಾವಿದರು), ಅರ್ಚನಾ ಉಡುಪ (ಗಾಯಕಿ), ಎಲ್.ಎ.ರವಿಸುಬ್ರಮಣ್ಯ (ಸಂಸತ್ ಸದಸ್ಯರು, ಬಸವನಗುಡಿ ಕ್ಷೇತ್ರ), ಸಂಜಯ್ ಗುಬ್ಬಿ (ಹುಲಿ ಸಂರಕ್ಷಣಾ ಯೋಜನೆಯ ಸಂಯೋಜಕರು), ಡಾ.ನಾಗೇಶ್ ಹೆಗಡೆ (ಪರಿಸರ ತಜ್ಞರು), ಶ್ರೀನಿ ಶ್ರೀನಿವಾಸ್ (ನಾಸಾ ವಿಜ್ಞಾನಿ), ಪ್ರೊ.ಡಿ.ಪ್ರಹ್ಲಾದಾಚಾರ್  ಆಗಮಿಸಿದ್ದರು. ಪೋಷಕರು ಮಕ್ಕಳು ಸಂತೋಷದಿಂದ ಭಾಗವಹಿಸಿ ಪ್ರಾರಂಭವು ಮುಂದಿನ ಕಾರ್ಯಕ್ರಮಗಳಿಗೆ ಶುಭವನ್ನು ತರುವಂತೆ ಮಾಡಿದರು. ಕಾವೇರಿ ತೀರದಲ್ಲಿ ಒಂದು ಕಾಡು… ಎಂಬ ರೂಪಕವನ್ನು ಪುಟಾಣಿಗಳು ಅಭಿನಯಿಸಿದರು. ಕಾಡುಪ್ರಾಣಿಗಳ ಅನುಕರಣೆ, ಸೃಷ್ಟಿಯ ಚರಾಚರ ಜೀವಿಗಳ ಪರಿಚಯ, ಗುಲ್ಲುಮಾಡಿದ ಗೋಪಾಲ ಕೃಷ್ಣ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಾವು ಅರಿತ ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಪ್ರೇಕ್ಷಕರ ಮುಂದಿಟ್ಟರು. ೨೦೧೩-೧೪ ನೇ ಶೈಕ್ಷಣಿಕ ಸಾಲಿನ ಹೊಸ ಸೇರ್ಪಡೆಯಾದ ವಿಶೇಷ ಅಧ್ಯಯನ ಕ್ಷೇತ್ರಗಳಾದ ಚಿತ್ರಕಲೆ, ಕಲಾರಿಪಯಟ್ಟು, ನೃತ್ಯ, ಸಂಗೀತ, ಯೋಗ, ಪರಿಸರ ಅಧ್ಯಯನಗಳಲ್ಲಿ ತಾವು ಕಲಿತ ವಿಷಯಗಳನ್ನು ಪ್ರಾಥಮಿಕ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಗೀತ-ನೃತ್ಯಗಳ ಜುಗಲ್ ಬಂದಿ ಎಲ್ಲರನ್ನು ಮುದಗೊಳಿದರೆ, ಕಲಾರಿ ಪಯಟ್ಟು ಪ್ರದರ್ಶನ ಚಕಿತಗೊಳಿಸಿತು. ಮಕ್ಕಳ ಅರಿವು, ಆಟ-ಪಾಠಗಳನ್ನು ಗಮನಿಸುತ್ತಿದ್ದ ಅತಿಥಿಗಳು ಮೂಕವಿಸ್ಮಿತರಾಗಿ ನುಡಿದ ಮಾತುಗಳ ಪ್ರತಿಧ್ವನಿ ಇಲ್ಲಿದೆ: For more photos click here ಅರ್ಚನಾ ಉಡುಪ ಹಲವು ಶಾಲಾ ಕಾರ್ಯಾಕ್ರಮಗಳಿಗೆ ಹೋಗಿದ್ದರೂ ಪೂರ್ಣಪ್ರಮತಿಯ ಉತ್ಸವದಲ್ಲಿ ಭಾಗವಹಿಸುವ ಅನುಭವವೇ ಬೇರೆ. ಬೇರೆ ಶಾಲೆಗಳಲ್ಲಿ ಎಲ್ಲವೂ ಇಂಗ್ಲಿಷ್ ಮಯವಾಗಿರುತ್ತದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಮೇಲೆ ಎಳೆದುಕೊಂಡುಬಿಟ್ಟಿರುತ್ತಾರೆ. ನಿರಾಸೆಯಿಂದಲೇ ವಾಪಾಸು ಬರಬೇಕಾಗುತ್ತಿತ್ತು. ಎಷ್ಟೋ ಶಾಲೆಗಳಲ್ಲಿ ಅವರು ಬೇಸರ ಮಾಡಿಕೊಂಡರೂ ನಾನು ಈ ವಿಚಾರವನ್ನು ಕಟುವಾಗೇ ಹೇಳಿ ಬಂದಿದ್ದೇನೆ. ಏನೇ ಆದರೂ ತಾಯಿಯನ್ನು ಮರೆಯಬಾರದು. ಇಂದಿನ ದಿನದಲ್ಲಿ ನಮ್ಮ ಭಾಷೆ, ಸಂಸ್ಕೃತಿ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ನಮ್ಮೆಲ್ಲರಿಗೂ, ವಿಶೇಷವಾಗಿ ನನಗೆ ಆತಂಕವಾಗುತ್ತಿತ್ತು, ಭಯವಾಗುತ್ತಿತ್ತು. ಇಲ್ಲಿಗೆ ಬಂದು ಆ ಭಯ ಹೋಯಿತು ನನಗೆ. ಖಂಡಿತವಾಗಿ ನಮ್ಮ ಸಂಸ್ಕೃತಿ ಉಳಿಯುತ್ತದೆ. ನನ್ನನ್ನು ಅತಿಥಿಯಾಗಿ ಕರೆದಿದ್ದೀರೆಂದು ಈ ಮಾತನ್ನು ಹೇಳುತ್ತಿಲ್ಲ. ನನಗೆ ಆ ಅಭ್ಯಾಸವೂ ಇಲ್ಲ. ಮಕ್ಕಳೇ, ನೀವೆಲ್ಲ ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಿ. ನನ್ನ ಮಕ್ಕಳನ್ನೇ ನೋಡಿದಾಗ ನನಗೆ ಬೇಸರವಾಗುತ್ತದೆ. ನನ್ನ ಮಗನನ್ನೂ ಈ ಶಾಲೆಗೆ ಸೇರಿಸುತ್ತೇನೆ. ಓದು…ಓದು ಎಷ್ಟು ಓದಿದರೂ ಸಾಲದು! ಮಕ್ಕಳಿಗೆ ಓದು ಎಲ್ಲಿಯವರೆಗೆ ಸಹಕಾರಿಯಾಗುತ್ತದೆ. ಪರಿಸರ, ಸಹಜೀವಿಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಇಂದು ನಾವೇ ನಮ್ಮ ಸುತ್ತ ಕೋಟೆ ಕಟ್ಟಿಕೊಂಡು ಬದುಕುತ್ತಿರುತ್ತೇವೆ. ಅಂತಹುದರಲ್ಲಿ ವಿದ್ಯಾಭ್ಯಾಸ ಸೆಕೆಂಡರಿ, ಅಥವಾ ವಿದ್ಯಾಭ್ಯಾಸದಷ್ಟೇ ಪ್ರಮುಖವಾದದ್ದು ಸಮಗ್ರ ಬೆಳವಣಿಗೆ, ವ್ಯಕ್ತಿತ್ವ ಬೆಳವಣಿಗೆ, ಮೂಲಭೂತ ವಿದ್ಯೆ ಬೇಕು. ಬಹಳ ಉತ್ಕೃಷ್ಟವಾದ ಕೆಲಸ ಮಾಡುತ್ತಿದ್ದಾರೆ. ಅಧ್ಯಾಪಕರಿಗೂ, ಪೂರ್ಣಪ್ರಮತಿ ತಂಡಕ್ಕೂ ಅಭಿನಂದನೆಗಳು. ಪೋಷಕರಿಗೆ ಅಭಿನಂದನೆಗಳು, ಏಕೆಂದರೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದೀರಿ. ನಿಜವಾಗಲೂ ಅವರೆಲ್ಲ ಸತ್ಪ್ರಜೆಗಳಾಗುತ್ತಾರೆ. ಶಾಲೆ ಇಂದಿನ ಮಕ್ಕಳಿಗೆ ಒಂದು ಪಂಜರವಾಗಿದೆ. ಎಷ್ಟು ಗಂಟೆಗೆ ಬೆಲ್ ಆಗತ್ತೋ ಎಂದು ಕಾಯುತ್ತಿರುತ್ತಾರೆ. ಓದು ಒಂದೇ ಗುರಿಯಲ್ಲ ಮಕ್ಕಳೆ, ಹೇಗೆ ಬದುಕಬೇಕು, ಸ್ನೇಹಿತರೊಂದಿಗೆ ಹೇಗೆ ಇರಬೇಕು, ಪ್ರತಿಯೊಂದು ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ, ಗಿಡ-ಮರಗಳ ಸಹಬಾಳ್ವೆಯನ್ನು ನಿಮ್ಮ ಶಾಲೆಯಲ್ಲಿ ಹೇಳಿಕೊಡುತ್ತಾರೆ. ಅದರಲ್ಲೇ ಜೀವನದ ಸಾರ ಇರುವುದು. ಇಂತಹ ಶಾಲೆ, ಕಲಿಕಾ ಕ್ರಮ ದೇಶದ ಎಲ್ಲೆಡೆ ಮಾದರಿಯಾಗಬೇಕು. ನನನ್ನು ಇಲ್ಲಿ ಕರೆದು ಇಷ್ಟೆಲ್ಲ ಸಂತೋಷ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ರವಿ ಸುಬ್ರಹ್ಮಣ್ಯ ಶಾಲೆ ಪ್ರಾರಂಭವಾಗಿ ೪ನೇ ವರ್ಷದಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮ ಕೊಡುತ್ತಿದ್ದೀರಿ. ಶಾಲೆ ಪ್ರಾರಂಭವಾದಾಗ ನಾನು ಹೋಗಿದ್ದೆ. ಕೇಲವೇ ಮಕ್ಕಳಿದ್ದರು. ಅಂದು ಅಲ್ಲಿ ಪಾಠ ಹೇಳಿಕೊಡುತ್ತಿದ್ದ ಪದ್ಧತಿ, ಅಧ್ಯಾಪಕರಲ್ಲಿದ್ದ ಆಸಕ್ತಿ ನೋಡಿ ಗುರುಕುಲ ಪದ್ಧತಿ ನಾಶವಾಗಿದೆ ಎಂದು ತಿಳಿದದ್ದು ಸುಳ್ಳಾಯಿತು ಎಂದು ಮನವರಿಕೆಯಾಯಿತು. ನಾವು ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿಕೊಡುತ್ತೇವೆ, ವಿದ್ಯಾವಂತರಾಗಲು ಏನು ಬೇಕು ಅಷ್ಟು ಮಾತ್ರ ಮಾಡುತ್ತೇವೆ. ಆದರೆ ಬದುಕು ಎಂದರೆ ಏನು? ಎಂಬ ಪಾಠವನ್ನು ಹೇಳಿಕೊಡುವ ಬುದ್ಧಿವಂತರಾಗಿಸುವ ಏಕೈಕ ಶಾಲೆ ಎಂದರೆ ಪೂರ್ಣಪ್ರಮತಿ ಎಂದರೆ ತಪ್ಪಾಗಲಾರದು. ನಾನು ಕಾರ್ಯಕ್ರಮದಲ್ಲಿ೩೦-೪೫ ನಿಮಿಷ ಮಾತ್ರ ಇರಲು ಸಾಧ್ಯ ಎಂದು ಹೇಳಿದ್ದೆ. ಆದರೆ ಇಲ್ಲಿ ಸಮಯ ಹೋದದ್ದೇ ತಿಳಿಯಲಿಲ್ಲ. ಮಕ್ಕಳು ಎಷ್ಟು ತಲ್ಲೀನರಾಗಿ ಭಾಗವಹಿಸಿದರು. ಅಧ್ಯಾಪಕರ ಪರಿಶ್ರಮ ಎಲ್ಲವೂ ನಮಗೆ ಅರಿವನ್ನು ಮೂಡಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದೆನಿಸುತ್ತಿದೆ. ಪರಿಸರದ ಬಗ್ಗೆ ಇರುವ ಕಾಳಜಿ ಸಹಬಾಳ್ವೆ ಮರೆತವರಿಗೆ, ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಇದು ಪಾಠವಾಗಿದೆ. ನಮ್ಮ ಹಿರಿಯರು ಹೇಳಿಕೊಟ್ಟಿರುವ ಸಮುದ್ರ ವಸನೇ ದೇವಿ…ಸಂಸ್ಕೃತಿಯನ್ನು ಮರೆತು ಎಲ್ಲಿಗೆ ಹೊರಟಿದ್ದೇವೆ ಎಂದು ಹೋಚಿಸಬೇಕಿದೆ? ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಏನು ಹೇಳಿಕೊಡಬೇಕು! ಪರಿಸರ, ಭೂಮಿ ಎಲ್ಲವನ್ನೂ ಹಿಂದಿನವರು ನಮಗಾಗಿ ಉಳಿಸಿಕೊಟ್ಟಿದ್ದಾರೆ, ನಾವು ಅದನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಾದುದು ನಮ್ಮ ಜವಾಬ್ದಾರಿ. ಈ ಜವಾಬ್ದಾರಿಯನ್ನು ಪೂರ್ಣಪ್ರಮತಿ ಸರಿಯಾಗಿ ನಿಭಾಯಿಸುತ್ತಿದೆ. ಪೂರ್ಣಪ್ರಮತಿ ಕೇವಲ ಸಿಲಬಸ್ ಪಾಠ ಮಾಡಿ ಕಳಿಸದೆ ಒಬ್ಬ ಸಂಪೂರ್ಣವ್ಯಕ್ತಿಯಾಗಿ ಮಾಡಿ ರಾಷ್ಟ್ರಕ್ಕೆ ಕೊಡುತ್ತಿದೆ. ಸಂಗೀತ, ಸಾಹಿತ್ಯ, ಆತ್ಮರಕ್ಷಣೆ ಹೀಗೆ ಎಲ್ಲ ಆಯಾಮಗಳಲ್ಲೂ ಶಿಕ್ಷಣವನ್ನು ಕೊಡಲಾಗುತ್ತಿದೆ. ಬೇರೆ ಶಾಲೆಗಳ ಕಾರ್ಯಕ್ರಮಗಳಲ್ಲಿ ಯಾವುದೋ ಸಿನಿಮಾ ಹಾಡುಗಳಿಗೆ ನರ್ತನ ಮಾಡಿಸಿ, ಅರೆಬೆತ್ತಲೆ ಕುಣಿಸಿ, ಕಲಿಸಿದ ಇಂಗ್ಲಿಷ್ ಪದ್ಯವನ್ನು ನಾಲ್ಕು ಜನರ ಮುಂದೆ ಹೇಳಿಸಿದರೆ ನಮ್ಮ ಮಕ್ಕಳು ಸಂಪೂರ್ಣರಾದರು ಎಂದು ಪೋಷಕರು ಎಣಿಸುವುದೇ ಹೆಚ್ಚು ಕಂಡುಬರುತ್ತದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಸಾರ್ಥಕತೆ ಖಂಡಿತ ಇದೆ. ಯಾವುದೋ ಕಾನ್ವೆಂಟ್‌ಗಳಲ್ಲಿ ಒಂದು ಸೀಟ್ ಕೊಡಿಸುವಂತೆ ಕೇಳುವ ಪೋಷಕರಿಗೆ ಪೂರ್ಣಪ್ರಮತಿಯಲ್ಲಿ ಅವಕಾಶವಿದೆಯೇ ಎಂದು ಪ್ರಯತ್ನಿಸುತ್ತೇನೆ, ಕೇಳಿ ನೋಡುತ್ತೇನೆ ಎಂದು ಹೇಳಿದ ಸಂದರ್ಭಗಳಿವೆ. ಏಕೆಂದರೆ ಯೋಗ್ಯತೆ ಇದ್ದರೆ ಮಾತ್ರೆ ಇಲ್ಲಿ ಕಲಿಯಲು ಅವಕಾಶ ಸಿಗುತ್ತದೆ. ಇಡೀ ಪೂರ್ಣಪ್ರಮತಿ ತಂಡ ಒಂದು ತಪಸ್ಸನ್ನು ಆಚರಿಸುತ್ತಿದೆ. ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡುತ್ತಿರುವ ತಂಡಕ್ಕೆ ನಾನು ಅಭಿನಂದಿಸುತ್ತೇನೆ. ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ. ನಮ್ಮ ಪುರಾತನ ಸಂಸ್ಕೃತಿ, ಮರೆಯುತ್ತಿರುವ ಸಂಪ್ರದಾಯವನ್ನು, ಆಧುನಿಕ ವಿಜ್ಞಾನವನ್ನು ಕಲಿಸುವ ದಾರಿಯಲ್ಲಿ ನಿಮಗೆ ಯಶಸ್ಸು ಸಿಗಲೆಂದು ಆಶಿಸುತ್ತೇನೆ. ಸಂಜಯ್ ಗುಬ್ಬಿ ನಾನು ಹುಲಿ ಮತ್ತು ಚಿರತೆ ಸಂರಕ್ಷಣೆಯ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನವರೆಂದರೆ ಐ.ಟಿ-ಬಿ.ಟಿ ಯ ಬಗ್ಗೆ ಮಾತನಾಡುತ್ತಾರೆ. ವನ್ಯಜೀವಿಗಳೂ ಕೂಡ ಅಷ್ಟೇ ಮುಖ್ಯ. ನನಗೆ ಒಂದು ಸಂತೋಷವೆಂದರೆ ಪ್ರಪಂಚದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ನಮ್ಮ ಕರ್ನಾಟಕ. ಏಷಿಯಾದ ಆನೆಗಳು ಹೆಚ್ಚಾಗಿರುವ ರಾಜ್ಯ ಕೂಡ ನಮ್ಮ ಕರ್ನಾಟಕವೇ. ಆದ್ದರಿಂದ ಕಲೆ ಸಂಸ್ಕೃತಿಯಷ್ಟೆ ದೊಡ್ಡದಾಗಿರುವುದು ನಮ್ಮ ನಿಸರ್ಗ ಮತ್ತು ವನ್ಯಜೀವಿಗಳು. ಇದರ ಬಗ್ಗೆ ಪೂರ್ಣಪ್ರಮತಿ ಇಷ್ಟೆಲ್ಲ ಅರಿವನ್ನು ಮೂಡಿಸಿ ಇಷ್ಟು ಒಳ್ಳೆಯ ಕಾರ್ಯಕ್ರಮ ನೀಡುತ್ತಿರುವುದು ಸಂತೋಷದ ಸಂಗತಿ. ಇಂತಹ ಶಾಲೆ ಎಲ್ಲಾ ಕಡೆಗಳಲ್ಲೂ ಬರಬೇಕು. ಟಿ.ಜಿ.ವೆಂಕಟೇಶಾಚಾರ್ ದೊಡ್ಡವರೇ ಮಾಡುವ ಕಾರ್ಯಕ್ರಮ ನೋಡಿ ಈಗ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಸಂತೋಷವಾಯಿತು. ಅರ್ಚನಾ ಉಡುಪ ಮತ್ತು ರವಿ ಸುಬ್ರಹ್ಮಣ್ಯ ಅವರು ಹೇಳಿದರು ಅವರ ಮಕ್ಕಳನ್ನು ಈ ಶಾಲೆಗೆ ಸೇರಿಸಬೇಕಿತ್ತು, ಆದರೆ ಅವರು ದೊಡ್ಡವರೆಂದು. ನಾನು ಅದೃಷ್ಟವಂತ. ಏಕೆಂದರೆ ನಮ್ಮ ಮೊಮ್ಮಕ್ಕಳು ಈಗಾಗಲೇ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಸಂಸ್ಕೃತಿ ಬರುವುದೆ ಮನೆ ಮತ್ತು ಶಾಲೆಯಿಂದ. ಮನೆಯಲ್ಲಿ ಹೇಳಿಕೊಡುವುದು ಕಡಿಮೆಯಾಗಿದೆ. ಏಕೆಂದರೆ ಎಲ್ಲರೂ ಕೆಲಸಕ್ಕೆ ಹೋಗಿ ಬಿಡುತ್ತಾರೆ. ಆದ್ದರಿಂದ ಏನೇ ಕಲಿತರು ಅದು ಶಾಲೆಯಿಂದಲೇ ಬರಬೇಕು. ನಮ್ಮ ಮಕ್ಕಳಿಗೆ ಆ ಅವಕಾಶ ಸಿಕ್ಕಿದೆ. ಈ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ, ಇಂತಹ ಕಾರ್ಯಕ್ರಮಗಳು ಮತ್ತಷ್ಟು ಕೊಡುವಂತಾಗಲಿ ಎಂದು ಹಾರೈಸುವೆ. ನಾಗೇಶ್ ಹೆಗಡೆ ಪೂರ್ಣಪ್ರಮತಿ ಶಾಲೆಗೆ ಪ್ರತಿ ಶನಿವಾರ ನಾನು ಭೇಟಿ ಕೊಡುತ್ತೇನೆ. ಮಕ್ಕಳೊಂದಿಗೆ ನಾನು ಹೊಸದಾಗಿ ಕಲಿಯಲು ಆರಂಭಿಸಿದ್ದೇನೆ. ಈ ಮಕ್ಕಳೊಂದಿಗೆ ಪೋಷಕರೂ ಇದ್ದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಮುಂದಿನ ದಿನಗಳಲ್ಲಿ ಬದುಕುವುದು ಇಂದಿನಷ್ಟು ಸುಲಭವಲ್ಲ. ಏಕೆಂದರೆ ಮುಂದೆ ಬಹಳಷ್ಟು ನೀರಿನ ಆಭಾವವಿರುತ್ತದೆ, ಬರಗಾಲ ಬರಬಹುದು, ಅತಿವೃಷ್ಟಿಯಾಗಬಹುದು, ಆಹಾರದ ಅಭಾವವಾಗಬಹುದು. ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದರೆ ಅವರು ಕಲಿಯುತ್ತಾರೆ. ಆದ್ದರಿಂದ ಪೋಷಕರಿಗೆ ಈ ವಿಷಯಗಳನ್ನು ತಿಳಿಸುವುದು ಮುಖ್ಯ. ಭಾಷಣ, ನರ್ತನ ಕಲಿಯುವಷ್ಟೇ ಮುಖ್ಯ ಶಕ್ತಿಯ ಉಳಿತಾಯವನ್ನು ಕಲಿಯುವುದು. ೨೫-೨೬ ನೇ ದಿನಾಂಕಗಳಂದು ಬಂದಾಗ ಪೋಷಕರೊಂದಿಗೆ ಇನ್ನಷ್ಟು ಸಂವಹನ ನಡೆಸಬಹುದು. ಶಕ್ತಿಶಾಲಿ ಸಮಾಜವನ್ನು ನಿರ್ಮಿಸುವುದರಲ್ಲಿ ನಾವೆಲ್ಲ ಒಟ್ಟಾಗಿ ಶ್ರಮಿಸೋಣ. ಶ್ರೀನಿ ಶ್ರೀನಿವಾಸ್ ಈ ವರ್ಷ ನಾನು ಐದು-ಆರನೇ ತರಗತಿಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇನೆ. ಅದರಷ್ಟು ಖುಷಿ ಕೊಡುವ ವಿಚಾರ ಮತ್ತಾವುದೂ ಇಲ್ಲ. ಪ್ರೊ.ಡಿ.ಪ್ರಹ್ಲಾದಾಚಾರ್ಯರು ಪೂರ್ಣಪ್ರಮತಿ ೪ ವರ್ಷದ ಬಾಲಿಕೆ. ನಮಗೆಲ್ಲಾ ಒಂದು ರೀತಿಯ ಭಯ, ಆತಂಕ. ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳಾಗಿ ರೂಪಿಸಲು ಬೇಕಾದ ಅನುಭವವಿಲ್ಲದೆ ಯಾವ ರೀತಿ ಮುಂದುವರೆಯುತ್ತೇವೆ, ಎಷ್ಟು ಸಫಲರಾಗುತ್ತೇವೆ ಎಂಬ ಭಯ ಇತ್ತು. ಆದರೆ ವರ್ಷದಿಂದ ವರ್ಷಕ್ಕೆ ಮುಂದೆ ಹೋಗುತ್ತಿರುವಂತೆ ಒಂದು ಆತ್ಮ ವಿಶ್ವಾಸ ಮೂಡುತ್ತಿದ್ದೆ. ಮಕ್ಕಳು ಶಾಲೆಗೆ ಏಕೆ ಬರುತ್ತಾರೆ? ಸ್ವಾತಂತ್ರ ಬಂದ ಸಂದರ್ಭದಲ್ಲಿ ಅನಕ್ಷರಸ್ಥರು ಇದ್ದದ್ದೆ ಹೆಚ್ಚು. ಅವರೆಲ್ಲ ಅಕ್ಷರಸ್ಥರಾಗಬೇಕು ಎಂಬುದೆ ಗುರಿಯಾಗಿತ್ತು. ನಮ್ಮ ದೇಶ ಒಳ್ಳೆಯ ನಾಗರಿಕರನ್ನು ಪಡೆಯಬೇಕು. ಆದರೆ ಕೇವಲ ಅಕ್ಷರಸ್ಥರಾದರೆ ಸಾಲದು. ‘ಸಾಕ್ಷರಾಃ… ರಾಕ್ಷಸಾಃ ಏವ ಕೇವಲಮ್’ ಸಾಕ್ಷರ ಎಂಬ ಅಕ್ಷರಗಳನ್ನು ಹಿಂದುಮುಂದು ಮಾಡಿದರೆ ರಾಕ್ಷಸರಾಗುತ್ತಾರೆ. ವಿದ್ಯಾವಂತರಾಗಿದ್ದು ಸಂಸ್ಕಾರ ರಹಿತರಾದರೆ ಏನು ಪ್ರಯೋಜನವಿಲ್ಲ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಆದ್ದರಿಂದ ಸಾಕ್ಷಕರರಾಗಬೇಕು ಮತ್ತು ಸುಸಂಸ್ಕೃತರಾಗಬೇಕು. ಆ ಜವಾಬ್ದಾರಿ ಶಾಲೆಯ ಮೇಲಿದೆ. ಸಂಸ್ಕಾರವನ್ನು ಕೊಡುವ ಪ್ರಯತ್ನವನ್ನು ಪೂರ್ಣಪ್ರಮತಿ ಕೊಡುತ್ತಿದೆ. ಹಲವು ಹಿರಿಯರ ಮಾರ್ಗದಶನದಲ್ಲಿ ಪೂರ್ಣಪ್ರಮತಿ ನಡೆಯುತ್ತಿದೆ. ನಾಲ್ಕೇ ವರ್ಷಗಳಲ್ಲಿ ಉತ್ತರ ಭಾರತದ ಹಲವು ವಿದ್ಯಾವಂತರು, ಪ್ರಜ್ಞಾವಂತರು ಪೂರ್ಣಪ್ರಮತಿಗೆ

