ಪೋಷಕರ ಮಾಹಿತಿ ಸಭೆ

ಪೋಷಕರ ಮಾಹಿತಿ ಸಭೆ

ದಿನಾಂಕ: ೩೦/೦೫/೨೦೧೫

ಸ್ಥಳ: ಮನೋರಮಾ ಸಭಾಂಗಣ, ಅಕ್ಷರಂ ಸಂಸ್ಥೆ, ಬೆಂಗಳೂರು

೨೦೧೫-೧೬ ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಕಲಿಕೆ, ಅದಕ್ಕಾಗಿ ಅಳವಡಿಸಿಕೊಂಡಿರುವ ನೂತನ ವಿಧಾನಗಳು, ಮಾಡಿಕೊಂಡಿರುವ ತಯಾರಿಗಳು, ಈ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರ, ವಾರ್ಷಿಕ ಗುರಿಯನ್ನು ತಲುಪಲು ರಚಿಸಿರುವ ದಿನ-ದಿನದ ಕಾರ್ಯಚಟುವಟಿಕೆಗಳು – ಇವನ್ನೆಲ್ಲಾ ಪೋಷಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷದ ಆರಂಭಕ್ಕೆ ಪೋಷಕರ ಸಭೆಯನ್ನು ಆಯೋಜಿಸಲಾಗುವುದು.

ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆ, ಅದಕ್ಕೆ ತಕ್ಕ ಅವರ ಅಗತ್ಯಗಳನ್ನು ಅರಿತು ಪಠ್ಯಕ್ರಮವನ್ನು ರಚಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಸೂಕ್ತ ಮಾರ್ಗವನ್ನು ಕಂಡುಕೊಳ್ಳುತ್ತಾ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಿರಂತವಾಗಿ ನಡೆದಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ Learner centric approach ಅಥವಾ Montessori ವಿಧಾನದಿಂದ ಮಕ್ಕಳ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಬಹುದೆಂದು ಮನಗಂಡು ಶಾಲೆಯ ಎಲ್ಲಾ ಶಿಕ್ಷಕರೂ ಈ ತರಬೇತಿಯನ್ನು ಪಡೆದರು. ಶಿಕ್ಷಕರ ಕಲಿಕೆ, ಅವರು ಮಕ್ಕಳಿಗಾಗಿ ಮಾಡಿಕೊಂಡಿರುವ ತಯಾರಿಗಳನ್ನು ಪೋಷಕರ ಮುಂದಿಡುವುದು ಮೊದಲ ಹೆಜ್ಜೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮ ೯.೧೫ಕ್ಕೆ ಪ್ರಾರಂಭವಾಯಿತು. ದೀಪ ಬೆಳಗಿಸಿ, ಸಂಸ್ಕೃತದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಸಾಂಪ್ರದಾಯಿಕ ರೀತಿಯಲ್ಲಿ ಸಭೆಯನ್ನು ಆರಂಭಿಸಲಾಯಿತು.

-೦-

ಮೊದಲಿಗೆ  ಶ್ರೀನಿವಾಸ್ ಅವರು ಶಾಲೆಯ ಪೂರ್ವ-ಪರಗಳ ಬಗ್ಗೆ ಸ್ಥೂಲ ಚಿತ್ರಣವನ್ನು ಕೊಟ್ಟ ಬಗೆ ಹೀಗಿದೆ: ಐದು ವರ್ಷದ ಕೆಳಗೆ ಪೂಜ್ಯ ಪೇಜಾವರ ಸ್ವಾಮೀಜಿಯವರು ದೀಪ ಬೆಳಗಿಸಿ ಆರಂಭಿಸಿದ ಸಂಸ್ಥೆ ಸತ್ಯನಾರಾಯಣಾಚಾರ್ಯರು ಹೇಳಿದಂತೆ ಒಂದು ಪ್ರಮುಖ ಘಟ್ಟದಲ್ಲಿ ಬಂದು ನಿಂತಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಗೆ ಮೊದಲ ೫ ವರ್ಷ ಭದ್ರವಾಗಿ ನೆಲೆಯೂರಲು ಬಹಳ ಪ್ರಮುಖವಾದುದು. ಮೊದಲ ಘಟ್ಟದಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಶಿಕ್ಷಣವನ್ನು ಒಂದು ವೇದಿಕೆಯಲ್ಲಿ ತರುವುದು, ಸಂಘಟನೆ ನಮ್ಮ ಗುರಿಯಾಗಿತ್ತು. ಎರಡನೆಯ ಘಟ್ಟದಲ್ಲಿ ಇವು ಸಮ್ಮಿಳಿತಗೊಂಡಾಗ ಆಗಬಹುದಾದ ಸೃಷ್ಟಿಗಳನ್ನು ಮಕ್ಕಳು ಹಲವು ಚಟುವಟಿಕೆಗಳ ಮೂಲಕ ತೋರಿಸಿದ್ದಾರೆ. ಮೂರನೆಯ ಘಟ್ಟದಲ್ಲಿ ಕಲಿಕೆಯನ್ನು ಆಳವಾಗಿ ಅಭ್ಯಾಸ ಮಾಡುವುದು. ಕಲಿಕೆ ಹೇಗೆ ಆಗುವುದು? ಪ್ರತಿಯೊಂದು ಮಗುವಿಗೂ ಕಲಿಕೆ ಪರಿಪೂರ್ಣವಾಗಿ ಆಗುವುದು ಹೇಗೆ ಸಾಧ್ಯ? ಹೀಗೆ ಮೂಲಭೂತ ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಬೇಕಾದ ತರಬೇತಿಯು ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷದಲ್ಲಿ ಒಂದು ತರಗತಿಯಲ್ಲಿ ಕೂತು ಅಧ್ಯಾಪಕರು ನಿರ್ಧರಿಸಿದ ಪಾಠಗಳನ್ನು ಕಲಿಯುವ ಮಾರ್ಗದಿಂದ ಮಗು ಕಲಿಯಲು ಬಯಸುವುದನ್ನು ಅದರ ಗತಿಗೆ ತಕ್ಕಂತೆ ಕಲಿಸುವೆಡೆಗೆ ಬದಲಾಗಿದೆ. Child centric ಎಂದರೆ ಮಗು ಮಾತ್ರ ಅಲ್ಲ, ಅಧ್ಯಾಪಕರೂ ಕೂಡ. ಎಲ್ಲರೂ ಕಲಿಯುತ್ತಾರೆ. ಹಾಗಾಗಿ ಇದು Learner Centric ಎಂದರೆ ಹೆಚ್ಚು ಸೂಕ್ತ. ಅಧ್ಯಾಪಕರೂ ಇಲ್ಲಿ ಹಿರಿಯ ವಿದ್ಯಾರ್ಥಿಗಳು ಮಾತ್ರ ಆಗಿರುತ್ತಾರೆ. ಮಕ್ಕಳೊಂದಿಗೆ ಎಲ್ಲರೂ ತೊಡಗಿ ಕಲಿಯುವುದು. ಇದೊಂದು  Joint learning  à²µà³à²¯à²µà²¸à³à²¥à³†. ಅಧ್ಯಾಪಕರು ಕಲಿತು ಬಂದ ಪಾಠವನ್ನು ಮಕ್ಕಳಿಗೆ ಕಲಿಸುವುದು ಎನ್ನುವುದಕ್ಕಿಂತ ಕಲಿಯುವ ಒಂದು ಸಮುದಾಯ ಇದಾಗಬೇಕು. ಒಂದು ಕುಟುಂಬದಲ್ಲಿ ಅಜ್ಜ, ಅಪ್ಪ, ಮಗ ಮೂವರು ಒಂದು ಕಲಿಯುವ ಕುಟುಂಬದಂತೆಯೇ ಈ ಕಲ್ಪನೆ.