Dhanvantari Jayanti-2013

Dhanvantari Jayanti-2013

Saturday, January 11th, 2014

ಧನ್ವಂತರಿ ಜಯಂತಿ ದಿನಾಂಕ: ೨೯ನೇ ನವೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲಾ ಆವರಣ, ಗಿರಿನಗರ ‘ಆರೋಗ್ಯವೇ ಭಾಗ್ಯ’ ನಮ್ಮ ಹಿರಿಯರು ಆರೋಗ್ಯವನ್ನು ಭಾಗ್ಯವೆಂದು ಕರೆದಿದ್ದಾರೆ. ಯಾವ ಸಾಧನೆಗೇ ಆಗಲಿ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ಆಹಾರ-ವಿಹಾರಗಳನ್ನು ರೂಪಿಸಿದ್ದರು. ಪೂರ್ಣಪ್ರಮತಿಯಲ್ಲಿ ಆರೋಗ್ಯದಿನವಾಗಿ ಧನ್ವಂತರಿ ಜಯಂತಿ ಆಚರಿಸಲಾಗುವುದು. ಸಮುದ್ರ ಮಥನದಲ್ಲಿ ಅಮೃತದ ಕಲಶವನ್ನು ಹೊತ್ತು ತಂದ ಧನ್ವಂತರಿ ಅವತಾರವನ್ನು ಸ್ಮರಿಸಿ ಆರೋಗ್ಯವನ್ನು ಹೊಂದುವುದು ಇದರ ಉದ್ದೇಶ. ಈ ಉದ್ದೇಶ ಪೂರ್ತಿಗಾಗಿ ಆಯುರ್ವೇದ ವೈದ್ಯರಾದ ಪ್ರಾಣೇಶ್ ಕುಲಕರ್ಣಿ ಅವರು ನಮ್ಮೊಂದಿಗಿದ್ದರು. ಆಯುರ್ವೇದವನ್ನು ಅವರ ಮಾತುಗಳಲ್ಲೇ ಕೇಳುವುದಾದರೆ: ‘ಆಯು, ವೇದ’ ಎಂಬ ಎರಡು ಪದಗಳಿಂದ ಆದದ್ದು ಆಯುರ್ವೇದ. ಆಯು ಎಂದರೆ ಆಯಸ್ಸು. ಒಬ್ಬ ವ್ಯಕ್ತಿ ಹುಟ್ಟಿನಿಂದ ಕೊನೆಯ ಉಸಿರಿನವರೆಗೆ ಇರುವ ಅವಧಿ. ವೇದ ಎಂದರೆ ಜ್ಞಾನ. ಆಯಸ್ಸಿನ ಜ್ಞಾನವನ್ನು ಕೊಡುವ ಶಾಸ್ತ್ರವೇ ಆಯುರ್ವೇದ. ಇದನ್ನು ಏಕೆ ಕಲಿಯಬೇಕು? ಅಥವಾ ಏಕೆ ತಿಳಿಯಬೇಕು? ಕೃಷ್ಣ (೫ನೇ ತರಗತಿ):ನಮ್ಮ ಬಗ್ಗೆ ನಾವು ತಿಳಿಯಲು. ಅದನ್ನು ಕಲಿತು ಹಾಗೆ ನಡೆದರೆ ನಮಗೂ ಆರೋಗ್ಯ ಬರುವುದು. ಆರೋಗ್ಯ ಭಾಗ್ಯವೇ ಇಲ್ಲದಿದ್ದರೆ ಶಾಲೆಗೆ ಬರಲು ಆಗುವುದಿಲ್ಲ. ಮನೆಯಲ್ಲೇ ಇರಬೇಕಾಗುವುದು. ಆರೋಗ್ಯ ಇರುವ ವ್ಯಕ್ತಿಯ ಜೀವನ ದೀರ್ಘವಾಗಿರುತ್ತದೆ. ರೋಗಿಗಳ ಆಯಸ್ಸು ತುಂಬಾ ಕಡಿಮೆ. ಆರೋಗ್ಯದಿಂದಾಗಿ ಆಯಸ್ಸಿನ ರಕ್ಷಣೆಯಾಗುತ್ತದೆ. ಒಂದು ಗಿಡವನ್ನು ಬೆಳೆಸಲು ಏನು ಬೇಕು? ಮಕ್ಕಳು: ನೀರು, ಬೆಳಕು, ಗೊಬ್ಬರ, ಮಣ್ಣು… ನೀವು ಇಷ್ಟೆಲ್ಲ ಹಾಕಿ ಬೆಳೆಸಿದ ಮೇಲೆ ಯಾವುದೋ ಹಸು ಬಂದು ತಿಂದುಬಿಟ್ಟರೆ?! ಮಕ್ಕಳು: ಸಸಿಯನ್ನು ನೋಡಿಕೊಳ್ಳಬೇಕು. ಬೇಲಿ ಹಾಕಬೇಕು. For more photos Click Here ಗಿಡ ಬೆಳೆಯಲು ಪೂರಕವಾದ ಅಂಶಗಳನ್ನು ಹಾಕಬೇಕು ಮತ್ತು ನಾಶವಾಗದಂತೆ ನೋಡಿಕೊಳ್ಳಬೇಕು. ಇದ್ದದ್ದನ್ನು ಹೆಚ್ಚು ಮಾಡಿಕೊಳ್ಳುವುದು, ನಾಶವಾಗದಂತೆ ನೋಡಿಕೊಳ್ಳಬೇಕು. ದೇವರು ಆಯಸ್ಸನ್ನು ಕೊಟ್ಟಿದ್ದಾನೆ. ಅದನ್ನು ವೃದ್ಧಿಸುವ ಕೆಲಸ ಮಾಡಬೇಕು. ಕ್ಷಯವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕೆಲವೊಂದು ಆರೋಗ್ಯ ನಿಯಮಗಳನ್ನು ಪಾಲಿಸಬೇಕು. ಆರೋಗ್ಯದ ಸೂತ್ರಗಳಿವೆ. ಉದಾಹರಣೆಗೆ ದಿನಚರಿ. ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅನುಸರಿಸಬೇಕಾದ ನಿಯಮಗಳು. ಕೆಲವು ನಿಯಮಗಳನ್ನು ನಿಮಗೆ ಹೇಳುತ್ತೇನೆ. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಬ್ರಹ್ಮ ಎಂದರೆ ಜ್ಞಾನ. ಸೂರ್ಯೋದಯಕ್ಕಿಂತ ಮೊದಲು ೨ ಮುಹೂರ್ತಕ್ಕೆ ಮೊದಲು ಅಂದರೆ ೯೦ ನಿಮಿಷಕ್ಕೆ ಮೊದಲು ಬ್ರಾಹ್ಮೀ ಮುಹೂರ್ತ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ನಿಧಾನವಾಗಿ, ಬೇಸಿಗೆಯಲ್ಲಿ ಬೇಗನೆ ಸೂರ್ಯೋದಯವಾಗುತ್ತದೆ. ಋತುಗಳಿಗೆ ತಕ್ಕಂತೆ ಬ್ರಾಹ್ಮೀ ಮುಹೂರ್ತವನ್ನು ನಿಗದಿ ಮಾಡಿಕೊಂಡು ಬೆಳಗ್ಗೆ ಏಳಬೇಕು. ‘ಬ್ರಾಹ್ಮೇ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ’ ಅಂದರೆ ಸ್ವಸ್ಥ ವ್ಯಕ್ತಿ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮೀ ಮುಹೂರ್ತ ಕಳೆದರೂ ಮಲಗಿದ್ದರೆ ಆಯಸ್ಸು ಕ್ಷಯವಾಗುತ್ತದೆ. ಎದ್ದ ನಂತರ ಸ್ವಚ್ಛವಾಗಬೇಕು. ಹಲ್ಲನ್ನು ಉಜ್ಜಲು ಮೃದುವಾದ ಬ್ರಷ್‌ಅನ್ನು ಉಪಯೋಗಿಸಬೇಕು ಮತ್ತು ನಾವು ಬಳಸು ಪೇಸ್ಟ್ ಅನ್ನು ಸ್ವಲ್ಪವೇ ಬಳಸಬೇಕು. ಅಥವಾ ಆಧುನಿಕ ಪೇಸ್ಟ್ ಬಳಸದೆ ಗಿಡಮೂಲಿಕೆಗಳನ್ನು ಬಳಸಿದರೆ ಇನ್ನೂ ಒಳ್ಳೆಯದು. ಇದರಿಂದ ಹಲ್ಲಿಗೆ ಕ್ರಿಮಿಗಳು ಬರುವುದಿಲ್ಲ ಮತ್ತು ಒಸಡುಗಳು ಬಲಗೊಳ್ಳುತ್ತವೆ. ದಂತಹರ್ಷ ರೋಗಕ್ಕೆ (ಬಿಸಿ ಅಥವಾ ತಂಪಾದ ಪದಾರ್ಥ ತಿಂದಾಗ ಹಲ್ಲು ಜುಮ್ ಎನಿಸುವುದು) ಗಿಡಮೂಲಿಕೆಗಳು ಔಷಧಿ. ನಮ್ಮ ಹಲ್ಲು ಪುಡಿ ಕಷಾಯ, ಕಟು, ತಿಕ್ತ (ಒಗರು, ಖಾರ, ಕಹಿ) ಈ ಮೂರು ರುಚಿಗಳಿಂದ ಕೂಡಿರಬೇಕು. ಮೃದುವಾಗಿ ಹಲ್ಲನ್ನು ಉಜ್ಜಬೇಕು. ಯಾವಾಗೆಲ್ಲಾ ಆಹಾರ ತಿನ್ನಿತ್ತೇವೋ ಆಗೆಲ್ಲಾ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳಬೇಕು. ಹಲ್ಲನ್ನು ಉಜ್ಜಲು ದಂತಕಾಷ್ಠವನ್ನು (ಗಿಡದ ಟೊಂಗೆಯನ್ನು ಕೂರ್ಚದಂತೆ ಮಾಡಿದ ಸಾಧನ) ಉಪಯೋಗಿಸಬಹುದು. ಹಲ್ಲು ಉಜ್ಜಿದ ನಂತರ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಬೇಕು. ತಲೆಯಿಂದ ಕಾಲಿನವರೆಗೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. ಇದರಿಂದ ಚರ್ಮವು ಮೃದುವಾಗಿ ಹೊಳಪಾಗಿರುತ್ತದೆ. ಮುದಿತನವನ್ನು ಇದರಿಂದ ದೂರಮಾಡಬಹುದು. ಅಂದರೆ ಚರ್ಮ ಸುಕ್ಕುಗಟ್ಟುವಿಕೆಯನ್ನು ಇದರಿಂದ ತಡೆಯಬಹುದು. ಇದನ್ನು ಅಭ್ಯಂಗ ಎಂದು ಕರೆಯುವರು. ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಶ್ರಮವೆಲ್ಲಾ ಹೋಗಿ, ಕಣ್ಣುಗಳ ರಕ್ಷಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಶರೀರವು ಗಟ್ಟಿಯಾಗುತ್ತಾ ಹೋಗುತ್ತದೆ. ಮಕ್ಕಳು: ತಲೆಗೆ ಎಣ್ಣೆ ಹಚ್ಚುವುದರಿಂದ ಕಣ್ಣು ಹೇಗೆ ಶುದ್ಧವಾಗತ್ತೆ? ಉತ್ತರ: ಕಣ್ಣಿಗೂ ತಲೆಗೂ ಒಳಗೆ ಒಂದು ಲಿಂಕ್ ಇರುತ್ತದೆ. ಮುಖದಲ್ಲಿರುವ ಎಲ್ಲಾ ಜ್ಞಾನೇಂದ್ರಿಯಗಳು ಅಂದರೆ ಕಣ್ಣು, ಕಿವಿ, ಮೂಗು, ನಾಲಗೆಗಳು ಒಂದು ಬಿಂದುವಿನಲ್ಲಿ ಸೇರುತ್ತವೆ. ಮರ್ಮ ಎನ್ನುತ್ತಾರೆ. ಅಂದರೆ ಸೂಕ್ಷ್ಮ ಅವಯವ. ತಲೆಗೆ ಎಣ್ಣೆ ಹಚ್ಚುವ್ಯದರಿಂದ ಈ ಬಿಂದುವಿಗೆ ಪುಷ್ಟಿ ಸಿಗುತ್ತದೆ. ಮುಖದಲ್ಲಿರುವ ಎಲ್ಲಾ ಇಂದ್ರಿಯಗಳೂ ಶಕ್ತಿಯುತವಾಗುತ್ತವೆ. ಮೂರು ಅವಯವಗಳಿಗೆ (ಮುಖ್ಯವಾಗಿ ತಲೆ, ಕಿವಿ, ಅಂಗಾಲುಗಳಿಗೆ) ಎಣ್ಣೆಯನ್ನು ಹಚ್ಚಬೇಕು. ಕಿವಿಗೆ ಎಣ್ಣೆ ಹಾಕುವುದರಿಂದ ಕಿವಿ ನೋವು ಬರುವುದಿಲ್ಲ. ಹನುಮನ್ಯ ಎಂಬ ಒಂದು ರೋಗ. ಅಂದರೆ ದವಡೆಯು ಒಂದು ಸ್ಥಿತಿಯಲ್ಲಿ ಸ್ಥಿರವಾಗಿ ನಿಲ್ಲುವುದು. ತೆಗೆದರೆ ತೆರೆದಂತೆ, ಮುಚ್ಚಿದರೆ ಮುಚ್ಚಿದಂತೆಯೇ ಇರುವುದು. ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದವಡೆ ಚೆನ್ನಾಗಿ ಇರುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಮಕ್ಕಳು ವಿಶೇಷವಾಗಿ ತುಪ್ಪ ತಿನ್ನಬೇಕು. ಇದರಿಂದ ಜ್ಞಾನವೃದ್ಧಿಯಾಗುತ್ತದೆ. ಬುದ್ಧಿ ಚೆನ್ನಾಗಿ ಬೇಕಾದರೆ ಚೆನ್ನಾಗಿ ತುಪ್ಪ ತಿನ್ನಬೇಕು. ಹೀಗೆ ತುಪ್ಪದ ಮಹತ್ವವನ್ನು ತಿಳಿಸುವ ಪುಟ್ಟ ಕಥೆಯೊಂದನ್ನು ಹೇಳಿ ಕುಲಕರ್ಣಿ ಅವರು ವಿರಮಿಸಿದರು. ಮುಂದಿನ ದಿನಗಳಲ್ಲಿ ಆಯುರ್ವೇದ, ಶಿಲ್ಪಕಲೆಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಉದ್ದೇಶ ಶಾಲೆಯದು, ಪ್ರಾಣೇಶ್ ಕುಲಕರ್ಣಿ ಅವರು ಆಯುರ್ವೇದ ವಿಭಾಗಕ್ಕಾಗಿ ವಿಶೇಷ ಪಠ್ಯವನ್ನು ತಯಾರುಮಾಡಿ ದಿನಚರಿಯಿಂದ ಆರಂಭವಾದ ಇಂದಿನ ಪಾಠವನ್ನು ವಿವಿಧ ವಯಸ್ಸಿನಲ್ಲಿ ಹೇಗೆ ಬೆಳೆಸಬಹುದು ಎಂಬುದನ್ನೆಲ್ಲ ತಿಳಿಸಲು ನಮ್ಮೊಂದಿಗೆ ಇರಬೇಕು ಎಂದು ಕೇಳಿಕೊಳ್ಳಲಾಯಿತು. ಅವರು ಸಂತೋಷದಿಂದ ಒಪ್ಪಿದ್ದು ನಮ್ಮ ಭಾಗ್ಯವೇ ಸರಿ.

Kanakadaasa Jayanti - 2013

Kanakadaasa Jayanti – 2013

Saturday, January 11th, 2014

ಕನಕದಾಸ ಜಯಂತಿ ದಿನಾಂಕ: ೨೦/೧೧/೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ à³®.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ ವಕೀಲರು ಮತ್ತು ಕನಕ ಅಧ್ಯಯನ ಪೀಠದ ಸದಸ್ಯರೂ ಆಗಿದ್ದಾರೆ. ಇವರೊಂದಿಗೆ ನಮ್ಮವರೇ ಆದ ಸತ್ಯನಾರಾಯಣಾಚಾರ್ಯರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮವು ಆರಂಭಿಸಿದೆವು. ಈ ದಿನದ ವಿಶೇಷವೆಂದರೆ ಕನಕದಾಸರ ಹಲವು ಕೀರ್ತನೆಗಳನ್ನು ಅಭ್ಯಾಸ ಮಾಡಿ ಮಕ್ಕಳೆಲ್ಲರೂ ಅತಿಥಿಗಳ ಮುಂದೆ ಪ್ರಸ್ತುತ ಪಡಿಸಿದ್ದು. ಕನಕದಾಸರು ದೇವರನ್ನು ಕುರಿತು ಪದ್ಯಗಳನ್ನು ರಚಿಸಿ ಹಾಡು-ನೃತ್ಯಗಳ ಮೂಲಕ ಸಮಾಜದ ಜನರನ್ನು ಎಚ್ಚರಿಸದಂತೆ ನಮ್ಮ ಮಕ್ಕಳೂ ಅವರ ಹಾಡುಗಳನ್ನು ಹಾಡಿ, ನೃತ್ಯವನ್ನು ಮಾಡಿ ತಾವೂ ಜಾಗೃತಾಗಿರುವುದಾಗಿ ಸೂಚಸಿದರು. ದಶವತಾರಗಳನ್ನು ಸರಳ ಭಾಷೆಯಲ್ಲಿ ಹೇಳಿರುವ ದೇವಿ ನಮ್ಮ ದ್ಯಾವರು ಬಂದವ್ರೆ ಎಂಬ ಹಾಡನ್ನು ಮಕ್ಕಳು ಚೆನ್ನಾಗಿ ಅಭಿನಯಿಸಿ ತೋರಿಸಿದರು. ಕನಕದಾಸರ ಹುಟ್ಟೂರು, ಜೀವನವನ್ನು ಪರಿಚಯಿಸಲಾಯಿತು. ಪುಟ್ಟ ಮಕ್ಕಳು ರಾಮಾಯಣದ ಸನ್ನಿವೇಶವನ್ನು ಮಾಡಿ ತೋರಿಸಿದರು. ಮಂಜುನಾಥ್ ಅವರು ಮಾತನಾಡುತ್ತಾ: ಕನಕಜಯಂತಿಯನ್ನು ಭಕ್ತಿಯ ದಿನವೆಂದು ಆಚರಿಸುತ್ತೇವೆ. ಬೇರೆ ಬೇರೆ ಕಡೆ ಕನಕದಾಸ ಜಯಂತಿಯ ಆಚರಿಸುತ್ತಾರೆ. ಆದರೆ ಪೂರ್ಣಪ್ರಮತಿಯಲ್ಲಿ ಕನಕದಾಸ ಜಯಂತಿ ಆಚರಿಸುತ್ತಾರೆ ಎಂದು ಕೇಳಿ ಆಶ್ಚರ್ಯವಾಯಿತು. ಅದಕ್ಕೆ ಬೆಳಗಿನಿಂದ ನಿಮ್ಮೊಂದಿಗೆ ಇರಲು ಬಂದೆ. ನೀವೆಲ್ಲ ಹಾಡನ್ನು ಹೇಳಿದಿರಿ, ನರ್ತನ ಮಾಡಿದಿರಿ. ಕನಕದಾಸರು ಸಾಮಾನ್ಯ ಕುಟುಂಬದಲ್ಲಿ ಬಂದವರು. ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದೇ ಎಲ್ಲರ ಉದ್ದೇಶ. ಇದನ್ನು ಸರಳ ಹಾಡುಗಳಲ್ಲಿ ಎಲ್ಲರಿಗೂ ತಿಳಿಸಿದ್ದು ಕನಕದಾಸರು. ಅವರು ದೈಹಿಕವಾಗಿ ಮರಣಹೊಂದಿ ಬಹಳ ದಿನಗಳಾಗಿದ್ದರೂ ಆದಿಕೇಶವನನ್ನು ಒಲಿಸಿಕೊಳ್ಳಲು ಅವರು ನಡೆದಿರುವ ಹಾದಿ ನಮಗೂ ಅವಶ್ಯಕ ಎಂಬ ಕಾರಣಕ್ಕೆ ಅವನ್ನು ಸ್ಮರಿಸಿಕೊಳ್ಳುತ್ತೇವೆ. ನಿಮ್ಮೊಂದಿಗೆ ವಿದ್ಯಾರ್ಥಿಯಾಗಿ ನಾನು ಕಲಿತೆ. ‘ಭಕ್ತಿಯಿಂದ ಪೂಜೆ ಮಾಡುವುದು, ತಪ್ಪಿನ ಹಾದಿಯಿಂದ ರಕ್ಷಿಸು ಎಂದು ದೇವರನ್ನು ಬೇಡುವುದು’ ನಮ್ಮ ದಾರಿಯಾಗಬೇಕು. ತಪ್ಪು ಮಾಡಿದಾಗ ನಿಮ್ಮ ಶಿಕ್ಷಕರು ತಿದ್ದುವಂತೆ ಕನಕದಾಸರು ದೇವರು ತನ್ನನ್ನು ತಿದ್ದಬೇಕೆಂದು ಹಾಡಿನ ಮೂಲಕ ಕೇಳುತ್ತಾರೆ. ಧ್ಯಾನ ಮಾಡುವ ಬುದ್ಧಿಯನ್ನು ಕೊಡೆಂದು ಬೇಡಿಕೊಳ್ಳುತ್ತಾರೆ. ಆ ಭಕ್ತಿಯ ಮಾರ್ಗವನ್ನು ತಿಳಿಯಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕನಕದಾಸರ ಹಾಡುಗಳನ್ನು ನಾವು ಕಲಿಯಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ನೀವು ಈ ಪ್ರಯತ್ನ ಮಾಡುತ್ತಾ ಇಂದು ಕನಕದಾಸ ಜಯಂತಿಯನ್ನು ಆಚರಿಸುತ್ತಿದ್ದೀರಿ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ. ಪುಸ್ತಕದಲ್ಲಿರುವುದಷ್ಟೇ ಅಲ್ಲದೆ ಬೇರೆ ಅನೇಕ ವಿಚಾರಗಳನ್ನು ನಿಮ್ಮ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂಬ ಕಿವಿಮಾತನ್ನು ಮಕ್ಕಳಿಗೆ ಹೇಳಿದರು. ನಂತರ ಸತ್ಯನಾರಾಯಣಾಚಾರ್ಯರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕನಕ ದಾಸರ ಕೀರ್ತನೆಯೊಂದರ ಸಾಲನ್ನು ಸರಳವಾಗಿ ಮಕ್ಕಳಿಗೆ ಅರ್ಥಮಾಡಿಸಿದರು. ಇವರ ಮಾತಿನ ಸಾರಾಂಶ ಹೀಗಿದೆ: ಸತ್ಯವನ್ನು ಹೇಳಲು ಧೈರ್ಯ ಬೇಕು. ಜಯಂತಿ ಎಂದರೆ ಹುಟ್ಟಿದ ಹಬ್ಬ. ನೀವೆಲ್ಲ ನಿಮ್ಮ ಹುಟ್ಟಿದ ಹಬ್ಬವನ್ನು ಆಚರಿಸಲು ದೀಪವನ್ನು ಹಚ್ಚುತ್ತೀರಿ. ನಮ್ಮ ನಡುವೆ ಇಲ್ಲದ ಹಿರಿಯರ ಹುಟ್ಟಿದ ಹಬ್ಬಕ್ಕಾಗಿ ಶ್ರಾದ್ಧ ಮಾಡುತ್ತೇವೆ. ಜಯಂತಿ ಎಂದರೆ ಇನ್ನೂ ಬದುಕುರುವವರಿಗೆ ಮಾಡುವುದು. ಅಂದರೆ ನಾವು ಇಂದು ಕನಕಜಯಂತಿ ಮಾಡುತ್ತಿದ್ದೇವೆ. ಕನಕದಾಸರು ಹಾಡುಗಳ ಮೂಲಕ ಭಕ್ತಿಯ ಮೂಲಕ ನಮ್ಮೊಳಗೆ ಇದ್ದಾರೆ. ಶರೀರದಿಂದ ಅಲ್ಲದೆ ತತ್ವವಾಗಿ ನಮ್ಮೊಳಗೆ ಇದ್ದಾರೆ. ಒಂದು ಕಾಲದಲ್ಲಿ ಭಕ್ತಿ ಎಂದರೆ ಇಷ್ಟುದ್ದ ಗಡ್ಡ ಬಿಟ್ಟು, ಕಾಡಿನಲ್ಲಿ ತಪಸ್ಸು ಮಾಡುವ, ಕಚ್ಚೆ ಹಾಕಿದವರಿಗೆ ಮಾತ್ರ ಮೀಸಲು ಎಂಬ ಅಭಿಪ್ರಾಯವಿತ್ತು. ಉಳಿದವರು ಕೆಲಸದಲ್ಲಿ ಮಾತ್ರ ಇರಬೇಕು ಎಂಬ ಭಾವನೆ ಇತ್ತು. ಆದರೆ ಕನಕ ದಾಸರು ಬಂದು ‘ಭಕ್ತಿ ಎಂಬುದು ಯಾವುದೋ ಒಂದು ಗುಂಪಿನದಲ್ಲ. ಭಕ್ತಿ ಎಂಬುದು ಎಲ್ಲರ ಸ್ವತ್ತು’ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ‘ನಾವು ಗಾಯತ್ರಿ ಜಪ ಮಾಡುತ್ತೇವೆ, ಯಜ್ಞೋಪವೀತ ಹಾಕಿದ್ದೇವೆ, ನಾವು ಮಾತ್ರ ಭಕ್ತಿ ಮಾಡಬೇಕು’ ಎಂದು ನಿಮ್ಮ ಮನಸ್ಸಿಲ್ಲಿದ್ದರೆ ತೆಗೆದುಹಾಕಿ. ಅದಕ್ಕೇ ಕನಕದಾಸ ಜಯಂತಿ ಮಾಡುವುದು. ಪ್ರತಿಯೊಬ್ಬರು ದೇವಸ್ಥಾನದಲ್ಲಿ ಕೂತು ಪೂಜೆ ಮಾಡುವುದಾದರೆ ಕೃಷಿ ಮಾಡುವವರಾರು? ನಾವು ತಿನ್ನುವುದು ಏನನ್ನು? ಲೋಕದಲ್ಲಿ ಎಲ್ಲ ತರಹದ ಜನ ಇದ್ದರೆ ಮಾತ್ರ ಸಮಾಜ ಸರಿಯಾಗಿ ನಡೆಯುವುದು. ಪೂಜೆ, ಅನುಷ್ಠಾನ ಮಾಡುವಾಗ ಶುದ್ಧವಾಗಿರಬೇಕು. ಬಿ.ಟಿ.ಎಸ್ ಬಸ್‌ನಲ್ಲಿ ಹೋಗುವಾಗ ಎಲ್ಲರೊಂದಿಗೆ ನಾವು ಒಂದಾಗಿ ಇರಬೇಕು. ಮಡಿ ಮೈಲಿಗೆ ಮನೆಯ ಪೂಜೆಯ ಸಂದರ್ಭದಲ್ಲಿ ಮಾತ್ರ ಎಂಬುದನ್ನು ಗಮನಿಸಿ ನಾವು ಅಂತಃಕರಣದಿಂದ ಒಪ್ಪಿಕೊಳ್ಳುವ ವಿಷಯ ಏನೆಂದರೆ, ಸಮಾಜದಲ್ಲಿ ಯಾವುದೇ ಕಾರಣದಿಂದ ಜಾತಿಭೇದ, ಮತಭೇದ ಅನ್ನುವ ಕೀಳು ಭಾವನೆಗಳನ್ನು ಉಳಿಸಿಕೊಳ್ಳುವುದಿಲ್ಲ. ಆ ರೀತಿ ತಪ್ಪು ಮಾಡುವ ವ್ಯಕ್ತಿಗಳನ್ನು ದೂಷಿಸುತ್ತೇವೆ. ಜಾತಿಮತ ಭೇದವನ್ನು ಕಿತ್ತೊಗೆಯಬೇಕು ಎಂಬ ದೀಕ್ಷೆಯನ್ನು ಹೊಂದಿದ್ದೇವೆ ಎಂದು ಪ್ರತಿಜ್ಞೆ ಮಾಡಿದರೆ ಕನಕದಾಸರು ನಗುತ್ತಿರುತ್ತಾರೆ. ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು, ವಸುಧೆಯೊಳು ಭೂ ಸುರರು ಉಣಲಿಲ್ಲವೇ? ಹಸುವಿನ ಮಾಂಸದಿಂದ ಹಾಲು ಉತ್ಪತ್ತಿಯಾದರೂ ಭೂಸುರರೆಂದು ಕರೆಯಲ್ಪಡುವ ಬ್ರಾಹ್ಮಣರು ಕುಡಿದರಲ್ಲ?! ಎಂದು ಕನಕದಾಸರು ಪದ್ಯದ ಮೂಲಕ ಕೇಳುತ್ತಾರೆ. ಹಿಂದೆ ಕೆಲವು ಬ್ರಾಹ್ಮಣರು ಮಾಂಸ ತಿನ್ನುವವರು ಎಂದು ದೂರ’ ಎಂದು ಭೇದವನ್ನು ತೋರಿಸುತ್ತಿದ್ದರು. ದೇವತಾನುಷ್ಠಾನ ಮಾಡುವವರು ತಿನ್ನಬಾರದು ಎಂದು ಹೇಳಿದ್ದಾರೆ. ಯಾರೂ ತಿನ್ನಬಾರದು ಎಂದಲ್ಲ. ಅದನ್ನು ಒತ್ತಿ ಹೇಳಿದ್ದು ಕನಕದಾಸರು. ಕೈಗಳಲ್ಲಿ ೩೬, ಕಾಲುಗಳಲ್ಲಿ ೨೬, ಭುಜಗಳಲ್ಲಿ ೪, ಸೊಂಟದಲ್ಲಿ ೨ ಹೀಗೆ ೬೮ ಕೀಲುಗಳ ದೇಹಕ್ಕೆ ನಾವು ಅತಿಥಿಗಳು ಮಾತ್ರ ಎಂದು ಕನಕದಾಸರ ಒಂದು ಪದ್ಯವನ್ನು ವಿವರಿಸಿದರು. ಈ ಕನಕದಾಸ ಜಯಂತಿಯ ಆಚರಣೆಯು ಸಮಾಜಪರವಾದ ಮಕ್ಕಳನ್ನು ಕೊಡಲಿ ಎಂದು ಹಾರೈಸುತ್ತಾ ವಿರಮಿಸಿದರು. ಅತಿಥಿಗಳಿಗೆ ಧನ್ಯವಾದಗಳನ್ನು ಹೇಳಿ ಕಾರ್ಯಕ್ರಮಕ್ಕೆ ತೆರೆಯನ್ನು ಹಾಕಲಾಯಿತು. ಸಭೆಯಲ್ಲಿ ಹಾಡಿದ ದೇವಿ ನಮ್ಮ ದ್ಯಾವರು ಬಂದವ್ರೆ, ಕುರುಬರು ನಾವು, ಈಶ ನಿನ್ನ ಚರಣ ಭಜನೆ ಮುಂದಾದ ಹಾಡುಗಳು ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ಕನಕದಾಸರು ನಮ್ಮ ಭಕ್ತಿಯ ತರಂಗಗಳಲ್ಲಿ ಜೀವಂತವಲ್ಲವೆ?! For more photos Click Here