(೧) ಮಕ್ಕಳಿಗೆ ಒಳ್ಳೆಯ ಕಲಿಕೆಯ ಪರಿಸರ (ಅದು ಬೋಧನಾ ಸಾಮಗ್ರಿಗಳಾಗಿರಬಹುದು, ಸಾಧನಗಳು, ಪುಸ್ತಕಗಳು, ಚಟುವಟಿಕೆಗಳು, ಅಲ್ಲಿರುವ ಹಿರಿಯರಾಗಿರಬಹುದು, ಪ್ರಕೃತಿಯಾಗಿರಬಹುದು) (೨) ಅಧ್ಯಾಪಕರಾಗಿ ಆ ಎಲ್ಲವನ್ನೂ ಮೊದಲು ನಾವು ಮೊದಲು ಕಲಿತಿರಬೇಕು – ಎಂಬ ಎರಡು ಪ್ರಮುಖ ಅಂಶಗಳೊಂದಿಗೆ ಈ ವರ್ಷದ ಪಠ್ಯಕ್ರಮವನ್ನು ರೂಪಿಸಲಾಗಿದೆ.

ಮೂರನೆಯದಾಗಿ ಇದೊಂದು ಕಲಿಕಾತಾಣ ಮಾತ್ರ ಆದರೆ ಹೆಚ್ಚು ಪರಿಣಾಮಕಾರಿಯಾಗಲಾರದು, ಬದಲಾಗಿ ಕಲಿಯುವ-ಜೀವಿಸುವ ಒಂದು ಸಮುದಾಯವಾಗಬೇಕು. ಆ ನಿಟ್ಟಿನಲ್ಲಿ ಆನಂದವನವು ತಯಾರಾಗುತ್ತಿದೆ.

 file288

ಈ ವರ್ಷ Anubhava Science Centre ನ ಗೀತಾ ಅರವಿಂದ್, ಕ್ಷಮಾ, ಅಂಜು ಅವರ ಸಹಾಯದಿಂದ ನಮ್ಮ ಶಾಲೆಯಲ್ಲಿ ಒಂದು science-math lab ತಯಾರಾಗಬೇಕೆಂಬುದು ಈ ವರ್ಷದ ಗುರಿಯಾಗಿದೆ. ಹರೀಶ್ ಭಟ್ ಅವರು ಮಕ್ಕಳಿಗೆ ಹಲವು ಉತ್ತಮ project ಗಳ ಮೂಲಕ ನಿರ್ದಿಷ್ಟವಾದ ಕಲಿಕೆಯಲ್ಲಿ ತೊಡಗಲಿದ್ದಾರೆ, ಗುರುಪ್ರಸಾದ್ ಅಥಣಿ ಅವರು ಭೌತಶಾಸ್ತ್ರದ ಬಗ್ಗೆ ಮತ್ತು  competitive exam  à²¦à³ƒà²·à³à²Ÿà²¿à²¯à²¿à²‚ದ ಮಕ್ಕಳನ್ನು ತಯಾರು ಮಾಡಲು ಎರಡು ವರ್ಷಗಳ ಪೂರ್ಣಾವಧಿಯ ಯೋಜನೆಯನ್ನು ರೂಪಿಸಿದ್ದಾರೆ. ಪ್ರಾಣೇಶಾಚಾರ್ಯರು Olympiad ನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಸಮಯ ನೀಡಲಿದ್ದಾರೆ. ವಿಶ್ವೇಶ ಗುತ್ತಲ್ ಅವರು Project based learning ನಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವರ್ಷದ Theme ಆನಂದವನ ಆಗಿರುವುದು. Architecture ನಿಂದ ಆರಂಭಿಸಿ Field work ವರೆಗೆ ಅಲ್ಲಿನ ಎಲ್ಲಾ ಕೆಲಸಗಳಲ್ಲಿ ಮಕ್ಕಳು ಭಾಗಿಯಾಗಲಿದ್ದಾರೆ. ನಾಗೇಶ್ ಹೆಗಡೆ ಅವರು ಪರಿಸರ ಸ್ನೇಹ ಜೀವನ ಮತ್ತು ಉತ್ತಮ ಬರವಣಿಗೆ ದೃಷ್ಟಿಯಿಂದ, ಸುಭಾಶ್-ಯೋಗಾನಂದ ಅವರು ಸಂಪೂರ್ಣ Planning ನಲ್ಲಿ ಮಕ್ಕಳೊಂದಿಗೆ ಕಾರ್ಯ ಮಾಡಲಿದ್ದಾರೆ. ಈ ವರ್ಷದ Electives ನಲ್ಲಿ ಕಲೆಗಳನ್ನು ಮಾತ್ರ ಹೇಳಿಕೊಡಲು ನಿರ್ಧರಿಸಲಾಗಿದೆ. ಕರ್ನಾಟಕ ಸಂಗೀತ, ಭರತನಾಟ್ಯ, ಕಲರಿ ಪಯಟ್ಟು, ಚಿತ್ರಕಲೆ ಮುಂದುವರೆಯಲಿದೆ. Affiliation ದೃಷ್ಟಿಯಿಂದ ಸ್ಪಷ್ಟ ಉತ್ತರವನ್ನು ಮುಂದಿನ ವರ್ಷಕ್ಕೆ ನೀಡಬಹುದಾಗಿದೆ. NIOS, IGCSE, CBSE, State board ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಯೋಚನೆ ನಡೆಯುತ್ತಿದೆ.