Valmiki Jayanti - 2013

Valmiki Jayanti – 2013

Saturday, January 11th, 2014

ವಾಲ್ಮೀಕಿ ಜಯಂತಿ ದಿನಾಂಕ: ೧೮ನೇ ಅಕ್ಟೋಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ ಉಪಮೆಯಿಂದ ವಿವರಿಸಿದರು: ಎರಡು ಹಕ್ಕಿಗಳಿವೆ. ಒಂದು T ಮತ್ತೊಂದು T. ಒಂದು ತತ್ವದರ್ಶನ ಎಂಬ ಹೆಸರಿನ ಹಕ್ಕಿ. ಮತ್ತೊಂದು ಟಿ.ವಿ. ಎಂಬ ಹೆಸರಿನ ಹಕ್ಕಿ. ರಾಮ ಸೀತೆಯರು ಒಟ್ಟಿಗೆ ಇರಬೇಕು ಆದರೆ ಬೇಡನೊಬ್ಬ ರಾವಣನ ರೂಪದಲ್ಲಿ ಬಂದು ಬಾಣ ಬಿಟ್ಟ. ಆ ಬಾಣವೇ ಟಿ.ವಿ.ಯ ರಿಮೋಟ್. ರಿಮೋಟ್‌ನ ಗುಂಡಿಯನ್ನು ಒತ್ತಿದರೆ ಟಿ.ವಿ. ಪ್ರಾರಂಭವಾಗುತ್ತದೆ. ಆಗ ತತ್ವದರ್ಶದ ಕಡೆ ಗಮನವಿಲ್ಲದಾಗುತ್ತದೆ. ಹಾಗಾಗಿ ರಾವಣನನ್ನು ಬರಗೊಡದೆ ತತ್ವದರ್ಶನದೆಡೆ ಗಮನ ಹರಿಸೋಣ ಎಂಬ ಸಂದೇಶವನ್ನು ವಾಲ್ಮೀಕಿ ಜಯಂತಿಯಂದು ನೆನಪಿಡಬೇಕೆಂದು ಹೇಳಿದರು. ಎಂದಿನಂತೆ ಗಂಗೆಗೆ ಪ್ರಾರ್ಥನೆಯನ್ನು ಸಲ್ಲಿಸಿ ನಮ್ಮನ್ನು ಸುಭಿಕ್ಷವಾಗಿಡುವಂತೆ ಬೇಡಿಕೊಂಡೆವು. ನಂತರ ಮಕ್ಕಳು ಕಲಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಅಂತೆಯೇ ಅಧ್ಯಾಪಕರು ಮಕ್ಕಳ ಮುಂದಿನ ಬೆಳವಣಿಗೆಗಾಗಿ ತಾವು ರೂಪಿಸಿಕೊಂಡಿರುವ ವಿವಿಧ ಯೋಜನೆಗಳನ್ನು ಅತಿಥಿಗಳಿಗೂ ಮಕ್ಕಳಿಗೂ ವಿವರಿಸಿದರು. ಇದೊಂದು ಅವಲೋಕನ ಕಾರ್ಯಕ್ರಮವೇ ಆಗಿತ್ತು. ಅತಿಥಿಗಳಾಗಿ ಬಂದಿದ್ದ ಡಾ. ಸುನೀತಾರವರು ತಮ್ಮ ಚುರುಕು ಮಾತುಗಳಿಂದ ಮಕ್ಕಳೊಡನೆ ಸಂಭಾಷಣೆ ನಡೆಸಿದರು. ತನ್ಮೂಲಕ ಹಲವು ಮಹತ್ವದ ಸಲಹೆಗಳನ್ನು ನೀಡಿದರು: ಡಾ.ಸುನೀತ:     à²ªà³à²°à²¤à²¿à²¬à²¿à²‚ಬ ಯಾವಾಗ ಕಾಣಿಸುತ್ತದೆ? ಮಕ್ಕಳು:     à²¸à³à²Ÿà³€à²²à³, ಸಿಲ್ವರ್, ಕಣ್ಣಿನಲ್ಲಿ, ನೀರಿನಲ್ಲಿ, ಕನ್ನಡಿಯಲ್ಲಿ ಕಾಣುತ್ತದೆ. ಡಾ.ಸುನೀತ:     à²…ದನ್ನು ಪ್ರತಿಬಿಂಬ ಎಂದು ಏಕೆ ಕರೆಯುತ್ತೇವೆ? ಮಕ್ಕಳು:     à²¨à²¾à²µà³ ಹೇಗಿರುತ್ತೇವೋ ಹಾಗೇ ಕಾಣುತ್ತದೆ, ಅದಕ್ಕೆ ಅದನ್ನು ಪ್ರತಿಬಿಂಬ ಎನ್ನುತ್ತೇವೆ. ವಸ್ತು ಬಲಭಾಗಕ್ಕೆ ಇದ್ದರು ಅದು ಎಡಭಾಗಕ್ಕೆ ತೋರಿಸುತ್ತದೆ. ಡಾ.ಸುನೀತ:     à²…ದನ್ನು ಏನೆಂದು ಕರೆಯುತ್ತಾರೆ? ಯಾಕೆ ಹಾಗೆ ತೋರಿಸುತ್ತದೆ? ಮಕ್ಕಳು:     à²¬à²¿à²‚ಬ-ಪ್ರತಿಬಿಂಬ ಎನ್ನುತ್ತಾರೆ. ಡಾ.ಸುನೀತ:    Very good,, ಅದನ್ನು Mirror image ಅಂತ ಕರಿತಾರಲ್ಲವೇ? ಈಗ ನಿಮ್ಮ ಪಕ್ಕದಲ್ಲಿ ಕುಳಿತಿರುವ ನಿಮ್ಮ ಸ್ನೇಹಿತರ ಕಡೆ ತಿರುಗಿ ಪ್ರತಿಬಿಂಬ ಕಾಣುತ್ತಿದೆಯೇ, ಹೇಳಿ. ಮಕ್ಕಳು:     à²•à²£à³à²£à²¿à²¨à²²à³à²²à²¿ ಡಾ.ಸುನೀತ:     à²…ವರಲ್ಲಿರುವ ಒಂದು ಒಳ್ಳೆಯ ಗುಣವನ್ನು ಹೇಳಿರಿ. ಮಕ್ಕಳು:     à²…ವಳು ಚೆನ್ನಾಗಿದ್ದಾಳೆ, ಅವನು ಪೆನ್ಸಿಲ್ ಕೊಟ್ಟು ಸಹಾಯ ಮಾಡುತ್ತಾನೆ, ಅವಳು ಹಾಡುತ್ತಾಳೆ, ಅವನು ಎಲ್ಲರಿಗೂ ಸಹಾಯ ಮಾಡುತ್ತಾನೆ, ಅವನು ಸ್ನೇಹದಿಂದ ಇರುತ್ತಾನೆ, ಅವಳು ಸುಳ್ಳು ಹೇಳುವುದಿಲ್ಲ (ಮಕ್ಕಳು ವಿವಿಧ ಉತ್ತರಗಳನ್ನು ನೀಡಿದರು) ಡಾ.ಸುನೀತ:     à²¨à³€à²µà³ ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೀರಿ, ವಾಲ್ಮೀಕಿ ಎಂಬ ಹೆಸರು ಏಕೆ ಬಂದಿತು? ಕೃಷ್ಣ (ತರಗತಿ ೫ ಬಿ): ಅವರು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆದಿದ್ದು. ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕ ಎನ್ನುತ್ತಾರೆ. ಅವರು ನಂತರ ವಲ್ಮೀಕದಿಂದ ಎದ್ದು ಬಂದದ್ದಕ್ಕೆ ವಾಲ್ಮೀಕಿ ಎಂದು ಹೆಸರಾಯಿತು. ಡಾ.ಸುನೀತ:     à²¹à³à²¤à³à²¤ ಯಾರು ಕಟ್ಟುತ್ತಾರೆ ಹೇಗೆ ಕಟ್ಟುತ್ತಾರೆ ಗೊತ್ತಾ? ಮಕ್ಕಳು:     à²‡à²°à³à²µà³† ಮತ್ತು ಟರ್ಮೈಟ್ಸ್ ಕಟ್ಟುತ್ತವೆ. ಮಣ್ಣಿನಿಂದ ಕಟ್ಟುತ್ತವೆ . Saliva ದಿಂದ ಕಟ್ಟುತ್ತವೆ. ಡಾ.ಸುನೀತ:     à²¹à³‡à²—ೆ ಕಟ್ಟುತ್ತವೆ ಗೊತ್ತಾ? ನಿಮಗೆ ಮಣ್ಣು ಕೊಟ್ಟು ಮನೆ ಕಟ್ಟಲು ಹೇಳಿದರೆ ಕಟ್ಟಲು ಸಾಧ್ಯವೇ? ಮಕ್ಕಳು:     à²®à²£à³à²£à³, ಇಟ್ಟಿಗೆ, ಸಿಮೆಂಟ್, ಇಂಜಿನಿಯರ್, ಮನೆ ಕಟ್ಟುವವರು ಎಲ್ಲಾ ಬೇಕು. ಡಾ.ಸುನೀತ:     à²‡à²°à³à²µà³†à²—ಳು ಹೇಗೆ ಕಟ್ಟುತ್ತವೆ. ಇವರೆಲ್ಲ ಇರುವೆಗಳ ಹತ್ತಿರ ಇವೆಯಾ? ಮಕ್ಕಳು:     à²‡à²°à³à²µà³†à²—ಳಲ್ಲಿ Soldier Ant, Worker Ant ಅಂತ ಇರತ್ತೆ. ಅವುಗಳು ಕಟ್ಟುತ್ತವೆ. ಡಾ.ಸುನೀತ:     à²‡à²°à³à²µà³†à²—ಳಿಂದ ನಾವೇನು ಕಲಿಯಬಹುದು? ಮಕ್ಕಳು:     à²¸à²¾à²²à²¿à²¨à²²à³à²²à²¿ ಹೋಗಬೇಕು, Hard work ಮಾಡಬೇಕು, Active ಆಗಿ ಕೆಲಸ ಮಾಡಬೇಕು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಡಾ.ಸುನೀತ:     Very Good , ವಾಲ್ಮೀಕಿ ಋಷಿಯಿಂದ ಏನೇನು ಕಲಿಯಬೇಕು. ವಾಲ್ಮೀಕಿ ಋಷಿ ಏನೆಲ್ಲಾ ಕಲಿಸುತ್ತಾರೆ? ಮಕ್ಕಳು:    Practice makes perfect. ಡಾ.ಸುನೀತ:     à²¸à²°à³ ತುಂಬಾ ಚೆನ್ನಾಗಿ ಹೇಳಿದರು. ಎರಡು ಕ್ರೌಂಚ ಹಕ್ಕಿಗಳಿದ್ದವು, ಗಂಡು ಹಕ್ಕಿಯನ್ನು ಬೇಡ ಕೊಂದನು ಎಂದು. ನಮ್ಮ ಸುತ್ತ-ಮುತ್ತ ಬಹಳಷ್ಟು ವಿಚಾರಗಳು ನಡೆಯುತ್ತಿರುತ್ತವೆ. ನಾವು ನಿಜವಾಗಲು ಅದರ ಬಗ್ಗೆ ಯೋಚಿಸುತ್ತೇವೆಯೇ? ದಾರಿಯಲ್ಲಿ ಯಾರೋ ಭಿಕ್ಷುಕನನ್ನು ನೋಡುತ್ತೇವೆ, ಯಾವುದೋ ಅಪಘಾತವನ್ನು ನೋಡುತ್ತೇವೆ, ಎಷ್ಟು ಜನ ನಿಂತು ಅವರಿಗೆ ಸಹಾಯ ಮಾಡುತ್ತೇವೆ? ಮಕ್ಕಳೆ, ನೀವು ಮತ್ತೊಬ್ಬ ವಾಲ್ಮೀಕಿ ಆಗಬೇಕಿದ್ದರೆ ನಿಮ್ಮ ಸುತ್ತ-ಮುತ್ತ ನಡೆಯುವ ಕ್ರಿಯೆಗಳನ್ನು ಹೃಯದಿಂದ ಅನುಭವಿಸುವುದನ್ನು ಕಲಿಯಬೇಕು. ನೀವು ಯಾವುದನ್ನೇ ಹೃದಯದಿಂದ ಅನುಭವಿಸಿದಾಗ ಮಾತ್ರ ಸೃಜನಾತ್ಮಕವಾಗಿ ಕೆಲಸವನ್ನು ಮಾಡಲು ಸಾಧ್ಯ, ಕೆಸಲವನ್ನು ಚೆನ್ನಾಗಿ ಮಾಡಲು ಸಾಧ್ಯ. ಇಲ್ಲದಿದ್ದರೆ ರಾಮಾಯಣವೇ ಬರೆಯಲು ಆಗುತ್ತಿರಲಿಲ್ಲ. ನಾನು ಮತ್ತೆ ಪ್ರತಿಬಿಂಬದ ಬಗ್ಗೆ ಹೇಳುತ್ತೇನೆ…ನಿಮ್ಮನ್ನು ನೀವು ಗಮನಿಸಿಕೊಂಡಾಗ ನಿಮ್ಮ ಪ್ರತಿಬಿಂಬ ನಿಮಗೆ ಕಾಣುತ್ತದೆ. ತಪ್ಪುಗಳನ್ನು ಮಾಡುತ್ತಿದ್ದರೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಯಾವುದರಲ್ಲಾದರೂ ಚೆನ್ನಾಗಿದ್ದರೆ ಹೆಚ್ಚು ಜಂಭಪಡದೆ ಎಲ್ಲರೊಂದಿಗೆ ಸ್ನೇಹದಿಂದ ಇರುವುದು, ನಿಮ್ಮ ಅಧ್ಯಾಪಕರು ನಿಮಗಾಗಿ ಬಹಳಷ್ಟು ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಗೌರವ ಕೊಟ್ಟು ಚೆನ್ನಾಗಿ ಕಲಿಯಿರಿ. ಮುಂದೆ ಬಹಳಷ್ಟು ವಾಲ್ಮೀಕಿಗಳು ಈ ಮಕ್ಕಳಲ್ಲಿ ತಯಾರಾಗಬಹುದು. All the best. ನಂತರ ಬಂದ ಅತಿಥಿಗಳಿಗೆ ನಮ್ಮ ಶಾಲೆಯ ಸ್ಮರಣ ಸಂಚಿಕೆಯನ್ನು ಕೊಡುಗೆಗಳಾಗಿ ನೀಡಿ ಧನ್ಯವಾದಗಳನ್ನು ಹೇಳಿದೆವು. ರಾಮಾಯಣದ ಮಹತ್ವವನ್ನು ಹೇಳುವ ಶ್ಲೋಕ ಮತ್ತು ಶಾಂತಿ ಮಂತ್ರದೊಂದಿಗೆ ಈ ಪುಟ್ಟ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು. ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಮ್ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ || ಗೋಸಜ್ಜನೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು || ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ || ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ || For more photos Click Here