-೦-

ನಂತರ ಪುಷ್ಪಾ ಅವರು Learner Centric approach  à²¹à³‡à²—ಿರುವುದು, ಅಲ್ಲಿ Teacher ಪಾತ್ರ ಏನು? ಅಲ್ಲಿ ಮಗು ಹೇಗೆ ಕಲಿಯುವುದು? ಎನ್ನುವುದನ್ನು ತಿಳಿಸಿದರು. ಅದರ ಪ್ರಮುಖಾಂಶಗಳು ಇಲ್ಲಿವೆ:

  • ಕಲಿಕೆ ಎಂಬುದು ಒಂದು ಸಹಜವಾದ ಪ್ರಕ್ರ‍ಿಯೆ. ಹಿರಿಯರಾಗಲಿ, ಕಿರಿಯರಾಗಲಿ ಕಲಿಯುವ ಒಂದು ಗುಣ ಎಲ್ಲರೊಳಗೂ ಇರುವುದು. ಶಾಲೆಯಲ್ಲಿ ಸಿಗುವ ಶಿಕ್ಷಣ ಇದಕ್ಕೆ ಪೂರಕವಾಗಿರಬೇಕು. ಹಾಗಾಗಿ ಇಲ್ಲಿ ಮಗುವಿನ ಅಗತ್ಯ, ಕಲಿಕೆಯ ಗತಿಯನ್ನು ಅರಿತು ಅದನ್ನು ಗೌರವಿಸಿ ಮುಂದುವರೆಯಬೇಕು.
  • ಇದಕ್ಕೆ ಪೂರಕವಾದ ಪರಿಸರವನ್ನು ಸಿದ್ಧಗೊಳಿಸುವುದು ಪ್ರಮುಖವಾದ ಕೆಲಸ. ಸೂಕ್ತವಾದ ಬೋಧನಾ ಸಾಮಗ್ರಿಗಳಿಂದ ಮಕ್ಕಳು ಯಾವುದೇ ವಿಷಯದ ಪರಿಕಲ್ಪನೆಯನ್ನು ಅರಿತು ಮುಂದೆ ತಾವೇ ಅದನ್ನು ಮುಂದುವರೆಸುತ್ತಾ ಅಮೂರ್ತದೆಡೆಗೆ ಸಾಗಬೇಕು.
  • ಮಗುವಿನ ಬೆಳವಣಿಗೆಯ ಹಂತಗಳನ್ನು ಅರಿಯುವುದು ಮುಖ್ಯ. ೦-೬, ೬-೧೨ ವರ್ಷಗಳಲ್ಲಿ ಮಗುವಿನಲ್ಲಾಗುವ ಬದಲಾವಣೆ, ಜೊತೆಗೆ ಮಗುವಿನ ಆಂತರಿಕ ಸಾಮರ್ಥ್ಯವನ್ನು ಅರಿಯಬೇಕು.
  • ಅಧ್ಯಾಪಕರು ಇಲ್ಲಿ ಕೇವಲ ಸಹಾಯಕರಾಗಿರುತ್ತಾರೆ. ಹೇಳಿಕೊಡುವುದು ಎನ್ನುವುದಕ್ಕಿಂತ ಸಾಮಗ್ರಿಗಳಿಂದ ಮಕ್ಕಳೇ ಸ್ವತಃ ಕಲಿಯುವುದು ಹೇಗೆ ಎಂಬುದನ್ನು ಕಲಿಸಬೇಕು. ಈಗ ಇಷ್ಟೇ ಕಲಿಯಬೇಕೆಂದು ಅಧ್ಯಾಪಕರು ನಿರ್ಧರಿಸುವುದಿಲ್ಲ. ಮಕ್ಕಳೊಂದಿಗೆ ಕೂತು ಮಗು ಏನನ್ನು ಕಲಿಯಲು ಬಯಸುತ್ತಿದೆ ಎಂಬುದನ್ನು ಯೋಜಿಸಲಾಗುವುದು. ಮಗುವಿಗೆ ಬೇಕಾದುದನ್ನು ಮಗುವೇ ಆಯ್ಕೆ ಮಾಡುವುದು.
  • ಗಣಿತ, ಇತಿಹಾಸ, ಭಾಷೆ, ವಿಜ್ಞಾನ, ಭೂಗೋಳ, ಜೀವಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಎಲ್ಲವೂ ನಮ್ಮ ಸುತ್ತಲಿನ-ನಿತ್ಯದ ಜೀವನದೊಂದಿಗೆ ಇರುವ ಸಂಬಂಧವನ್ನು ಗುರುತಿಸುವುದನ್ನು ತೋರಿಸುವುದು ನಮ್ಮ ಉದ್ದೇಶ. ತನ್ಮೂಲಕ ಮಗುವೇ ಅದನ್ನು ಕಲಿಯುವುದು. ಕಲಿಕೆ ಪುಸ್ತಕಕ್ಕೆ ಸಂಬಂಧಪಟ್ಟಿದ್ದಕ್ಕಿಂತ ನಮಗೆ ಸಂಬಂಧಪಟ್ಟಿದ್ದು ಎಂಬುದನ್ನು ಮಗುವಿಗೆ ತೋರಿಸುವುದು.

-೦-

ಪ್ರತಿಯೊಂದು Environment ನಲ್ಲಿ ಇರುವ ನಿತ್ಯ ಕಲಿಕಾ ವ್ಯವಸ್ಥೆಗಳ ಬಗ್ಗೆ ಗೀತಾ ಅವರು ಪೋಷಕರಿಗೆ ಮಾಹಿತಿ ನೀಡಿದರು:

  • ಮೊದಲೆರೆಡು ವಾರಗಳಲ್ಲಿ ಮಕ್ಕಳು ಇರುವ ಹಂತವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಂದ ಮುಂದೆ ಪ್ರತ್ಯೇಕ ಮಗುವಿಗೆ ಮಾಡಬಹುದಾದ ಯೋಜನೆಯನ್ನು ಅಧ್ಯಾಪಕರು ಮಕ್ಕಳೊಂದಿಗೆ ಚರ್ಚಿಸಿ ರೂಪಿಸುವರು.
  • ಆ ಯೋಜನೆಯನ್ನು ಮಗುವಿನ Dairy ಯಲ್ಲಿ ನೀಡಲಾಗುವುದು. ಇದರಲ್ಲಿ ಪ್ರತಿದಿನ ನಡೆದ ಚಟುವಟಿಕೆಗಳನ್ನು ನಮೂದಿಸಲಾಗುವುದು.
  • ಪ್ರತಿ ಶನಿವಾರ ಮಕ್ಕಳು ಮತ್ತು ಅಧ್ಯಾಪಕರು ತಾವು ವಾರದಲ್ಲಿ ಕಲಿತಿರುವ ವಿಷಯದ ಅವಲೋಕನ ನೀಡಬೇಕಾಗುವುದು
  • ಅಧ್ಯಾಪಕರು ಪ್ರತಿಯೊಂದು ಮಗುವಿನ presentation-observation ಅನ್ನು ಬರೆದಿಡುವರು.
  • à³­-à³® ಪೋಷಕರು ತಿಂಗಳ ಒಂದು ಶನಿವಾರದಂದು ಶಾಲೆಗೆ ಬಂದು ಮಕ್ಕಳ ಕಲಿಕೆ ಹೇಗಾಗುತ್ತಿದೆ? ಯೋಜನೆಗಳೇನು? ಎಂಬುದನ್ನು ಅಧ್ಯಾಪಕರೊಂದಿಗೆ ಚರ್ಚಿಸಿ ತಿಳಿದುಕೊಳ್ಳುವ ವ್ಯವಸ್ಥೆ ಇರುವುದು.

-೦-

ಸಂಸ್ಕೃತ ಪರಿಚಯ:

  • ನಮ್ಮ ವಿದ್ಯಾರ್ಥಿಗಳು ಸಂಸ್ಕೃತ ಪ್ರಥಮಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
  • ಸಂಸ್ಕೃತದಲ್ಲೇ ಮಕ್ಕಳೊಂದಿಗೆ, ಎಲ್ಲರೊಂದಿಗೂ ಸಂಭಾಷಣೆ ಮಾಡುವ ಮೂಲಕ ಸಂಸ್ಕೃತ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶವಿದೆ.
  • ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪ್ರಭಾ, ವಿಭಾ, ಪ್ರಭಾ ಪ್ರದೀಪ, ಕಾವ್ಯ, ಸಾಹಿತ್ಯ ಪಠ್ಯಪುಸ್ತಕಗಳನ್ನೇ ಈ ವರ್ಷ ನಮ್ಮ ಮಕ್ಕಳಿಗೆ ಅಳವಡಿಸಿಕೊಳ್ಳಲಾಗಿದೆ. ಒಂದೊಂದು ಪಾಠವನ್ನು ಒಂದೊಂದು ಪ್ರತ್ಯೇಕ ಕಿರುಪುಸ್ತಕವಾಗಿ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಒಂದೊಂದನ್ನು ಮುಗಿಸಿದಾಗಲೂ ವಿಶಿಷ್ಟ ಆನಂದವನ್ನು ಅನುಭವಿಸುವರು.
  • ನಾಮಪದ, ಕ್ರಿಯಾಪದಗಳನ್ನು ಪಾಠ ಮಾಡಲು ಅನೇಕ ಬೋಧನಾ ಸಾಮಗ್ರಿಗಳನ್ನು ತಯಾರಿಸಲಾಗಿದೆ. ಬಿಡಿಭಾಗಗಳನ್ನು ಜೋಡಿಸಿ ಮಕ್ಕಳು ಆಟದೊಂದಿಗೆ ಶಬ್ದಗಳನ್ನು, ಕ್ರಿಯಾಪದಗಳನ್ನು ಕಲಿಯುತ್ತಾರೆ.
  • ಇನ್ನೂ ಅನೇಕ ಕಥಾ ಪುಸ್ತಕಗಳೂ ಮಕ್ಕಳ ಅಧ್ಯಯನಕ್ಕೆ ಇಡಲಾಗಿದೆ.

 _MG_8305

ಕನ್ನಡ, ತತ್ವದರ್ಶನಗಳ ಪರಿಚಯ:

  • ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಹಂತ ಹಂತವಾದ ವೈಜ್ಞಾನಿಕ ವಿಧಾನಗಳಿಂದ ಬೆಳೆಸಲಾಗುವುದು. ಪ್ರಾಥಮಿಕ ಹಂತಗಳಲ್ಲಿ ಪದ-ಪದಾರ್ಥ ಪರಿಚಯ, ಕಥೆ, ಹಾಡು, ಪದ್ಯಗಳ ಮೂಲಕ ಮೌಖಿಕವಾಗಿ ಸ್ಪಷ್ಟ ಉಚ್ಚಾರಣೆಗೆ ಹೆಚ್ಚು ಒತ್ತು ನೀಡಲಾಗುವುದು. ಮಾತು ಸ್ಪಷ್ಟವಾದ ನಂತರವೆ ಬರವಣಿಗೆಗೆ ತೊಡಗುವುದು. ಧ್ವನಿ ವಿಶ್ಲೇಷಣೆಯ ಮೂಲಕ ಮಕ್ಕಳಿಗೆ ಶಬ್ದಗಳನ್ನು ಗುರುತಿಸುವುದು ಬಂದರೆ ತಪ್ಪು ಬರೆಯಲು-ಹೇಳಲು ಸಾಧ್ಯವೇ ಇರುವುದಿಲ್ಲ. ಇದು ಸಾಂಪ್ರದಾಯಿಕ ಶೈಲಿಯೂ ಹೌದು.
  • ವಾಕ್ಯ ರಚನೆ ಮತ್ತು ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು Logical analysis ಅಥವಾ ಕಾರಕ ಪರಿಚಯಗಳ ಮೂಲಕ ಹೇಳಿಕೊಡುವುದು. ವಾಕ್ಯ ವಿಶ್ಲೇಷಣೆಗೆ ಬೇಕಾದ ನಾಮ, ಕ್ರಿಯೆ, ಕಾಲ, ಲಿಂಗ, ವಚನಗಳ ಹೇಳಿಕೊಡುವುದು. ಇದರಿಂದ ಎಂತಹ ಕ್ಲಿಷ್ಟವಾಕ್ಯವನ್ನಾದರೂ ಸುಲಭವಾಗಿ ತಿಳಿಯಲು, ತಪ್ಪಿಲ್ಲದ ವಾಕ್ಯರಚನೆ ಸಾಧ್ಯ. ಈ ಹಂತದಲ್ಲಿ ಪಠ್ಯಪುಸ್ತಕವನ್ನು ಪರಿಚಯಿಸಿಲಾಗುವುದು. ಇದರಿಂದ ಮಕ್ಕಳೇ ಪಾಠಗಳನ್ನು ಓದಿ ಅಭ್ಯಾಸ ಚಟುವಟಿಕೆಗಳನ್ನು ಮಾಡುವರು.
  • ವಾಕ್ಯ ರಚನೆ ಕಲಿತ ನಂತರ ಟಿಪ್ಪಣಿ, ಸಾರಾಂಶ, ಪದ್ಯಗಳನ್ನು ವಿಶ್ಲೇಷಿಸುವುದು, ಲೇಖನಗಳನ್ನು ಅರಿಯುವುದು, ಭಾವಾರ್ಥ ರಚಿಸುವುದರ ಕಡೆ ಗಮನ ನೀಡಲಾಗುವುದು. ಗದ್ಯ-ಪದ್ಯ-ನಾಟಕ-ಹಳಗನ್ನಡ-ಕನ್ನಡ ಛಂದಸ್ಸಿನ ಬಗೆಗೆ à³­ ಮತ್ತು à³® ನೇ ತರಗತಿಯ ಮಕ್ಕಳು ಕಲಿಯಲಿದ್ದಾರೆ.
  • ರಾಮಾಯಣ-ಮಹಾಭಾರತ-ಭಾಗವತ-ಉಪನಿಷತ್ತಿನ ಕಥೆಯ ಮೂಲಕ ಭಾರತೀಯ ಪರಂಪರೆ, ಸಂಸ್ಕೃತಿ, ಮೌಲ್ಯಗಳ ಪರಿಚಯ ಮತ್ತು ಭಾಷಾ ಬೆಳವಣಿಗೆಯನ್ನೂ ಮಾಡಲಾಗುವುದು. ಮಗುವಿನ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ತತ್ವದರ್ಶನದ ಮೂಲಕ ದಾಸರಪದಗಳು, ದೇವರ ನಾಮಗಳನ್ನು ಹೇಳಿಕೊಡಲಾಗುವುದು.