Geetha Jayanti 2013

Geetha Jayanti 2013

Friday, January 10th, 2014

ಗೀತಾ ಜಯಂತಿ ದಿನಾಂಕ: ೧೩ನೇ ಡಿಸೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ. ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಕಂಠಪಾಠ, ಉಚ್ಚಾರಣೆಯ ಶುದ್ಧತೆ, ಸಂಸ್ಕೃತ ಕಲಿಕೆಗಳನ್ನು ಗೀತೆಯ ಮೂಲಕವೇ ಮಾಡಲಾಗುವುದು. ೨೦೧೩-೧೪ ನೇ ಸಾಲಿನಲ್ಲಿ ಮೊದಲ ಬಾರಿಗೆ ಗೀತೆಯ ೧೮ ಅಧ್ಯಾಯಗಳ ಪಾಠವು ಸಂಪನ್ನವಾಗಿದೆ. ಈ ಸಂಭ್ರಮದಲ್ಲಿ ಭಾಗಿಯಾದವರಲ್ಲಿ ಶಾಲೆಯ ೬ನೇ ತರಗತಿಯ ಮಕ್ಕಳದ್ದೇ ಮೊದಲ ತಂಡ. ಇವರು ಕಳೆದ ೩ ವರ್ಷಗಳಿಂದ ಗೀತೆಯನ್ನು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನವೂ ಮುಂದುವರೆಯಲಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಶುಭ ಹಾರೈಸಲು ಮತ್ತು ಮುಂದಿನ ಯೋಜನೆಗಳಿಗೆ ಚಾಲನೆ ನೀಡಲು ಗೀತಾ ಜಯಂತಿಯನ್ನು ಆಚರಿಸಲಾಯಿತು. ಗೀತೆಯ ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಸಂಸ್ಕೃತ ವಿದ್ವಾಂಸರು ಮಕ್ಕಳ ಅಭ್ಯಾಸಕ್ಕೆ ಪುಷ್ಠಿಯನ್ನು ಕೊಡಲು ಪರೀಕ್ಷಕರಾಗಿ ಆಗಮಿಸಿದ್ದರು. ಪ್ರೊ.ಡಿ.ಪ್ರಹ್ಲಾದಾಚಾರ್ಯರು (ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದ ಹಿಂದಿನ ಉಪಕುಲಪತಿಗಳು), ವಿ.ಕೆ.ರಾಮಣ್ಣ(ಪ್ರಜ್ಞಾಪ್ರತಿಷ್ಠಾನ ವೇದಪಾಠಶಾಲೆಯ ಮುಖ್ಯಸ್ಥರು), ಸೂರ್ಯನಾರಾಯಣ (ವಿಜ್ಞಾನಿ), ಸಂಪತ್ ಕುಮಾರ್ (ಪ್ರಾಚಾರ್ಯರು, ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು), ಕೃಶ್ಣರಾಜಭಟ್.ಕೆ.ಆರ್ (ಸಂಸ್ಕೃತ ಅಧ್ಯಾಪಕರು, ಪಿ.ಇ.ಎಸ್ ಪದವಿಪೂರ್ವ ವಿದ್ಯಾಸಂಸ್ಥೆ), ವಿಕಾಸ ಸವಾಯಿ (ಸಂಸ್ಕೃತ ಅಧ್ಯಾಪಕರು, ಶಿವಮೊಗ್ಗ), ವಿಜಯಸಿಂಹಾಚಾರ್ಯರು (ನಿರ್ದೇಶಕರು, ಸಂಸ್ಕೃತ ವಿದ್ವಾಂಸರು, ಮಹಾ ಅಕಾಡೆಮಿ, ಬೆಂಗಳೂರು) ಮುಖ್ಯ ಅತಿಥಿಗಳು ಮತ್ತು ಪರೀಕ್ಷಕರೂ ಆಗಿದ್ದರು. ವೆಂಕಟರೆಡ್ಡಿಯವರು (ಮುಖ್ಯಸ್ಥರು, ಸನಾತನ ಪ್ರಕಾಶನ, ಬೆಂಗಳೂರು) ತಾಡವಾಲೆಯಲ್ಲಿ ಪ್ರಾಚೀನ ಗ್ರಂಥಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರು ಗೀತಾಮಂಗಳ(ಕಂಠಪಾಠ) ಸಮಯದಲ್ಲಿ ೧೮ ಅಧ್ಯಾಯಗಳನ್ನು ಹೇಳುವ ವಿದ್ಯಾರ್ಥಿಗೆ ಕೊಡುಗೆಯಾಗಿ ನೀಡುವ ಭಗದ್ಗೀತೆಯ ತಾಡವಾಲೆಯನ್ನು ಯಾವುದೇ ಹಣದ ಅಪೇಕ್ಷೆ ಇಲ್ಲದೆ ಸಿದ್ಧಪಡಿಸಿಕೊಡುವ ಮಹತ್ ಕಾರ್ಯವನ್ನು ಮಾಡಿದ್ದಾರೆ. ಬೆಳಗ್ಗೆ à³®.೪೦ ರಿಂದ ಆರಂಭವಾದ ಪರೀಕ್ಷೆಯು ೧೦.೩೦ ರವರೆಗೆ ನಡೆಯಿತು. ಎಂಟು ತಂಡಗಳಾಗಿ ಮಕ್ಕಳು à³® ವಿದ್ವಾಂಸರ ಬಳಿ ಪರೀಕ್ಷೆ ಕೊಟ್ಟರು. ಮಕ್ಕಳು ಕಲಿತಿರುವ ಅಧ್ಯಾಯಗಳಲ್ಲಿ ಪರೀಕ್ಷಕರು ಹೇಳಿದ ಶ್ಲೋಕವನ್ನು ಪೂರ್ಣಗೊಳಿಸುವುದು ಕ್ರಮವಾಗಿತ್ತು. ಮಕ್ಕಳ ಉಚ್ಚಾರಣೆ, ಕಂಠಪಾಠ, ನಿರರ್ಗಳತೆ, ಆತ್ಮವಿಶ್ವಾಸವನ್ನು ಗಮನಿಸಿ ಪರೀಕ್ಷಕರು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. ದಿನದ ಸಂಭ್ರಮಕ್ಕೆ ಗರಿ ಇಟ್ಟಂತೆ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ಆಗಮಿಸಿದರು. ಸ್ವಾಮಿಗಳ ಸಮ್ಮುಖದಲ್ಲಿ ಗೀತೆಯ ಅಂತ್ಯಾಕ್ಷರಿಯನ್ನು ನಡೆಸಲಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸ್ವಾಮಿಗಳನ್ನು ಮತ್ತು ಬಂದಿದ್ದ ಇತರ ವಿದ್ವಾಂಸರನ್ನು ಆಶ್ಚರ್ಯಚಕಿತಗೊಳಿಸಿದರು. ಕೇಳಿದ ಶ್ಲೋಕವನ್ನು ತಡವರಿಸದೆ, ಪುನರಾವರ್ತನೆ ಆಗದೆ ಸರಾಗವಾಗಿ ಹೇಳುವ ರೀತಿಗೆ ಎಲ್ಲರೂ ತಲೆದೂಗಿದರು. ೧೮ ಅಧ್ಯಾಯಗಳನ್ನು ಕಂಠಪಾಠ ಮಾಡಿರುವ ಮೇಧಾ (೬ನೇ ತರಗತಿ) ಸಭೆಯಲ್ಲಿ ಸ್ವಾಮಿಗಳು ಕೇಳಿದ ಅಧ್ಯಾಯದ ಶ್ಲೋಕಗಳನ್ನು ಪೂರ್ಣಗೊಳಿಸುವುದು ಮುಂದಿನ ಕಾರ್ಯಕ್ರಮವಾಗಿತ್ತು. ಮುಂದಿನ ಮಾರ್ಚ್ ತಿಂಗಳಷ್ಟರಲ್ಲಿ ಪಾಠವಾಗಿರುವ ಎಲ್ಲಾ ವಿದ್ಯಾರ್ಥಿಗಳು ೧೮ ಅಧ್ಯಾಯಗಳನ್ನು ಕಲಿತು ಸ್ವಾಮಿಗಳನ್ನು ಮತ್ತೆ ಪರೀಕ್ಷಕರಾಗಿ ಕರೆಯಿಸುವ ಭರವಸೆಯನ್ನು ಇತ್ತರು. ಇದೇ ಸಂದರ್ಭದಲ್ಲಿ ೬ನೇ ತರಗತಿಯ ಮಕ್ಕಳಿಗೆ ಗೀತಾದೀಕ್ಷೆಯನ್ನು ಕೊಡಲಾಯಿತು. ಭಾರತದ ಪರಂಪರೆಯನ್ನು ಉಳಿಸುವ ಮೂಲಸತ್ವದ ರಕ್ಷಣೆ ಮತ್ತು ಜೀವನದುದ್ದಕ್ಕೂ ಉಳಿಸುವ, ಬೆಳೆಸುವ ದೀಕ್ಷೆಯನ್ನು ಮಕ್ಕಳಿಗೆ ನೀಡಲಾಯಿತು. ಮುಂದಿನ ಜನಾಂಗಕ್ಕೆ ನಾವು ಕೊಡಬಹುದಾದ ಬಹುದೊಡ್ಡ ಆಸ್ತಿ ಮತ್ತು ಕರ್ತವ್ಯ ಪ್ರಜ್ಞೆ ಇದಾಗಿದೆ. ಅತಿಥಿಗಳು ಹೃದಯತುಂಬಿ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಅವರ ಮಾತಿನಲ್ಲೇ ಕೇಳೋಣ: ಪ್ರೊ.ಡಿ.ಪ್ರಹ್ಲಾದಾಚಾರ್ಯರು ಗೀತೆಯ ಪ್ರಯೋಜನ ಈ ವಯಸ್ಸಿಗೆ ತಿಳಿಯದಿದ್ದರೂ ಮುಂದೆ ಅದರ ಮಹತ್ವ ತಿಳಿಯುವುದು. ಒಂದು ಉದಾಹರಣೆ ಕೊಡುತ್ತೇನೆ: ಕೆಲವು ಮಕ್ಕಳು ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಠ ಮಾಡಿ ತಿನ್ನುವವರು ಇರುತ್ತಾರೆ. ಏನು ಕೊಟ್ಟರೂ ತಿನ್ನದೇ ಇರುವವರು ಇರುತ್ತಾರೆ. ಹಾಗೆ ಹೆಚ್ಚು ಕಾಲ ಮಲಗುವವರು ಇರುತ್ತಾರೆ, ನಿದ್ದೆ ಮಾಡದವರು ಇರುತ್ತಾರೆ. ಇಂತಹವರಿಗೆ ಗೀತೆ ಒಂದು ಕಿವಿ ಮಾತು ಹೇಳುತ್ತದೆ ‘ನಾತ್ಯ’ ತುಂಬಾ ತಿಂದರೂ ಕಷ್ಟ, ತಿನ್ನದೇ ಇದ್ದರೂ ಕಷ್ಟ. ಎಷ್ಟು ಬೇಕೋ ಅಷ್ಟು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬಹುದು. ಸ್ವಾಮಿಗಳು ನಿಮಗೆಲ್ಲರಿಗೂ ಅಂತಹ ಅನುಗ್ರಹ ಮಾಡಲಿ. ಟಿ.ಆರ್. ಸೂರ್ಯನಾರಾಯಣ ಮಕ್ಕಳು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಅದನ್ನು ಕಲಿಸಿರುವ ಅಧ್ಯಾಪಕರಿಗೆ ಅನಂತ ಧನ್ಯವಾದಗಳು ವಿ.ಕೆ.ರಾಮಣ್ಣ ನಿಮ್ಮ ಪ್ರಯತ್ನ ಅಪರೂಪದಲ್ಲಿ ಅಪರೂಪದ್ದು. ಎಲ್ಲಾ ಶಾಲೆಗಳಲ್ಲಿ ಇಂತಹ ಅವಕಾಶವಿರುವುದಿಲ್ಲ. ಇಷ್ಟು ಮಕ್ಕಳಿಗೆ ಗೀತೆ ಹೇಳಿಕೊಟ್ಟಿರುವುದು ಮಹತ್ವದ ವಿಷಯ. ಮಕ್ಕಳಿಗೆ ಈ ಹಂತದಲ್ಲಿ ಗೀತೆ ಹೇಳಿಕೊಟ್ಟರೆ ಜೀವನ ಪರ್ಯಂತ ಅದು ಉಳಿಯುತ್ತದೆ. ಇಂತಹ ಪ್ರಯತ್ನ ಮಾಡಿರುವ ಅಧ್ಯಾಪಕರಿಗೆ ನಾನು ಅನಂತ ಧನ್ಯವಾದ ಹೇಳುತ್ತೇನೆ. ನಾವೂ ವೇದಪಾಠ ಶಾಲೆ ನಡೆಸುತ್ತೇವೆ. ಎಲ್ಲವನ್ನೂ ಉಚಿತವಾಗಿ ಕೊಟ್ಟರೂ ಕಲಿಯಲು ಬರುವವರೇ ಇಲ್ಲ. ಅವರದೇ ಆದ ಅನೇಕ ಕಾರಣಗಳಿಂದ ಜನರು ಕಲಿಯುವ ಆಸಕ್ತಿಯನ್ನೇ ಹೊಂದಿರುವುದಿಲ್ಲ. ಇದೊಂದು ದೊಡ್ಡ ದುರಂತ. ಹಾಗದರೆ ನಮ್ಮ ಸಂಸ್ಕೃತಿ ಉಳಿಯುವುದಾದರೂ ಹೇಗೆ? ಎಲ್ಲಾದರೂ ಒಂದು ಕಡೆ ಪ್ರಯತ್ನ ನಡೆಯಲೇ ಬೇಕು. ಅದನ್ನು ಈ ಶಾಲೆಯಲ್ಲಿ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಸಂಪತ್ ಕುಮಾರ್ ಮಕ್ಕಳು ಮುದ್ದು ಮುದ್ದಾಗಿ ಗೀತೆಯ ಶ್ಲೋಕಗಳನ್ನು ಹೇಳಿದಾಗ ಕಣ್ಣಲ್ಲಿ ನೀರು ತುಂಬಿತು. ಭಗವದ್ಗೀತೆಯಲ್ಲಿ ಹೇಳುವಂತೆ ಯಾವಾಗಲೂ ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇರಬೇಕು. ಸೋಮಾರಿಗಳಾಗಬಾರದು. ಇಂದಿನ ಹಲವು ಮಕ್ಕಳಿಗೆ ಮಹಾಭಾರತದಲ್ಲಿ ಎಷ್ಟು ಪರ್ವಗಳು ತಿಳಿದಿರುವುದಿಲ್ಲ. ಬೆಳೆದವರಿಗೆ ಹೇಳಿಕೊಡುವುದು ಸುಲಭ ಆದರೆ ಮಕ್ಕಳಿಗೆ ಹೇಳಿಕೊಡಲು ಬಹಳ ಸಹನೆ ಬೇಕು. ನಾನು ಬಂದಾಗಿನಿಂದ ಗಮನಿಸಿದೆ. ಮಕ್ಕಳನ್ನು ಹೀಗೆ ಪ್ರೀತಿಯಿಂದ ಸಂಬೋಧನೆ ಮಾಡುತ್ತಾ ಸಹನೆಯಿಂದ ಇರುವುದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಶಸ್ತಿ ಬಂದವರು ಮಾತ್ರ ಜಾಣರಲ್ಲ, ಅದೊಂದು ಮಾರ್ಗದರ್ಶನ ಅಷ್ಟೆ. ಎಲ್ಲರೂ ಗೀತೆಯನ್ನು ಚೆನ್ನಾಗಿ ಕಲಿಯಿರಿ, ಮುಂದೆ ಶ್ರೀಗಳ ಅನುಗ್ರಹದಿಂದ ಅದರ ಅರ್ಥವೂ ನಿಮಗೆ ಆಗುವುದು. ಸುಯಮೀಂದ್ರಾಚಾರ್ಯ ಸಂಸ್ಕೃತಿಯನ್ನು ಉಳಿಸುವ ಯಾವುದೇ ದೊಡ್ಡ ಯೋಜನೆ, ಅದನ್ನು ಕಾರ್ಯಗತಗೊಳಿಸುವಿಕೆ, ಬೆಳೆಸುವಿಕೆಯ ಹಂತಗಳನ್ನು ಗಮನಿಸುವುದಾದರೆ, ಈ ತರಹದ ಶಾಲೆಯನ್ನು ಮಾಡಬೇಕೆಂದು ಯೋಜಿಸಿದ ಯುವಮಿತ್ರರಿಗೂ, ಅದನ್ನು ಕಾರ್ಯಗತಗೊಳಿಸುತ್ತಿರುವ ಅಧ್ಯಾಪಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರ ಉಪಯೋಗವನ್ನು ಸಮರ್ಪಕ ರೀತಿಯಲ್ಲಿ ಪಡೆಯುತ್ತಿರುವ ಮಕ್ಕಳಿಗೂ ಅಭಿನಂದನೆಗಳನ್ನು ಉತ್ತಮ ಭವಿಷ್ಯವನ್ನು ಆಶಿಸುತ್ತೇನೆ. ವೆಂಕಟ ರೆಡ್ಡಿ ೨೦೦೦ ವರ್ಷಗಳ ಹಿಂದೆ ಗುರುಕುಲಗಳು ಹೇಗಿದ್ದವು ಎಂಬ ಅನುಭವ ಕೊಟ್ಟದ್ದಕ್ಕಾಗಿ ಈ ಶಾಲೆಗೆ ಅಭಿನಂದನೆಗಳು. ಅಂತ್ಯಾಕ್ಷರಿ ನಡೆಯುವಾಗ ಬಹುಶಃ ಎಲ್ಲರೂ ತಯಾರಿರುತ್ತಿದ್ದರು. ಬಹಳ ಸಂತೋಷವಾಯಿತು. ಉತ್ತರ ಭಾರತದಲ್ಲಿ ನಮ್ಮ ಸಂಸ್ಕೃತಿ ನಶಿಸುತ್ತಿದೆ. ದಕ್ಷಿಣ ಭಾರತದಲ್ಲಿ ಉಳಿದುಕೊಂಡಿದೆ, ಬೆಳೆಸುವ ಪ್ರಯತ್ನಗಳು ನಡೆದಿವೆ. ಉತ್ತರ ಭಾರತದಲ್ಲೂ ಪೂರ್ಣಪ್ರಮತಿಯಂತಹ ಶಾಲೆಯನ್ನು ಸ್ಥಾಪಿಸಬೇಕೆಂದು ಕೇಳಿಕೊಳ್ಳುತ್ತೇನೆ. ಸ್ವಾಮಿಗಳ ಹಿತವಚನ ಕಲಿಯಲು ಏನು ಬೇಕು? ಶಾಲೆಯ ಹೆಸರೇನು? ಪೂರ್ಣಪ್ರಮತಿ. ಪೂರ್ಣವಾಗಿ ಕಲಿತರೆ ನೀವು ಪೂರ್ಣಪ್ರಮತಿಯ ಮಕ್ಕಳಾಗುತ್ತೀರಿ. ಪೂರ್ಣಕಲಿಯಲು ಏನು ಬೇಕು? ಗೀತೆಯಲ್ಲಿ ಶ್ರದ್ಧಾವಾನ್ ಲಭತೇ ಜ್ಞಾನಮ್ ಎಂದು ಹೇಳಿದ್ದಾರೆ. ಪೂರ್ಣಕಲಿಕೆಗೆ ಶ್ರದ್ಧೆ ಬೇಕು. ಶ್ರದ್ಧೆಯಿಂದ ಕಲಿಯಿರಿ, ಈ ಬಾರಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಕೊಟ್ಟಿದ್ದಾರೆ. ಮುಂದಿನ ಬಾರಿ ಬಂದಾಗ ಎಲ್ಲರೂ ಪಾಸಾಗಿರಿ ಮತ್ತು ನಿಮ್ಮ ಅಧ್ಯಾಪಕರನ್ನು ಪಾಸು ಮಾಡಿರಿ. ಭಕ್ತಿಯಿಂದ ದೇವರನ್ನು ಭಜಿಸಿದವರ ಯೋಗಕ್ಷೇಮವನ್ನು ದೇವರೇ ವಹಿಸಿಕೊಳ್ಳುತ್ತಾನೆ. ಆದ್ದರಿಂದ ನೀವೆಲ್ಲರೂ ಶ್ರದ್ಧೆಯಿಂದ ದೇವರನ್ನು ಭಜಿಸಿರಿ ಎಂದು ಬೋಧಿಸಿದರು.   For more photos click here ಪ್ರಾಂಶುಪಾಲರು ಅನಾರೋಗ್ಯದ ಕಾರಣದಿಂದ ಹಲವು ದಿನಗಳ ಕಾಲ ಶಾಲೆಗೆ ಬರಲು ಸಾಧ್ಯಗದೆ ಇದ್ದರೂ ಮಕ್ಕಳು ಗೀತಾ ಪರೀಕ್ಷೆಯನ್ನು ಕೊಡುವ ಸಂದರ್ಭವನ್ನು ಕಳೆದುಕೊಳ್ಳಲು ಬಯಸದೆ ಸಭೆಯಲ್ಲಿ ಭಾಗವಹಿಸಿದ್ದರು. ಹತ್ತು ಹಲವು ಕಾರ್ಯಕ್ರಮಗಳ ನಡುವೆಯೂ ಮಕ್ಕಳನ್ನು ಹಾರೈಸುವ ಸಲುವಾಗಿ ಬಂದಿದ್ದ ಗಣ್ಯರಿಗೆಲ್ಲಾ ಧನ್ಯವಾದಗಳನ್ನು ಹೇಳುತ್ತಾ ಸಭೆಗೆ ತಾತ್ಕಾಲಿಕವಾಗಿ ಮಂಗಳ ಮಾಡಲಾಯಿತು. ಗೀತೆಯನ್ನು ಅಧ್ಯಯನ ಮಾಡಿ ಅದರಲ್ಲಿ ಹೇಳಿದಂತೆ ನಡೆಯುವ ಹಿರಿಯರ, ಅನುಭವಿಗಳ ಮುಂದೆ ಪರೀಕ್ಷೆ ನೀಡುವುದು ಎಂದರೆ ಪ್ರತಿಭಾ ಪ್ರದರ್ಶನವಲ್ಲ, ಬದಲಾಗಿ ಅವರ ಆಶೀರ್ವಾದಕ್ಕೆ ಪಾತ್ರರಾಗುವ ಸದವಕಾಶ. ಇಂತಹ ಸದವಕಾಶಗಳನ್ನು ಮಕ್ಕಳಿಗೆ ದಕ್ಕಿಸಿಕೊಡುವುದೇ  ಪೂರ್ಣಪ್ರಮತಿಯ ಪ್ರಯತ್ನ.

Inter School Kho-Kho Competition

Inter School Kho-Kho Competition

Friday, November 8th, 2013

ನಮ್ಮ ಶಾಲೆಯ ಕ್ರೀಡೋತ್ಸವ ದಿನಾಂಕ: 28.10.2013 ಸ್ಥಳ: ಪೂರ್ಣಪ್ರಮತಿ ಮೈದಾನ, ಗಿರಿನಗರ, ಬೆಂಗಳೂರು ಆಟದ ಬಯಲಿಗೆ ಓಡಿ, ಆಟದ ಬಯಲಿಗೆ ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಚಿನ್ನಿ-ದಾಂಡು ಖೋ ಖೋ ಆಡಿ ದೇಹವ ಮೋಡಿಯ ಮಾಡಿ ಆಟವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಹಸಿವು, ನೋವು, ಗಾಯ ಎಲ್ಲವನ್ನೂ ಮರೆತು ಮನಃಪೂರ್ವಕವಾಗಿ ಆಡುತ್ತಾರೆ. ಆಟವೆಂದರೆ ತಲೆಗೆ ತೋಚಿದಂತೆ ಆಡುವುದಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ, ವಿಧಾನಗಳಿವೆ. ಹಲವು ಕ್ರೀಡೆಗಳು ಬೇರೆ ಬೇರೆ ದೇಶಗಳ ಮೂಲವನ್ನು ಹೊಂದಿವೆ. ಭಾರತೀಯ ಆಟಗಳಲ್ಲಿ ಮೆದುಳಿಗೆ ಮತ್ತು ದೇಹಕ್ಕೆ ಎರಡಕ್ಕೂ ಹೆಚ್ಚಿನ ಕೆಲಸವಿರುತ್ತದೆ. ಉದಾಹರಣೆಗೆ ಚದುರಂಗದಾಟ, ಖೋ ಖೋ, ಹಾಕಿ ಇತ್ಯಾದಿ. ಆಟದಲ್ಲಿ ಕಲಿತ ಶ್ರದ್ಧೆ, ಏಕಾಗ್ರತೆ, ಸ್ನೇಹಪರತೆಗಳನ್ನು ಓದಿನಲ್ಲಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕ್ರೀಡೆಗಳ ಅಂತಿಮ ಫಲ. ಸೋಲು-ಗೆಲವುಗಳು ಇದಕ್ಕೆ ಪೂರಕವಾಗಿರುತ್ತವೆ. ಭಾರತೀಯ ಆಟಗಳನ್ನು ಉತ್ತೇಜಿಸುವ ಉದ್ದೇಶದಿಂದ ಪೂರ್ಣಪ್ರಮತಿಯು ದಿನಾಂಕ 28.10.2013ರಂದು ಅಂತರ್-ಶಾಲಾ ಖೋ ಖೋ ಪಂದ್ಯಾವಳಿಯನ್ನು ಏರ್ಪಡಿಸಿತ್ತು. ಪಂದ್ಯವು ನಡೆದದ್ದು 28ನೇ ದಿನಾಂಕದಂದು. ಆದರೆ ಅದಕ್ಕೆ ತಯಾರಿ ಒಂದು ತಿಂಗಳ ಮೊದಲೆ ಪ್ರಾರಂಭವಾಗಿತ್ತು. ಇತರ ಶಾಲೆಗಳನ್ನು ಆಹ್ವಾನಿಸುವುದರಿಂದ ಆರಂಭಿಸಿ, ಮಕ್ಕಳ ತಯಾರಿ, ವ್ಯವಸ್ಥೆಗಳ ಬಗ್ಗೆ ಇಡೀ ಶಾಲೆಯೇ ಕೈಜೋಡಿಸಿ ಸಹಕರಿಸಿತು. ನಮ್ಮ ಕ್ರೀಡಾ ಅಧ್ಯಾಪಕರಾದ ಶಶಿಅಣ್ಣ ಅವರಂತೂ ಮಕ್ಕಳನ್ನು ಯಾವ ಹಂತದಲ್ಲೂ ಎಚ್ಚರ ತಪ್ಪದಂತೆ ಖೋ ಖೋ ಪಂದ್ಯಕ್ಕೆ ಅಣಿಗೊಳಿಸಿದ್ದರು. ಪ್ರತಿನಿತ್ಯ 2-3 ತಾಸು ಅಭ್ಯಾಸ ನಡೆದೇ ಇತ್ತು. ಪೋಷಕರೂ ಸಹ ಮಕ್ಕಳನ್ನು ನಿತ್ಯ ಅಭ್ಯಾಸಕ್ಕೆ ಕರೆದು ತರುತ್ತಿದ್ದರು. ಆಟದ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲರ ಮನದಲ್ಲೂ ಒಂದು ಉತ್ಸಾಹ, ಮಕ್ಕಳು ಹೇಗೆ ಆಡುವರೋ ಎಂಬ ಕುತೂಹಲ ಕಾಯುತ್ತಿತ್ತು. ಈ ಪಂದ್ಯದಲ್ಲಿ ಪೂರ್ಣಪ್ರಮತಿಯೂ ಸೇರಿದಂತೆ ಗಿರಿನಗರದ ಸುತ್ತಮುತ್ತಲ 8 ಶಾಲೆಗಳು ಭಾಗವಹಿಸಿದ್ದವು. ಸಿಸ್ಟರ್ ನಿವೇದಿತಾ ಶಾಲೆ, ರತ್ನಗಿರಿ ವಿದ್ಯಾಸಂಸ್ಥೆ, ಸಿ.ಬಿ.ಎಲ್. ಮದರ್ ತೆರೇಸಾ ಶಾಲೆ, ಮೌಂಟ್ ಎವೆರೆಸ್ಟ್ ಶಾಲೆ, ಕನಕ ವಿದ್ಯಾಸಂಸ್ಥೆ, ಶಾರದಶ್ರೀ ವಿದ್ಯಾಸಂಸ್ಥೆ, ಶಾಂತಿ ನಿಕೇತನ ಇಂಗ್ಲಿಷ್ ಶಾಲೆಗಳ ಪರವಾಗಿ ಬಾಲಕರು ಮತ್ತು ಬಾಲಕಿಯರ ಪ್ರತ್ಯೇಕ ತಂಡಗಳು ಆಗಮಿಸಿದ್ದವು. ಪ್ರಾಥಮಿಕಶಾಲಾ ಮಕ್ಕಳ ವಿಭಾಗದ ಈ ಪಂದ್ಯವು ನಿರೀಕ್ಷೆಗೂ ಮೀರಿ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿತ್ತು. ಅಂತೂ ಪಂದ್ಯಾವಳಿಯ ದಿನ ಬಂದೆ ಬಿಟ್ಟಿತು…. ಮೈದಾನ ಸ್ವಚ್ಛವಾಗಿ ಸಿದ್ಧವಾಯಿತು, ವಿವಿಧ ತಂಡಗಳು ಕುಳಿತುಕೊಳ್ಳಲು ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಊಟದ ವ್ಯವಸ್ಥೆ, ಹೀಗೆ ಎಲ್ಲವೂ ತಯಾರಾಯಿತು. ಗಿರಿನಗರದ ಹನುಮಂತಪ್ಪನವರು ತಮ್ಮ ನಿವೇಶನವನ್ನು ಅಭಿಮಾನಪೂರ್ವಕವಾಗಿ ಪೂರ್ಣಪ್ರಮತಿಯ ಕಾರ್ಯಗಳಿಗೆ ಬಿಟ್ಟುಕೊಟ್ಟದ್ದು ನಿಜಕ್ಕೂ ಶ್ಲಾಘನೀಯ. ಬೆಳಗ್ಗೆ 8.40 ರಿಂದ ವಿವಿಧ ಶಾಲೆಯವರು ಬರಲು ಆರಂಭಿಸಿದ್ದರು. ಅತಿಥಿಗಳಿಗೆ ತಿಲಕ ಹಚ್ಚಿ ಹೂವನ್ನು ಕೊಟ್ಟು ಸ್ವಾಗತಿಸಿದೆವು. ಅಂದಿನ ಮುಖ್ಯ ಅತಿಥಿಗಳಾಗಿ ಉಮೇಶ್.ಆರ್ (ಕ್ರೀಡಾ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತ್ಯಾಮಗೊಂಡಲು) ಮತ್ತು ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಶ್ರೀಮತಿ ಅನಿತಾ ಅವರು ಆಗಮಿಸಿದರು. ಅತಿಥಿಗಳಿಗೆ ಸ್ವಾಗತ, ಪ್ರಾರ್ಥನೆ, ಪ್ರತಿಜ್ಞಾಸ್ವೀಕಾರ, ಭೂಮಿ ಪೂಜೆ, ಧ್ವಜಾರೋಹಣ, ಭಾರತ ಮಾತೆಗೆ ಪುಷ್ಪಾರ್ಚನೆ ಎಲ್ಲಾ ಕಾರ್ಯಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ನಮ್ಮ ಶಾಲೆಯ ಹಾಡಿನ ಶಿಕ್ಷಕರಾದ ರಾಜೇಂದ್ರಣ್ಣ ಈ ದಿನಕ್ಕಾಗಿ ವಿಶೇಷ ಹಾಡನ್ನು ರಚಿಸಿ, ರಾಗ ಸಂಯೋಜಿಸಿ ಮಕ್ಕಳಿಗೆ ಅಭ್ಯಾಸ ಮಾಡಿಸಿದ್ದರು. ಮಕ್ಕಳು ಬೆಳಗಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಹಾಡನ್ನು ಹಾಡಿದರು: ಖೋ ಖೋ ಆಟವ ಆಡೋಣ ಎಲ್ಲರ ಜೊತೆಗೂ ಬೆರೆಯೋಣ ಸಾಂಘಿಕ ಶಕ್ತಿಯ ಬೆಳೆಸೋಣ ದೇಹಾರೋಗ್ಯವ ಪಡೆಯೋಣ   ಆಟದಿ ಶಕ್ತಿಯು ಆಟದಿ ಯುಕ್ತಿಯು ಆಟವೆ ಮನಗಳ ಸೇತುವೆಯು ಆಟವ ಆಡುತ ಮುದವನು ಪಡೆಯುತ ಭಾವೈಕ್ಯತೆಯನು ಬೆಳೆಸೋಣ   ಬನ್ನಿರಿ ಆಟವ ಆಡೋಣ ಎಲ್ಲರ ಜೊತೆಗೂ ಬೆರೆಯೋಣ ಕ್ರೀಡೆಯನಾಡುತ ಭಾರತ ಮಾತೆಗೆ ದಿನವೂ ಸೇವೆಯ ಮಾಡೋಣ ಅತಿಥಿಗಳು ಮಾತಿಗಿಂತ ಕ್ರಿಯೆಯೇ ಉತ್ತಮ, ಸೋಲು-ಗೆಲುವುಗಳಿಗಿಂತ ಮುಖ್ಯವಾಗಿ ಕ್ರೀಡಾ ಮನೋಭಾವ ಮತ್ತು ಬಾಂಧವ್ಯವೇ ಆಟದಲ್ಲಿ ಮುಖ್ಯ ಎಂದು ತಿಳಿಸಿ ತಾವು ಆಡುವುದರೊಂದಿಗೆ ಪಂದ್ಯಕ್ಕೆ ಚಾಲನೆ ಕೊಟ್ಟರು. ಮಕ್ಕಳ ಉತ್ಸಾಹವನ್ನು ಮತ್ತಷ್ಟು ಉತ್ತೇಜಿಸುವಂತೆ ಅಭಿನಂದಿಸಿ ಆಟ ನೋಡಲು ತಾವೂ ಕುಳಿತರು. ಯಾವ ತಂಡಗಳು ಯಾವ ತಂಡಗಳೊಂದಿಗೆ ಆಡಬೇಕೆಂಬ ಯೋಜನೆಯಂತೆ ಒಂದೊಂದೇ ತಂಡಗಳು ಆಡತೊಡಗಿದವು. ಕೆಲವು ತಂಡಗಳು ಮೊದಲೆ ಚೆನ್ನಾಗಿ ಅಭ್ಯಾಸ ಮಾಡಿ ಬಂದಿದ್ದವು. ಒಂದೊಂದೇ ತಂಡಗಳು ಸೋಲುತ್ತಾ ಹೋದಂತೆ ಅಂತಿಮ ಸುತ್ತಿಗೆ ತಂಡಗಳು ಆಯ್ಕೆಯಾದವು. ಮಳೆರಾಯ ತಾನೂ ಪಂದ್ಯ ನೋಡಲು ಬಂದನು. ಪಂದ್ಯ ನೋಡಲು ಬಂದ ಮಳೆರಾಯನಿಗೆ ಬೇಸರವಾಗದಿರಲೆಂದು ಮಕ್ಕಳು ಮಳೆಯಲ್ಲೂ ಒಂದು ಪಂದ್ಯವನ್ನಾಡಿದರು. ಅಂತಿಮ ಸುತ್ತಿಗೆ ರತ್ನಗಿರಿ ವಿದ್ಯಾಸಂಸ್ಥೆ ಮತ್ತು ಪೂರ್ಣಪ್ರಮತಿಯ ಮಕ್ಕಳ ತಂಡಗಳು ಆಯ್ಕೆಯಾದವು. ಅಲ್ಲಿಯ ಒಂದೊಂದು ನೋಟ, ಓಟ, ಜೂಟಾಟ ಕ್ಷಣಕ್ಷಣಕ್ಕೂ ಉತ್ಸಾಹವನ್ನು ಹೆಚ್ಚಿಸುತ್ತಲೇ ಇತ್ತು. ತಮ್ಮೆಲ್ಲ ಜಾಣ್ಮೆ, ಏಕಾಗ್ರತೆ, ಸತತ ಅಭ್ಯಾಸ, ನಿಯಮಗಳ ಅರಿವುಗಳನ್ನು ಒಟ್ಟುಗೂಡಿಸಿ ಎಚ್ಚರಿಕೆಯಿಂದ ಆಡಿದ ಪೂರ್ಣಪ್ರಮತಿಯ ಬಾಲಕರು ಮತ್ತು ಬಾಲಕಿಯರು ಜಯಶಾಲಿಗಳಾದರು. ಪ್ರಾಂಶುಪಾಲರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಿದ್ದರೂ ಈ ಉತ್ಸವವನ್ನು ಕಣ್ಣಾರೆ ಕಾಣುವ ತವಕದಿಂದ ಮೈದಾನಕ್ಕೆ ಧಾವಿಸಿ ಬಂದರು. ಈ ಯಜ್ಞದಲ್ಲಿ ಯಾರ ಪರಿಶ್ರಮವೂ ವ್ಯರ್ಥವಾಗಲಿಲ್ಲ. ಅಂತೂ ಅಂತಿಮ ಜಯ ನಮ್ಮದಾಯಿತು. ಮಕ್ಕಳ ಮುಂದಿನ ಸಾಧನೆಗೆ ದಾರಿದೀಪವಾಯಿತು. ಪಂದ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಪತ್ರವನ್ನು ನೀಡಲಾಯಿತು. ಈ ಬಹುಮಾನ ಪತ್ರದ ವಿಶೇಷವೆಂದರೆ ಅದನ್ನು ಮಕ್ಕಳೇ ತಮ್ಮ ಕೈ ಬರಹದಿಂದ, ಚಿತ್ರಗಳಿಂದ ತಯಾರಿಸಿದ್ದರು. ಸಂಜೆಯ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಖೋ ಖೋ ಕ್ರೀಡಾಪಟುಗಳಾದ ಶ್ರೀಯುತ ರಾಮು, ಗಣಿತಜ್ಞರಾದ ಶ್ರೀಮತಿ ಆನಂದ ಲಕ್ಷ್ಮೀ, ರಬ್ಬರ್ ಉದ್ಯಮಿಯಾದ ಮಣೂರು ನರಸಿಂಹ ಪೈ ಮುಂತಾದವರು ಆಗಮಿಸಿದ್ದರು. ಇವರೆಲ್ಲರೂ ಸಮಾಜದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯದೊಂದಿಗೆ, ಶಾಲೆಗಳನ್ನು ನಿರ್ಮಿಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವವರಾಗಿದ್ದಾರೆ. ಇವರ ಆಶೀರ್ವಾದವನ್ನು, ಬಹುಮಾನವನ್ನೂ ಪಡೆದ ಮಕ್ಕಳು ತಮ್ಮ ಕೊರಳಲ್ಲಿ ಕಂಗೊಳಿಸುತ್ತಿರುವ ಪದಕಗಳು ಮತ್ತು ಬಹುಮಾನವನ್ನು ನೋಡುತ್ತಾ ಸಾವಿರ ಕನಸುಗಳನ್ನು ನಾಳೆಗಾಗಿ ಕಟ್ಟಲು ಆರಂಭಿಸಿದರು. ಪೂರ್ಣಪ್ರಮತಿಯ ಈ ಮರಿಸೈನ್ಯವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಮಟ್ಟದ ಖೋ ಖೋ ತಂಡವಾಗಿ ಹೊರಹೊಮ್ಮುವ ಭವರಸೆಯನ್ನು ಹೊತ್ತು ನಾವೆಲ್ಲ ಮನೆಗೆ ತೆರಳಿದೆವು.   Inter School Kho-Kho Competition “28th October 2013” Purnapramati organized the Inter school Kho-Kho competition on 28th October’2013 with a zeal to promote the game which has its origin from our country. It was a thrilling experience to see 15 teams participating from different schools. The day started with an Inauguration program. Wherein, all the players assembled in the ground with a hope to win and to prove their metal. All the players their respective coaches and P.T masters were given a warm traditional welcome by putting tilak on their forehead and by giving flowers. Then the chief guest Mrs. Anitha Reddy (national level Kho-Kho player), Mr. Umesh (director of sports, govt. college Yelahanka) and Hanumanthappa were welcomed by a grand salute by the purnapramatians. It followed with a flag hoisting and introduction of teams and officials to the guest. A welcome speech was given by Indumati akka (teacher purnapramati) and an invocation song on Kho-Kho game was sung by purnapramati children which was composed by our music teacher (Rajender anna). Anitha Reddy, Umesh and the captains of the teams played the Kho-kho game which marked the inauguration of the meet. Then it followed with the oath taking by all the players of all the schools. The chief guest also addressed the audience and players by sharing few tips on the game. Shashi anna the sports teacher of purnapramati announced the match time table and tournament instructions which followed with the vote of thanks. In the closing ceremony the players assembled for the final play and the chief guest Mr.& Mrs. Ramu (national level Kho-Kho player), Mr. Prabhakaran (national level Kho- Kho player) and Mr. Sunder Raj shetty (participant in International sprint event 100 meters) were given a warm welcome by all. Then the game took its more thrilling and breath taking moment when purnapramati boys and girls team came in finals against Ratnagiri school. It was a moment to cherish and live with to see the zeal of both the teams to win. The match took many turning points but at last the trophy of the event was won by the Purnapramati team. We won the boys and girls finals and both the trophies came into the kitty of purnapramati after seeing this there was no boundry for happiness of parents, teachers, players and the students of purnapramati and all ran into the ground to hug and congratulate the winning stars of purnapramati. It was an overwhelming experience to see the prize distribution for winning and runner up teams. The day ended with vote of thanks and flag down ceremony. The day was over but the joy