-೦-

ಪರಿಸರ ಮತ್ತು ಅಧ್ಯಾಪಕರ ಪರಿಚಯ

  • ೬-೯ ವರ್ಷದ ಸುಮಾರು ೭೦ ಮಕ್ಕಳನ್ನು ೩ ಗುಂಪುಗಳಾಗಿ ಮಾಡಲಾಗಿದೆ. ಈ ವಿಭಾಗ ‘ಶಿವಂ’ ಕಟ್ಟಡದಲ್ಲಿರುವುದು. ಉಮಾ-ವಿಕ್ರಮಸಿಂಹ-ಶೈಲಜಾ ಹೊಳ್ಳ, ಮೀನಾ-ಬಾಲಚಂದ್ರ-ಸಂಧ್ಯಾ, ಬದರಿನಾರಾಯಣ ಕಟ್ಟಿ-ಗೌರಿ-ರಂಜಿತಾ ಪ್ರಮುಖ ಅಧ್ಯಾಪಕರಾಗಿರುತ್ತಾರೆ. ಧೃವ, ಪ್ರಹ್ಲಾದ, ನಚಿಕೇತ ಎಂದು ಪರಿಸರಗಳಿಗೆ ಹೆಸರು ನೀಡಲಾಗಿದೆ. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಯೋಜನೆಗಳಿರುವುದು. ಎಲ್ಲ ಮಕ್ಕಳನ್ನು ಗಮನಿಸಿ ಅವರ ಗತಿಗೆ ತಕ್ಕಂತೆ ಕಲಿಸಲಾಗುವುದು. ಮೂರು ಪರಿಸರಗಳಲ್ಲೂ ಒಂದೆ ರೀತಿಯ ಕಲಿಕೆಗೆ ವ್ಯವಸ್ಥೆ ಇರುವುದು. ಪ್ರತಿ ತಿಂಗಳ ಕೊನೆಯ ಶನಿವಾರ ಮಕ್ಕಳೇ ಕುಳಿತು ಆದ ಕಲಿಕೆಯನ್ನು ಚರ್ಚಿಸುತ್ತಾರೆ. ಯಾವುದೆ ವೇಳಾಪಟ್ಟಿ ಇರುವುದಿಲ್ಲ. ಸಮಯದ ಮಿತಿಯೂ ಇರುವುದಿಲ್ಲ. ಮಗುವೇ ಎಷ್ಟು ಹೊತ್ತು, ಏನನ್ನು ಕಲಿಯಬೇಕೆಂಬುದನ್ನು ಆಸಕ್ತಿಯ ಮೂಲಕ ಸೂಚಿಸುವುದು. ಅದಕ್ಕೆ ತಕ್ಕಂತೆ ಅಧ್ಯಾಪಕರು ಯೋಜನೆಯನ್ನು ಮಾಡುತ್ತಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಮೂರು ಭಾಷೆಯ ಓದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪೋಷಕರೂ ಮನೆಯಲ್ಲಿ ಇದನ್ನು ದಿನದಲ್ಲಿ ೧೫ ನಿಮಿಷ ಇದಕ್ಕಾಗಿ ಮೀಸಲಾಗಿಸಿದರೆ ಉತ್ತಮ. ಪೋಷಕರೂ ಮಕ್ಕಳೊಂದಿಗೆ ಸೇರಿ ಓದಿದರೆ ಮಾತ್ರ ಮಕ್ಕಳಿಗೆ ಉತ್ಸಾಹ ಬರುವುದು. Asset ಪರೀಕ್ಷೆಗಾಗಿ IEO, IMOS, NSO ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಶಾಲೆಯಿಂದ Home work ಕಳುಹಿಸಿದಾಗ ಈ ಪುಸ್ತಕಗಳ ಮೂಲಕ ಪೋಷಕರು ಮಾಡಿಸಬಹುದು. NCERT ಪುಸ್ತಕಗಳನ್ನು ಮಕ್ಕಳ ಓದಿನ ಸಲುವಾಗಿ ಕೊಂಡಕೊಳ್ಳಬಹುದು. Black Swan- Reading card ಗಳಿವೆ. ಮಕ್ಕಳಿಗೆ ಅವುಗಳನ್ನು ಓದಿ ಅಭ್ಯಾಸ ಚಟುವಟಿಕೆ ಮಾಡಲು ಪ್ರೋತ್ಸಾಹಿಸಲಾಗುವುದು.
  • ೪,೫,೬ ನೇ ವಿಭಾಗದ ಪರಿಸರದಲ್ಲಿ ವಿಭಾಗದಲ್ಲಿ ಗೀತಾ, ಲತಾ, ಅನಂತಶಯನ, ಅರ್ಚನ ಇರುತ್ತಾರೆ. ಮಕ್ಕಳ ಸಮಗ್ರ ಬೆಳವಣಿಗೆಗೆ ಹೆಚ್ಚಿನ ಗಮನ ನೀಡಲಾಗುವುದು.
  • à³­-೮ನೇ ವಿಭಾಗದ ಪರಿಸರದಲ್ಲಿ ಇಂದುಮತಿ, ಶ್ರೀದೇವಿ, ರಾಮಪ್ರಸಾದ್, ಶ್ರೀರಾಮ್ ಅವರು ಇರುತ್ತಾರೆ. ಮೊದಲೆರಡು ತಿಂಗಳಲ್ಲಿ Basic concept ಗಳನ್ನು ಭದ್ರಪಡಿಸಲು ಪ್ರಯತ್ನಿಸಲಾಗುವುದು. ನಂತರ NCERT ಪುಸ್ತಕವನ್ನು ಅನುಸರಿಸಲಾಗುವುದು. ಅದರೊಂದಿಗೆ School Geometry, School algebra, ಪುಸ್ತಕವನ್ನು ಕೊಂಡುಕೊಳ್ಳಬೇಕು. ಮನೆಯಲ್ಲೂ ಒಂದು ಗ್ರಂಥಾಲಯವನ್ನು ಹೊಂದುವುದು ಸೂಕ್ತ. ಪ್ರಾಣೇಶಾಚಾರ್ಯರಂತಹ ಶ್ರ‍ೇಷ್ಠ ತರಬೇತಿದಾರರು ನಮ್ಮ ಮಕ್ಕಳಿಗೆ Olympiad ಪರೀಕ್ಷೆಗೆ ಬೇಕಾದ ತಯಾರಿ ಮಾಡಲಿದ್ದಾರೆ.

-೦-

ಹರೀಶ್ ಭಟ್ ಅವರ ಯೋಜನೆಗಳು

ಪೂರ್ಣಪ್ರಮತಿ ಒಂದು ಜೇನುಗೂಡಿನಂತೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಂದು ಚಿಕ್ಕ ಮಕ್ಕಳ ಮಟ್ಟಕ್ಕೆ ಇಳಿದು ಪಾಠ ಮಾಡುವಾಗ ಅವರ ಚೈತನ್ಯವನ್ನು ನಾವು ತೆಗೆದುಕೊಂಡು ಹೋಗುತ್ತೇವೆ. ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಅವರಿಗೆ ಬೇಗ ಮುಗಿಸಬೇಕೆಂದಿರುತ್ತದೆ. ಮಕ್ಕಳಲ್ಲಿ ಉತ್ಸಾಹ ಹೆಚ್ಚುತ್ತಲೇ ಹೋಗುವುದು. ಈ ವರ್ಷದಲ್ಲಿ ವಿಭಿನ್ನವಾಗಿ ಪಾಠ ತೆಗೆದುಕೊಳ್ಳಲು ಯೋಜನೆ ಇದೆ. ಯಾವುದೆ ಕಲಿಕೆಯಾದರೂ ಒಂದು End result  à²¬à³‡à²•à³. ೪,೫,೬ ಮಕ್ಕಳು ಕಳೆದ ವರ್ಷ ಕಲಿತಿರುವ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ದೃಢವಾಗಿ ಕಲಿತು resource material ಅನ್ನು ಅವರೇ ತಯಾರು ಮಾಡಬೇಕು, ಅಂತಿಮ ವರದಿಯನ್ನು ಕೊಡಬೇಕು. ಮಕ್ಕಳೇ ವಿಜ್ಞಾನದ ಪಠ್ಯಪುಸ್ತಕ ಮಾಡುವ ಯೋಜನೆ ಇದೆ. à³­-à³® ಮಕ್ಕಳಿಗೆ ಈ ವರ್ಷ Innovation year ಆಗಿರುತ್ತದೆ. ಪ್ರತಿ ಇಬ್ಬರು ಮಕ್ಕಳಿಗೆ ಒಂದೊಂದು ವಿಷಯವನ್ನು project ಆಗಿ ನೀಡಲಾಗುವುದು. ವರ್ಷ ಪೂರ್ತಿ ಅದನ್ನು ಅಧ್ಯಯನ ಮಾಡಿ Scientific journal ನಲ್ಲಿ ಅದನ್ನು ಪ್ರಕಟಿಸುವಷ್ಟು ತಯಾರಾಗಬೇಕು. ನಮ್ಮ science lab ನಲ್ಲೂ ಕೆಲಸ ಮಾಡಬಹುದು. ಪ್ರತಿ ವರ್ಷ  children science congress ನಡೆಯುವುದು. ಅದಕ್ಕೆ National Level judge ನಾನಾಗಿದ್ದೇನೆ. ಬೇಸರದ ಸಂಗತಿ ಎಂದರೆ ಇಂತಹ ಸಣ್ಣ ಸಣ್ಣ ಶಾಲೆಗಳು ಅದಕ್ಕೆ ಸೇರುವುದಿಲ್ಲ. ಈ ವರ್ಷ ಬಲವಂತವಾಗಿ ಸೇರಿಸುತ್ತಿದ್ದೇನೆ. ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಬಹುದು. ಇನ್ನೊಂದು IRIS  à²Žà²‚ದಿದೆ. ನಾನು ಹೇಳಿದ innovation project ಮುಂದುವರೆದು ಇಲ್ಲಿಗೆ ಸೇರಿಸುವುದು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬಹುದು. ಪ್ರತಿ ವರ್ಷ ಭಾರತದಲ್ಲಿ ೯-೧೦ ಪದಕಗಳು ಬರುತ್ತದೆ. ಅದರಲ್ಲಿ ೨ ಮಕ್ಕಳು ಹಳ್ಳಿ ಶಾಲೆಯಿಂದ ಬಂದವರಾಗಿರುತ್ತಾರೆ. ಅಲ್ಲಿ ಸಿಗುವ ಬಹುಮಾನ ಎರಡನೆಯ ಸಂಗತಿ, ಅವರು ಅಲ್ಲಿ ಹೋಗಿ ತಮ್ಮ paper present ಮಾಡಿದ ಕೂಡಲೆ ಅವರಲ್ಲಿ ಬರುವ ಆತ್ಮವಿಶ್ವಾಸ ನನಗೆ ಮುಖ್ಯ. ಕೆಲವು ಶಾಲೆಗಳಲ್ಲಿ Home work ಮತ್ತು ಸಾಕಷ್ಟು ಪುಸ್ತಕಗಳೇ ಪ್ರಧಾನ, ಕೆಲವು ಶಾಲೆಗಳಲ್ಲಿ ಇಲ್ಲ. ಇವೆರಡನ್ನು ಸಮತೋಲನದಲ್ಲಿ ತರುವುದು ಪೂರ್ಣಪ್ರಮತಿ. ಇಂದಿಗೂ ಎಷ್ಟೋ ಪಠ್ಯಪುಸ್ತಕಗಳಲ್ಲಿ ತಪ್ಪು ಮಾಹಿತಿಗಳೇ ಮುದ್ರಣವಾಗುವುದು. ಪುಸ್ತಕ ರಚನಾ ಸಮಿತಿಗಳಲ್ಲಿ ಇದ್ದರೆ ಬದಲಾವಣೆ ಸಾಧ್ಯವಿಲ್ಲ, ಮಕ್ಕಳ ಮೂಲಕ ಪೋಷಕರನ್ನು ತಿದ್ದಬಹುದೆಂದು ನನಗೆ ಮನವರಿಕೆಯಾಗಿದೆ. ಅಂಡಮಾನ್ ನಲ್ಲಿ internet facility  à²‡à²²à³à²². ಅಲ್ಲಿನ ಮಕ್ಕಳಿಗೆ ಗಣಿತ ಹೇಗೆ ಪಾಠ ಮಾಡುತ್ತಾರೆ ಎಂದು ತಿಳಿಯುವ ಕುತೂಹಲದಿಂದ ಹೋದರೆ ಅವರು ಬಂಬುಗಳ ಸಹಾಯದಿಂದ ಪ್ರಾಯೋಗಿಕವಾಗಿ ಕಲಿಸುತ್ತಾರೆ. ಬುನಾದಿ ಸರಿ ಇಲ್ಲದಿದ್ದರೆ ಮಕ್ಕಳಿಗೆ ತಪ್ಪು ಮಾಹಿತಿಗಳೇ ಜೀವನ ಪೂರ್ತಿ ಉಳಿಯುವುದು.