Trip to Amruth Mahal Kaval

Trip to Amruth Mahal Kaval

Thursday, November 7th, 2013

ಅಮೃತ ಮಹಲ್ ಕಾವಲ್‌ನಲ್ಲಿ ಗಾಂಧಿಜಯಂತಿಯ ಆಚರಣೆ ದಿನಾಂಕ: 02.10.2013 ಸ್ಥಳ: ದೊಡ್ಡ ಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ   ನಮ್ಮ ಯಾತ್ರೆಯ ಹಿನ್ನಲೆ: ಆಧುನಿಕತೆ, ನಾಗರಿಕತೆ ಮತ್ತು ವ್ಯವಹಾರದ ಉದ್ದೇಶಗಳಿಗೆ ಪ್ರಕೃತಿಯನ್ನು ಬಳಸಿಕೊಳ್ಳುವ ಮತ್ತು ನಿಧಾನವಾಗಿ ಬಲಿಕೊಡುವ ಮನುಷ್ಯನ ಅತಿಬುದ್ಧಿಗೆ ಮತ್ತೊಂದು ಉದಾಹರಣೆಯಾಗಿ ಅಮೃತ ಮಹಲ್ ಕಾವಲ್ ಇದೆ. ಇದೊಂದು ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣದೇವರಾಯನ ಕಾಲದಿಂದಲೂ ಅಮೃತ ಮಹಲ್ ಎಂಬ ವಿಶೇಷ ತಳಿಯ ಹಸುಗಳಿಗೆ ಮತ್ತು ಆಡು-ಕುರಿಗಳಿಗೆ ಆಹಾರ ಒದಗಿಸುವ ಹುಲ್ಲುಗಾವಲಾಗಿತ್ತು. ದೈತ್ಯಾಕಾರದ, ದಷ್ಟ-ಪುಷ್ಠವಾದ ಈ ಅಮೃತ ಮಹಲ್ ಹೋರಿಗಳನ್ನು ಟಿಪ್ಪುಸುಲ್ತಾನನು ಯುದ್ಧದಲ್ಲೂ ಬಳಸುತ್ತಿದ್ದನು. ಈ ಕಾವಲ್‌ಅನ್ನು ಅವಲಂಬಿಸಿ ಹೈನುಗಾರಿಕೆ, ಕಂಬಳಿ ತಯಾರಿಕೆ ಹೀಗೆ ಸಾವಿರಾರು ಜನರಿಗೆ ಉದ್ಯೋಗ, ಜೀವನ ನಡೆಯುತ್ತಿತ್ತು. ಮೊದಲು 4 ಲಕ್ಷ ಎಕರೆ ಇದ್ದ ಹುಲ್ಲುಗಾವಲು ಈಗ 56 ಸಾವಿರ ಎಕರೆಯಾಗಿದೆ. ಸಾವಿರಾರು ಎಕರೆಗಳ ಈ ಭೂಮಿಯನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳಿಗೆ ಬೇರೆ ಬೇರೆ ಉದ್ದೇಶಗಳಿಗೆ ನೀಡಲಾಗಿದ್ದು ಅಲ್ಲಿನ ಜನರ ಜೀವನವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಂದು ಗಾಂಧೀಜಿ ಅವರು ಬಹಳ ಪ್ರಮುಖವಾಗಿ ಹೇಳಿದ್ದ ಗ್ರಾಮೋದ್ಯೋಗ ಯೋಜನೆಗಳು, ಮುಂದಾಲೋಚನೆಯಿಲ್ಲದ-ಯೋಜನಾಬದ್ಧ ನಡೆಗಳಿಲ್ಲದ ಇಂದಿನ ಸರಕಾರದ ಹುಚ್ಚುತನಕ್ಕೆ ಬಲಿಯಾಗುತ್ತಿದೆ. ಮಕ್ಕಳಿಗೆ ಇದನ್ನು ಪ್ರತ್ಯಕ್ಷವಾಗಿ ತೋರಿಸುವುದರ ಮೂಲಕ ಗಾಂಧಿ ಜಯಂತಿಯನ್ನು ಸಾರ್ಥಕಗೊಳಿಸುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿಗೆ ನಮ್ಮ ಪಯಣ ಸಾಗಿತ್ತು. ಬೆಂಗಳೂರಿನಿಂದ ಉಳ್ಳಾರ್ತಿಗೆ… ಮಕ್ಕಳೆಲ್ಲ ಅಕ್ಟೋಬರ್ ೨ರಂದು ಬೆಳಗಿನ ಜಾವ ೪ ಗಂಟೆಗೇ ತಯಾರಾಗಿ ಶಾಲೆಯ ಬಳಿ ಸೇರಿದ್ದರು. ೪.೧೫ಕ್ಕೆ ನಮ್ಮ ಬಸ್ಸು ಪ್ರಯಾಣ ಆರಂಭಸಿತು. ಅಮೃತ ಮಹಲ್ ಕಾವಲ್‌ಬಗ್ಗೆ ಹೆಚ್ಚಿನ ಅರಿವನ್ನು ನೀಡಲು ಭಾರತೀಯ ವಿಜ್ಞಾನ ಸಂಸ್ಥೆಯಿಂದ ದುರ್ಗಾ ಮಾಧವ್ ಮಹಾಪಾತ್ರ ಎಂಬುವವರು ನಮ್ಮೊಂದಿಗೆ ಬಂದಿದ್ದರು. ಮಕ್ಕಳೆಲ್ಲಾ ಸಂಭ್ರಮದಿಂದ ಎಂದಿನಂತೆ ಉತ್ಸಾಹದ ಚಿಲುಮೆಗಳಾಗಿ ಶಾಲೆಯ ಪ್ರಾರ್ಥನೆ, ಹಾಡು, ದೇವರ ನಾಮಗಳನ್ನು ಹೇಳುತ್ತಾ ಸಾಗಿದರು. ಅರುಣೋದಯದ ಸೊಬಗನ್ನು, ಸೂರ್ಯೋದಯವನ್ನೂ ಕಂಡು ಖುಷಿಪಟ್ಟರು. ಸುಮಾರು 8.00 ಗಂಟೆಗೆ ಚಳ್ಳಕೆರೆ ಸಮೀಪದ ಲಕ್ಕನಾಳದ ಒಂದು ತೋಟದಲ್ಲಿ ಬೆಳಗಿನ ಉಪಾಹಾರಕ್ಕಾಗಿ ನಿಂತೆವು. ಅಲ್ಲಿಂದ ಮುಂದೆ 9.15 ಗಂಟೆಗೆ ದೊಡ್ಡಉಳ್ಳಾರ್ತಿಗೆ ತಲುಪಿದೆವು. ಅಮೃತ ಮಹಲ್ ಕಾವಲ್‌ನಲ್ಲಿ ಹೆಜ್ಜೆ ಹಾಕಲಾರಂಭಿಸಿದೆವು.   ಅಮೃತ ಮಹಲ್ ಕಾವಲ್‌ನಲ್ಲಿ… ಇದೊಂದು ಹುಲ್ಲುಗಾವಲು. ಇಲ್ಲಿ ಸೆಪ್ರೆಸ್ ಜಾತಿಯ ತ್ರಿಕೋನಾಕಾರದ ಕಾಂಡವಿರುವ ಹುಲ್ಲು ಬೆಳೆಯುತ್ತದೆ. ಮತ್ತು ರಶ್ ಎಂದು ಕರೆಯುವ ಸಸ್ಯಗಳನ್ನು ಕಾಣಬಹುದು. ಮುಖ್ಯವಾಗಿ ಹುಲ್ಲುಗಾವಲು ಪ್ರದೇಶದಲ್ಲಿ ಮುಳ್ಳಿನ ಪೊದೆಗಳು, ಕಡಿಮೆ ಎತ್ತರದ ಮರಗಳು ಬೆಳೆದಿವೆ. ಹುಣಸೆ, ಬೇವಿನ ಮರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹುಲ್ಲುಗಳಲ್ಲಿ ಸುಮಾರು 300 ಜಾತಿಯ ಹುಲ್ಲುಗಳಿವೆ. ಹುಲ್ಲುಗಾವಲಿನಲ್ಲಿ ಬೆಳೆಯುವ ಮರಗಳು, ಹುಲ್ಲುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಬೇರನ್ನು ಹೊಂದಿರುವುದಿಲ್ಲ. ಮಾವಿನಮರದಂತೆ (ಭೂಮಿಯಲ್ಲಿ ಆಳವಾಗಿ ಬೇರನ್ನು ಹೊಂದಿರುವ ಮರಗಳಂತೆ) ಇವಕ್ಕೆ ಹೆಚ್ಚಿನ ಪೋಷಕಾಂಶಗಳು, ನೀರಿನ ಸೌಲಭ್ಯದ ಅಗತ್ಯವಿರುವುದಿಲ್ಲ. ಇವು ಭೂಮಿಯ ಮೇಲಿನ ಪದರವನ್ನೇ ಆಶ್ರಯಿಸಿ ಇರುತ್ತವೆ. ಮಳೆಯ ಪ್ರಮಾಣವೂ ಹುಲ್ಲುಗಾವಲಿನಲ್ಲಿ ಕಡಿಮೆ. ಹುಲ್ಲುಗಾವಲಿನಲ್ಲಿ ಆಶ್ಚರ್ಯ ತರಿಸುವ ಬೇವಿನ ಮರವನ್ನು ನಾವು ನೋಡಿದೆವು. ಅದರ ಕಾಂಡದಿಂದ ಹಾಲಿನಂತೆ ಬಿಳಿಯಾದ ದ್ರವವು ಹೊರಸೂಸುತ್ತಿತ್ತು. ಮರಗಳಿಗೆ ಬೇಕಾದ ಪ್ರಾಥಮಿಕ ಪೋಷಕಾಂಶಗಳನ್ನು ಜೀರ್ಣಿಸಿಕೊಂಡ ನಂತರ ಆನುಷಂಗಿಕ ಪೋಷಕಾಂಶಗಳು ಹೆಚ್ಚಾಗಿ ಹೊರ ಬರುತ್ತಿರುವ ಸೋರಿಕೆ ಇದಾಗಿತ್ತು. ಇದು ಬಹಳ ಅಸಹಜ ಕ್ರಿಯೆಯಾಗಿದ್ದು, 5-6 ದಿನಗಳಿಂದ ಈ ಸೋರಿಕೆ ಉಂಟಾಗಿದೆ ಎಂದು ಸ್ಥಳೀಯರು ಹೇಳಿದರು. ಇಂತಹ ಸೋರಿಕೆಗಳಿಂದ ಮರದ ಮೇಲ್ಪದರವೂ ಹೊರ ಬರುವುದರಿಂದ ಸೋರಿಕೆ ನಿರಂತರವಾದರೆ ಹೊರ ಪದರವನ್ನೂ ಕಳೆದುಕೊಳ್ಳಬಹುದು. ಆದರೆ ಸೋರಿದ ದ್ರವವು ಭೂಮಿಯಲ್ಲಿ ಸೇರಿ ಅದೇ ಜಾತಿಯ ಮರಗಳು ಮತ್ತಷ್ಟು ಹುಟ್ಟಲು, ಅದೇ ಕುಲದ ರಕ್ಷಣೆಗಾಗಿಯೂ ಈ ಕ್ರಿಯೆ ಸಹಾಯಕವಾಗಬಹುದು. ಇದೊಂದು ರಕ್ಷಣಾತಂತ್ರ, ಮನುಷ್ಯರಿಗೆ ವಿಷವಾಗಬಹುದು. ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಪಿಯಾಸಿ, ಸೈಪ್ರಸಿ ಎಂಬ ಎರಡು ಜಾತಿಯ ಹುಲ್ಲುಗಳಿರುತ್ತವೆ. ಸೈಪ್ರಸ್ ಹೊಂಡೋಫೋಲಿಯಾ (SH) ಇವು 1 ರಿಂದ 2 ಅಡಿ ಎತ್ತರದವರೆಗೆ ಬೆಳೆಯಬಲ್ಲವು. ಭಾರತದಲ್ಲಿ 60 ಜಾತಿಯ ಸೆಡ್ಜಸ್‌ಗಳಿವೆ. ಇವು ಭೂಮಿಯ ಮೇಲಿನ ಪದರದ ಪೋಷಕಾಂಶಗಳನ್ನು ಮಾತ್ರ ಬಳಸಿಕೊಳ್ಳುತ್ತವೆ. ಇವುಗಳು ಬಲೆಯಂಥಹ ಬೇರಿನಿಂದ ಬೆಳವಣಿಗೆಗೆ ಸಾಕಾಗುವಷ್ಟು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹುಲ್ಲುಗಳೂ ಕೂಡ ಮನುಷ್ಯರು ತಿನ್ನಲು ಸಾಧ್ಯವಾಗುವ ಹಣ್ಣುಗಳನ್ನು, ಹೂವುಗಳನ್ನು ಹೊಂದಿರುತ್ತವೆ. ಇವುಗಳು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಬೀಜಗಳನ್ನು ತಯಾರಿಸಬಲ್ಲವು. ಗಿರಿಜನರು, ಕಾಡುಜನರು ಇದರ ಸ್ಪಷ್ಟ ಅರಿವನ್ನು ಹೊಂದಿರುತ್ತಾರೆ. ನಾವು ಅಕ್ಕಿ ತಿನ್ನುವಂತೆ ಅವರು ಇದರ ಬೀಜಗಳನ್ನು ಬಳಸುತ್ತಾರೆ. ಎಷ್ಟೋ ಬಾರಿ ವ್ಯವಸಾಯ ಭೂಮಿಯ ಫಲವತ್ತತೆಯು ಅಕ್ಕ-ಪಕ್ಕದಲ್ಲಿರುವ ಇಂತಹ ಹುಲ್ಲುಗಾವಲಿನ ಬಳುವಳಿಯೂ ಆಗಿರುತ್ತದೆ. ಬರಗಾಲದಲ್ಲಿ ಹಳ್ಳಿಗರಿಗೆ ಆಹಾರವಾಗಿದ್ದ ಕಾರೆ ಹಣ್ಣುಗಳನ್ನು ಅದರ ಗಿಡವನ್ನು ನೋಡಿದೆವು. ಬಾಯಿ ಇಲ್ಲದೆ ಇದ್ದರೂ ಕೇವಲ ಕಾಲುಗಳ ಉಜ್ಜುವಿಕೆಯಿಂದ ಶಬ್ದ  ಮಾಡುವ ಕ್ರಿಕೆಟ್ ಹುಳುಗಳನ್ನು ಕಂಡೆವು. ಗೂಸುಂಬೆ, ಬುಲ್‌ಬುಲ್ ಪಕ್ಷಿಗಳು ನಮಗೆ ಕಾಣಲು ಸಿಕ್ಕವು. ಮರವನ್ನು ಆಶ್ರಯಿಸಿ ಬೆಳೆಯುವ ನಂತರ ಮರದ ಸಾರವನ್ನೆಲ್ಲಾ ಹೀರಿ ತಾನೇ ಬಲಿಷ್ಠವಾಗುವ ಮಂಕಿ ಲಾಡರ್ ಅಥವಾ ಲಯಾನಸ್ ಎಂದು ಕರೆಯಲ್ಪಡುವ ಬಳ್ಳಿಯನ್ನು ನೋಡಿದೆವು. ಈ ಬಳ್ಳಿಗಳು ಎಲ್ಲಾ ಮರಗಳನ್ನು ಆಶ್ರಯಿಸುವುದಿಲ್ಲ. ಕೆಲವೊಂದು ಮರಗಳನ್ನು ಮಾತ್ರ ಹುಡುಕಿ ಅದಕ್ಕೆ ಹಬ್ಬುತ್ತವೆ. ಬಲೆಯಂತೆ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಾ ಮಂಗಗಳಿಗೆ ಒಂದೆಡೆಯಿಂದ ಒಂದೆಡೆ ಹೋಗಲು ಸಹಾಯಕವಾಗಿವೆ. ಇದನ್ನು ಮೂಳೆ ಚಿಕಿತ್ಸೆಗಾಗಿ ಬಳಸುವರು ಎಂಬುದು ನಮಗೆ ಹೊಸವಿಷಯವಾಗಿತ್ತು. ಕ್ಯಾಕ್ಟಸ್‌ನ ಎರಡು ಜಾತಿಯ ಗಿಡಗಳನ್ನು ಕಂಡೆವು. ಬಳೆಯಾಕಾರದಲ್ಲಿ ಮರದಲ್ಲಿ ಜೋತಾಡುತ್ತಿದ್ದ ಕಾಯಿಗಳನ್ನು ಕಂಡೆವು. ಅದನ್ನು ಮುರಿದಾಗ ಆಲ್ಕೊಲಾಯಿಡ್ ನಂತಹ ದ್ರವ ಹೊರಬರುತ್ತಿತ್ತು. ನೈಸರ್ಗಿಕ ವಿಷವಾಗಿ ಕೆಲಸಮಾಡುವ ನಮ್ಮ ಜೀರ್ಣಕ್ರಿಯೆಯನ್ನು ನಿಲ್ಲಿಸುವ ಗುಲಗಂಜಿಯನ್ನು ಹೆಕ್ಕಿ ತೆಗೆದೆವು. ದೊಡ್ಡ ಗಾತ್ರದ ಗ್ರಾಸ್ ಹಾಪರ್ ನೋಡಿ ಮಕ್ಕಳು ಆನಂದಿಸಿದರು. ಸ್ಥಳೀಯರಾದ ಹನುಮಂತಪ್ಪನವರ ಮಾತಿನಲ್ಲಿ ಮೊದಲಿದ್ದ ಕಾವಲ್ ಮತ್ತು ಈಗಿರುವ ಕಾವಲ್… ಇಲ್ಲಿ ಮೊದಲು ತುರುವುಗಟ್ಟಲೆ (300-400) ಹಸುಗಳಿರುತ್ತಿದ್ದರು. 8-9 ವರ್ಷಗಳಿಂದೀಚೆಗೆ ಎಲ್ಲಾ ಹೋಗಿಬಿಟ್ಟವು. ಫಾರಂ ಅಂತ ಮಾಡಿ ಮುಳ್ಳುತಂತಿ ಹಾಕಿಬಿಟ್ಟರು. ಕುರಿ ಫಾರಂ, ಗೋ ಶಾಲೆ ಅಂತ ಸ್ವಲ್ಪ ಜಾಗ ಮಾತ್ರ ಉಳಿಸಿಕೊಂಡಿದ್ದಾರೆ. ಬರಗಾಲದಲ್ಲಿ ಸರಕಾರವೇ ಹಸುಗಳಿಗೆ ಹುಲ್ಲು ಕೊಡುತ್ತಿತ್ತು. ಹಾಲನ್ನು ಅವರೇ ತೆಗೆದುಕೊಂಡು ಹೋಗುತ್ತಿದ್ದರು ಮತ್ತೆ ನಾವು ಪೇಟೆಗೆ ಹೋಗಿ ಮಾರಿ ಬರುತ್ತಿದ್ದೆವು. ಮೊದಲು ಬರಿ ಮರಗಳಿದ್ದವು. ದೊಡ್ಡ ಕಾಡಿತ್ತು. ಈಗ ಬಯಲಾಗಿ ಹೋಯ್ತು. ಸರಕಾರದವರು ಎಲ್ಲಾ ಕಡಿದುಕೊಂಡು ಬಿಟ್ಟರು. ಕಟ್ಟಿಗೆಗೆ, ರೈಲಿನ ಇದ್ದಿಲಿಗೆ ಮರಗಳನ್ನು ಕಡಿದುಕೊಂಡು ಮಾರಿಬಿಟ್ಟರು. ಹಂದಿ, ಜಿಂಕೆ, ಕೃಷ್ಣಮೃಗ, ನವಿಲು, ಮುಂತಾದ ಪ್ರಾಣಿಗಳು ಇರುತ್ತಿದ್ದವು. ನೀರೆ ಇಲ್ಲ ವ್ಯವಸಾಯಕ್ಕೆ, 120-150 ಅಡಿ ಕೊರೆದು ಬೋರ್ ಹಾಕಿ ನೀರಾವರಿ ಮಾಡಿಕೊಂಡು ವ್ಯವಸಾಯ ಮಾಡಬೇಕು. ಮೊನ್ನೆ ಮಳೆ ಬಂದುದ್ದರಿಂದ ನೀರು ಬಂತು.   ಸಿದ್ಧಪ್ಪ ಮತ್ತು ತಿಮ್ಮೇಶ ಅವರು ಕಂಡಿರುವ ಅಮೃತ ಮಹಲ್ ಕಾವಲ್ ಈಗ ಅಮೃತ ಮಹಲ್ ಕಾವಲ್ ಆಕಳು ಅಜ್ಜಾಂಪುರದಲ್ಲಿದೆ, ಇಲ್ಲಿ ಇಲ್ಲ. 300 ರಾಸುಗಳಿವೆ. ಅಮೃತ ಮಹಲ್ ಹೋರಿಗಳು ನೋಡಲು ಸುಂದರವಾಗಿರುತ್ತವೆ. ಅವು ಬಂಗಾರದಂತೆ, ಒಂದು ಹೋರಿ 1 ಲಕ್ಷ ಅಥವಾ 1.20 ಲಕ್ಷಕ್ಕೆ ಮಾರಾಟವಾಗುತ್ತದೆ. ಅಮೃತ ಮಹಲ್ ನೋಡೋಕೆ ಸುಂದರ. ಅಮೃತ ಮಹಲ್ ಆಕಳಿನ ಹಾಲು ಬಹಳ ಶಕ್ತಿ ಕೊಡತ್ತೆ. ದಿನಕ್ಕೆ 5-8 ಲೀಟರ್ ಹಾಲು ಕೊಡುತ್ತವೆ. ಮೇವು ಜಾಸ್ತಿ ಬೇಕು. ಪ್ರತಿದಿನ ಯಾರು ನೋಡಿಕೊಳ್ಳುತ್ತಾರೋ ಅವರೇ ಅದರ ಹತ್ತಿರ ಹೋಗಲು ಸಾಧ್ಯವಾಗುವುದು. ಹೊಸ ಮನುಷ್ಯರು ಹೋದರೆ ಬಿಡುವುದಿಲ್ಲ ಅವು, ಅಷ್ಟೆತ್ತರ ಇರುತ್ತವೆ. ನೋಡಿ ಬನ್ನಿ ಒಮ್ಮೆ. ಈಗ ಎಲ್ಲಾ ಬೇಲಿ ಹಾಕಿಬಿಟ್ಟರು ಅಮೃತ ಮಹಲ್ ಇಲ್ಲ, ರಾಮ್ ಬುಲೆಟ್ ಅಂತ ಕುರಿ ತಂದರು, ಅದು ಇಲ್ಲ, ಸಿಂಧಿ ಹಸು ತಂದರು. ಅದೂ ಇಲ್ಲ. ಈಗ ಯಾರು ಯಾರೋ ಕೊಂಡುಬಿಟ್ಟಿದ್ದಾರೆ. ಕಾಂಪೌಂಡ್ ಹಾಕ್ತಾ ಇದ್ದಾರೆ. ಒಬ್ಬ ರೈತ 100 ರಿಂದ 400 ಕುರಿಗಳವರೆಗೆ ಸಾಕಿಕೊಂಡಿರುತ್ತಾನೆ. ಈರುಳ್ಳಿ, ಸಜ್ಜೆ, ಶೇಂಗಾ, ತೊಗರಿ, ಅಲಸಂದಿ, ರಾಗಿ, ಭತ್ತಗಳನ್ನು ಬೆಳೆಯುತ್ತೇವೆ. ವರ್ಷಕ್ಕೆ 2 ಬೆಳೆ ಬೆಳೆಯುತ್ತೇವೆ. ಕಂಬಳಿ ತಯಾರಿಕೆ ಅಮೃತ ಮಹಲ್ ಕಾವಲ್‌ಅನ್ನು ಅವಲಂಬಿಸಿ ಅಲ್ಲಿನ ಸ್ಥಳೀಯರು ಜೀವನಕ್ಕೆ ನಂಬಿರುವ ಉದ್ಯೋಗ ಹೈನುಗಾರಿಕೆ ಮತ್ತು ಕಂಬಳಿ ತಯಾರಿಕೆ. ಇಲ್ಲಿನ ಕಂಬಳಿಗಳಿಗೆ ಒಳ್ಳೆಯ ಬೇಡಿಕೆ ಇದೆ. ಒಂದು ಕಂಬಳಿ ತಯಾರಿಕೆಗೆ ಕನಿಷ್ಠ 4 ದಿನಗಳಾದರೂ ಬೇಕು. ಇದರಲ್ಲಿ ವಿಶೇಷ ತಜ್ಞತೆಯನ್ನು ಹೊಂದಿರುವ ಇಲ್ಲಿನ ಜನ ವಾರಕ್ಕೆ 2-3 ಕಂಬಳಿಗಳನ್ನು ತಯಾರು ಮಾಡುತ್ತಾರೆ. ಒಂದು ಕಂಬಳಿ 800-1000 ರೂಪಾಯಿಗಳವರೆಗೆ ಮಾರಾಟವಾಗುತ್ತದೆ. ಕುರಿಯಿಂದ ತುಪ್ಪಳವನ್ನು ತಂದು ಯಂತ್ರಕ್ಕೆ ಕೊಟ್ಟು ಬಿಡಿ-ಬಿಡಿಯಾಗಿ ಹತ್ತಿಯನ್ನು ಸ್ವಚ್ಛಗೊಳಿಸುವಂತೆ ಸ್ವಚ್ಛಗೊಳಿಸಿ, ಚರಕದಿಂದ ನೂಲನ್ನು ತೆಗೆದು ಅದಕ್ಕೆ ಹುಣಸೆ ಬೀಜದ ಪುಡಿಯಿಂದ ತಯಾರಿಸಿದ ಗಂಜಿಯನ್ನು ಹಂಚಿ ಹದಗೊಳಿಸುತ್ತಾರೆ. ನಂತರ ಅದನ್ನು ಬಾಚಣಿಕೆಯಂತಹ ಸಾಧನದಿಂದ ಬಾಚಿ ನೂಲನ್ನು ನೇಯಲು ತಯಾರಿಟ್ಟುಕೊಳ್ಳುತ್ತಾರೆ. 9 ಕಂಬಿಗಳ ಒಂದು ಮರದ ಪಟ್ಟಿಯಲ್ಲಿ ಈ ನೂಲನ್ನು ಎಣಿಸಿಕೊಂಡು ಹಾಕುತ್ತಾರೆ. ಈ ಪ್ರಕ್ರಿಯೆಯಂತೂ ಎಂತಹವರನ್ನೂ ಆಶ್ಚರ್ಯಗೊಳಿಸುತ್ತದೆ. ಎಂತಹ ಅದ್ಭುತ ಕೈಚಳಕ!! ಒಂದು ಕಂಬಳಿಗೆ 380 ರಿಂದ 400 ಎಳೆಗಳು ಬೇಕಾಗುತ್ತವೆ. ಒಂದು ಕಡ್ಡಿಗೆ ಆ ದಾರವನ್ನು ವಿಶೇಷ ವಿಧಾನದಲ್ಲಿ ಸುತ್ತಿ ಇಟ್ಟುಕೊಳ್ಳುತ್ತಾರೆ. ಸೀರೆ ನೇಯುವಂತೆ ಕೈಮಗ್ಗದ ಮಾದರಿಯಲ್ಲಿ ತಮ್ಮದೇ ಸಾಧನಗಳಿಂದ ಹೆಣಿಗೆಯನ್ನು ಆರಂಭಿಸುತ್ತಾರೆ. ಹೆಣೆಯುತ್ತಾ ಹೋದಂತೆ ಅದು ಒಂದು ದೊಡ್ಡ ಮರದ ದಿಮ್ಮಿಗೆ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಬೆಳಗಿನಿಂದ ಒಂದು ಹಳ್ಳದಂತಹ ತಗ್ಗುಪ್ರದೇಶದಲ್ಲಿ ನಿಂತು ಮನೆಯ ಯಜಮಾನ ಈ ಕಂಬಳಿಯನ್ನು ನೇಯುತ್ತಾ ಹೋಗುತ್ತಾನೆ. ಹೆಂಡತಿ ಚರಕದಿಂದ ನೂಲು ತೆಗೆಯುತ್ತಾಳೆ, ಮಕ್ಕಳು ಗಂಜಿ ಹಚ್ಚಿ ಚೊಕ್ಕ ಮಾಡುತ್ತಾರೆ. ಹೀಗೆ ಮನೆಮಂದಿ ಎಲ್ಲಾ ಒಂದೊಂದು ಕೆಲಸವನ್ನು ಮಾಡುತ್ತಾರೆ. ಅಲ್ಲದೆ ಒಂದೊಂದು ಸಾಧನದ ತಯಾರಿ ಒಂದೊಂದು ಜನರ ಗುಂಪು ಮಾಡುತ್ತದೆ. ಆದ್ದರಿಂದ ಎಲ್ಲರಿಗೂ ಇಲ್ಲಿ ಉದ್ಯೋಗವಿದೆ. ಒಂದು ಕಂಬಳಿ ತಯಾರಿಕೆಯು ಹಲವು ಹಂತಗಳಲ್ಲಿ ಎಷ್ಟೋ ಜನರಿಗೆ ಕೆಲಸ ನೀಡುತ್ತದೆ. ಆದರೆ ಈಗ ಇದಾವುದರ ಪರಿವೆಯೇ ಇಲ್ಲದೆ ಸರಕಾರ ಕಾವಲ್‌ಅನ್ನು ಶಾಶ್ವತವಾಗಿ ಮುಚ್ಚಿಬಿಡುವ ಯೋಚನೆಯಲ್ಲಿದೆ. ಮುಂದೆ… ಮಕ್ಕಳು ಈ ಪರಿಸರವನ್ನು ಬಹಳ ಕುತೂಹಲದಿಂದ ಗಮನಿಸಿದರು. ಕೋಳಿಗಳನ್ನು, ಕೋಳಿಯ ಮರಿಗಳನ್ನು ನೋಡಿ ಪ್ರಶ್ನಿಸಿದರು. ಒಂದು ಕೋಳಿಮೊಟ್ಟೆಯಿಂದ ಮರಿ ಹೊರ ಬರಲು 1 ತಿಂಗಳು ಕಾವು ಕೊಡಬೇಕು. ದೊಡ್ಡದಾಗಿ ಬೆಳೆಯಲು ಯಾವ ಖಾಯಿಲೆಯೂ ಬರದಿದ್ದರೆ 6-7 ತಿಂಗಳು ಬೇಕು. ಇವು 1.5-2 ವರ್ಷ ಬದುಕಿರುತ್ತವೆ ಎಂಬ ವಿಷಯವನ್ನು ಅರಿತರು. ಮೇಕೆ ಮರಿಗಳಿಗೆ ಹುಲ್ಲು ತಿನ್ನಿಸಿ ಖುಷಿಪಟ್ಟರು. ಅಲ್ಲಿಂದ ಮುಂದೆ ಊರಿನ ಸರಕಾರಿ ಶಾಲೆಯ ಆವರಣದಲ್ಲಿ ಹಿರಿಯರ ಮಾತುಗಳನ್ನು ಕೇಳಲು ಶಿಸ್ತಿನಿಂದ ಕೂತರು. ಪಂಚಾಯತಿ ಸದಸ್ಯರು ಮಕ್ಕಳನ್ನು ಕುರಿತು ಆಡಿದ ಮಾತುಗಳು ನಮ್ಮ ಪ್ರಾಂಶುಪಾಲರು ಪೂರ್ಣಪ್ರಮತಿಯ ಪರಿಚಯವನ್ನು ಚಳ್ಳಕೆರೆಯ ಜನರಿಗೆ ಮಾಡಿಕೊಟ್ಟರು. ಅಲ್ಲಿನ ಶಾಲೆಯ ಉಮೇಶ್ ಎಂಬುವರು ‘ಭಾರತೀಯ ಸೈನಿಕರೆ ವಂದನೆ’ ಎಂಬ ಹಾಡನ್ನು ಹಾಡಿದರು.   ಕರಿಯಣ್ಣ ಅವರು ಮಾತನ್ನಾರಂಭಿಸುತ್ತಾ….. “ಗಾಂಧಿ ಜಯಂತಿಯ ದಿನ ನಿಮ್ಮನ್ನೆಲ್ಲ ಇಲ್ಲಿ ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಇದ್ದರೆ ಡೆಲ್ಲಿ. ಪಟ್ಟಣದಲ್ಲಿ ಏನೇ ಸಿಕ್ಕರೂ ಆಹಾರ ಮಾತ್ರ ಇಂಟರ್‌ನೆಟ್ ನಲ್ಲಿ ಬರುವುದಿಲ್ಲ.

Sananda swamiji's 100th day of upavasa for Ganga

Sananda swamiji’s 100th day of upavasa for Ganga

Sunday, September 22nd, 2013

A day to be noted in history After receiving the last year’s Samman, Swamiji left on us a deep impression of Ganga consciousness. We have also been deeply attached to Swamiji and every time we herd of his thought of giving up food for the sake of Ganga mata, our hearts were filled with anxiety. Our anxiety inflated when he started his endless AnashanVrata(fast to death) for the cause of Ganga mata’s health on the 13th of June. We have been feeling helpless to support him directly in any way. Some of our team members tried out ways to help him but nothing did work. In this situation we have relied on his own belief which says ” In our tradition, when everything fails and we become weak Tapasya and Prarthana are the only ways relied after.”  We have been praying for the health of Ganga mata and swamiji as a strict daily routine since the days he left Bangalore and more intensely from 13th June. Our fear of swamiji’s illhealth kept on increasing as the number of swamiji’s Anashan days kept on incrementing on the school’s pin board. All these days, we were soothing our anxiety with the childish hope of Swamiji’s recovery. But today the pin board shows 100 and swamiji has decided to give up water too. A slight thought of the 83 year old swamji’s condition irks us and fills us with shame. We are visionless. Staying quiet would be our double shame.  We had an assembly of teachers, team members and children of purnapramati on 21st September. Sri Radhakrishna Bhadti, Sri Lingaraju, Sri D K Sharma, SriNagesh Hegde and Sri Satyanarayanacharya joined us. Poojya pejavara Swamiji, Sri Rajendra Singh and Sri Prahladacharya joined us over the phone. After our daily prayer and ganga prarthana, Sri Rajendra Singh spoke to the children over the phone. He said “Today is the 100th day of Swamiji’s Anashan. But the government just does not care . When the prime minister is not ready to listen to a true tapasvi, I have felt that there is no use in working with him. So I have decided to resign from my post as a member of Ganga basin authority today. ” Sri pejavara swamiji expressed his support to Swamiji and gave the praman vachan “GANGA RAKSHA ME ADYA DEEKSHA”  which means  ” Right at this moment, I take the oath of protection of Ganga”.  After the oath, over the phone, Sri prahladacharya said “Ganga has been the anchor of the Indian tradition. It is believed that Bhagiratha brought Ganga mata with monumental effort. Swamiji is under serious tapasya to preserve the existence of such a river for the future generation.His sacrifice must become an inspiration for us and it will not go waste .”  On behalf of Purnapramati, Srinidhi reported the principles followed by Purnapramati as a step of nature conservation. ” On the 37th day of Swamiji’s tapasya,  when we met him along with Pejavara Swamiji and Sri Prahladacharya, he said that the flow of Gangaji is not just the result of Bhagiratha’s effort. It was the result of the tapsya of two generations prior to Bhagirath. So I do not desire for the immediate fruit of my tapasya. I foresee that the future generation will work for Gangaji. I believe that Purnapramati’s children will make the change.” he said.  Inspired by swamiji, we have determined on three ways to contribute to the conservation of nature. Adhyayan, Adhyapan and Tapasya. Our Adhyayana involves gathering the maximum possible information about water, forests and all that we buy or consume; where did the item come from? In what way was it manufactured?, etc Adyapana is the propagation of the knowledge gained through Adhyayan to the society thereby creating an awareness in the society and Tapasya involves the implementation of the knowledge gained in our daily life. ”  For example, we have stopped presenting mementoes to the guests who visit us and we just thank them with heartfelt regards.” He said.  Sharma ji said “I have moved closely with swamiji from past many years. I am inspired by his commitment and style of working. Every activity he has taken up in his life has become complete. But unfortunately he has quit the institutions one after the other where he served. This shows that nowhere in our country there is place for the good. But he never gave up his vision. He has been inspiring and guiding a lot of persons to work for the mother nature. In this kaliyug we cannot expect god incarnating as Ram or Krishna. These are the people in whom we have to see God.” ” Freedom is not a word exclusive to a country. Plants, rivers, waves, flowers, everything has to have its freedom. A river’s freedom is the freedom to flow. Swamiji is under penance for the sake of it. Let us all wish for the fulfilment of his desire” Sri Nagesh Hegde said. Addressing children, Sri Radhakrishna Bhadti said ” According to Darwin’s theory, Monkeys lost their tails and became humans because they did not use them. Similarly if we block the rivers with a huge amount of dams as we are doing now, there will be one day when the word river becomes meaningless. A river means something that roars.”  Sri Lingaraju congratulated Purnapramati saying ” Last year around this time you visited Shivaganga and cleaned  kalyanis and planted trees. The trees have grown up now and the kalyanis are full of water. Youths have been visiting the place, picking out the silt from many lakes since the time you began the trend. Congrats, you set the trend. ” We have an instance of the similar situation in the Puranas, which says that the flow of Ganga was once cut. Jahnu rishi won over the support of the devatas through severe tapasya and brought the mother back. Ganga is thus called Jahnavi. For sure, the tapasya of Swamiji will be fruitful.” Sri Satyanarayanacharya said.

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.