ಗೀತಾ ಅರವಿಂದ್ ಅವರ ಯೋಜನೆಗಳು

ಅನುಭವ ವಿಜ್ಞಾನ ಸಂಸ್ಥೆಯಲ್ಲಿ ಆಲೋಚಿಸುವ ವಿಧಾನವನ್ನು ಹೇಳಿಕೊಡುವುದರ ಬಗ್ಗೆ ಗಮನಹರಿಸಲಾಗುವುದು. ಪುಸ್ತಕದಲ್ಲಿ ಓದಿದ್ದಕ್ಕೂ ತಾವು ನಿತ್ಯ ಅನುಭವಿಸುತ್ತಿರುವುದಕ್ಕೂ ಸಂಬಂಧವನ್ನು ಗುರುತಿಸಲು ಬರಬೇಕು. ಆಗಲೇ ಅವರು ಅದನ್ನು ಆನಂದಿಸಲು  appreciate ಮಾಡಲು ಸಾಧ್ಯ. ಮೂಲಭೂತ ಪರಿಕಲ್ಪನೆಗಳನ್ನು ಸರಳವಾದ ಸಾಧನಗಳ ಮೂಲಕ ಹೇಳಿಕೊಡುವುದು ತನ್ಮೂಲಕ ಪರಿಕಲ್ಪನೆಯನ್ನು ಬೆಳೆಸುವುದು ನಮ್ಮ ಉದ್ದೇಶ. ನಾವು ಅನುಭವಗಳನ್ನು ಸೂಕ್ತ ರೀತಿಯಲ್ಲಿ ಹೇಳಿದರೆ ಮಕ್ಕಳೇ concept ಅನ್ನು ಗುರುತಿಸುವರು. ನಮಗೆ ಬೇಕಾದ ರೀತಿಯಲ್ಲೇ ಅಥವಾ ಭಾಷೆಯಲ್ಲೇ ಇಲ್ಲದಿರಬಹುದು. ಅವರದೆ ಆದ ಭಾಷೆಯಲ್ಲಿ ವ್ಯಕ್ತಪಡಿಸುತ್ತಾರೆ. ವಾರಕ್ಕೊಮ್ಮೆ ತರಗತಿಯನ್ನು ತೆಗೆದುಕೊಳ್ಳಲಾಗುವುದು. ಮಕ್ಕಳು ಕಲಿಯುವುದನ್ನು ಅನುಭವಿಸಿ ಖುಷಿಪಡುವಂತೆ ತರಗತಿಯನ್ನು ರೂಪಿಸಬೇಕು. ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರ ಆಲೋಚನೆಯನ್ನು ಪ್ರಚೋದಿಸುವುದು ಮುಖ್ಯ. Contextualized learning ಕಡೆ ಗಮನ ಕೊಡುವುದಾಗ ಅನು ಜಾಯ್ ಅವರು ಹಂಚಿಕೊಂಡರು. ನಕ್ಷತ್ರಗಳಿಗೂ ನಮ್ಮ ಸುತ್ತ ಇರುವ ಗಿಡಗಳಿಗೂ ಇರುವ ಸಂಬಂಧವನ್ನು ಮಕ್ಕಳಿಗೆ ತಿಳಿಸಿದರೆ ಅವರಿಗೆ ಕುತೂಹಲ ಹೆಚ್ಚುವುದು. ಇಂಥ ಅನೇಕ ಸಂಬಂಧಗಳನ್ನು ಅದರ ಮೂಲಕ ದೊಡ್ಡ ತತ್ವಗಳನ್ನೂ ತಿಳಿಸಬಹುದು. ಇವರು ಈ ಬಾರಿ ಕ್ಷಮಾ ಮತ್ತು ಗೀತಾ ಅವರೊಂದಿಗೆ ಗಣಿತ ಮತ್ತು ವಿಜ್ಞಾನವನ್ನು ಕಲಿಸಲು ಬರುವರು. ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವವರೆಗೆ ಗಣಿತ ಎಲ್ಲೆಡೆಯೂ ಇದೆ. ಅದನ್ನು ಗುರುತಿಸುವುದನ್ನು ಮಕ್ಕಳಿಗೆ ಹೇಳಿಕೊಟ್ಟರೆ ಗಣಿತ ಕೇವಲ ಪಠ್ಯಪುಸ್ತಕದ ವಿಷಯವಾಗಿ ಉಳಿಯುವುದಿಲ್ಲ. ಗಣಿತ ಹುಟ್ಟಿದ ಬಗೆ, ಹಲವು ನಾಗರಿಕತೆಗಳಲ್ಲಿ ಗಣಿತೆ ಹೇಗೆ ಬೆಳೆದು ಬಂದಿತು, ಗಣಿತದ ಮೂಲಭೂತ ಕೌಶಲಗಳನ್ನು ನಮ್ಮ ಪಠ್ಯಕ್ರಮದಲ್ಲಿ ತರುವ ಯೋಜನೆ ಇದೆ. ನಂತರ ಪೋಷಕರಿಗೂ ತಮ್ಮ ಮಕ್ಕಳು ಏನು ಕಲಿತರೆಂದು ತಿಳಿಯುವ ಉದ್ದೇಶ ಇರುತ್ತದೆ. ನಮ್ಮಲ್ಲಿ portfolio based assessment ಇರುವುದು. ವಾರಕ್ಕೊಮ್ಮೆ ಬರುವುದರಿಂದ ಪ್ರತಿ ವಾರ ಅವರು ಕಲಿತದ್ದನ್ನು ಮಕ್ಕಳೇ ಕೆಲವು resource ತಯಾರಿಸುವುದರ ಮೂಲಕ ತೋರಿಸುವಂತೆ ಮಾಡಲಾಗುವುದು. ಪ್ರತಿಯೊಂದು ಮಗುವಿನ ಒಂದೊಂದು ಪ್ರತ್ಯೇಕ ಪ್ರಗತಿಸೂಚಿಗಳಿರುವುದು. ಅವರು ಏನು ಕಲಿತಿಲ್ಲ ಎನ್ನುವುದಕ್ಕಿಂತ ಅವರ ಆಸಕ್ತಿ ಯಾವುದರಲ್ಲಿದೆ, ಇನ್ನೂ ಏನು ಅಭ್ಯಾಸ ಮಾಡಬೇಕು, ಏನು ಕಲಿತಿದ್ದಾರೆ ಎಂಬುದನ್ನು ಅದರಲ್ಲಿ ದಾಖಲಿಸಲಾಗುವುದು. ಮಕ್ಕಳೇ ಮಾಡುವ Math and science resource lab ನಮ್ಮ ಈ ವರ್ಷದ ಗುರಿಯಾಗಿರುತ್ತದೆ.

ಗುರುಪ್ರಸಾದ್ ಅಥಣಿ ಅವರ ಯೋಜನೆಗಳು

ನಿತ್ಯದ ಚಟುವಟಿಕೆಗಳಲ್ಲಿ ನಮಗೆ ಆಗುವ ಎಷ್ಟೋ ಅನುಭವಗಳು ವಿಜ್ಞಾನದ ನಿಯಮಗಳೇ ಆಗಿರುತ್ತವೆ. ಇವು ಸಾಮಾನ್ಯ ಜ್ಞಾನವೂ ಆಗಿರುತ್ತವೆ. ಆದರೆ ತಿಳಿಯದೇ ಕೆಲಸ ಮಾಡುತ್ತಿರುತ್ತೇವೆ. ಭಾರವಾದ ವಸ್ತು ಕೆಳಗೆ ಬರಬೇಕು, ಗಾಳಿಯಲ್ಲಿ ಮೇಲೆ ಹೋಗುವುದಿಲ್ಲ. ಆದರೆ ದೊಡ್ಡ ವಿಮಾನ ೫೦೦ ಜನರನ್ನು ಹೊತ್ತು ಗಾಳಿಯಲ್ಲಿ ತೇಲುವುದನ್ನು ನಾವೆಲ್ಲ ನೋಡಿದ್ದೇವೆ. ಪಕ್ಷಿಗಳು ಯಾವ ನಿಯಮದ ಪ್ರಕಾರ ಹಾರುತ್ತವೆ? ಇವೆಲ್ಲಾ ವಿಜ್ಞಾನದ ನಿಯಮಗಳಲ್ಲಿ ನೋಡಬಹುದು. ನಮ್ಮ ಸುತ್ತ ಮುತ್ತ ನಡೆಯುತ್ತಿರುವುದನ್ನು ಕಾರಣ ಸಹಿತ ಸಂಬಂಧವನ್ನು ಗುರುತಿಸಲು ಬಂದರೆ ಅದೇ ಭೌತಶಾಸ್ತ್ರ. Theory ಮತ್ತು Practical ಎರಡೂ ಒಂದೆ ಆಗುವುದು Integration. ಪ್ರೌಢಶಾಲಾ ಮಟ್ಟಕ್ಕೆ ಇರಬೇಕಾದ ಭೌತಶಾಸ್ತ್ರದ ಮೂಲಕಲ್ಪನೆಗಳನ್ನು ಅರ್ಥಮಾಡಿಸುವ ೨ ವರ್ಷಗಳ ತರಬೇತಿಯ ಯೋಜನೆ ಇದೆ. ವಾರಕ್ಕೆ ಒಂದು ದಿನ ಎರಡು ಗಂಟೆಗಳ ನಿರಂತರವಾದ ತರಗತಿಯನ್ನು ತೆಗೆದುಕೊಳ್ಳುವ ಯೋಜನೆ ಇದೆ. ಮಕ್ಕಳ ಆಸಕ್ತಿ ಮತ್ತು ಕಲಿಯುತ್ತಿರುವ ವಿಷಯ ಒಂದೆ ಆದಾಗ ಎರಡು ಗಂಟೆಯ ನಂತರವೂ ಮಕ್ಕಳು ನಿರಾಸಕ್ತರಾಗುವುದಿಲ್ಲ ಎಂಬುದು ನನ್ನ ಅನುಭವ. ಮಕ್ಕಳಿಗೆ ಭೌತಶಾಸ್ತ್ರದ ಕಲ್ಪನೆಗಳು ಚೆನ್ನಾಗಿ ಅರ್ಥವಾಗಿ NIOS ಪರೀಕ್ಷೆಯನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ನನ್ನ ಗುರಿ. ಆದರೆ ಇದಕ್ಕೆ standard material ಉಪಯೋಗಿಸುವುದು ನನ್ನ ಉದ್ದೇಶವಲ್ಲ. ಪರೀಕ್ಷೆಯ ನಂತರವೂ ನಮ್ಮಲ್ಲಿ ಉಳಿಯುವುದೇ ನಿಜವಾದ ಕಲಿಕೆ.

ಆಡಳಿತ ಮತ್ತು ಆನಂದವನದ ಮಾಹಿತಿ ಹಂಚಿಕೆ

೪,೫,೬,à³­,à³®, ತರಗತಿಗಳು ಸತ್ಯಂ ಕಟ್ಟಡದಲ್ಲಿ, ೧,೨,೩ ಮತ್ತು Montessori ತರಗತಿಗಳು ಶಿವಂ ಕಟ್ಟಡದಲ್ಲಿ ಮುಂದುವರೆಯುವುದು. ಆನಂದವನದ Registration  à²†à²—ಿದೆ. ೨೮/೦೫/೧೫ ರಂದು ಗಂಗಾ ಪೂಜೆ ಆಗಿದೆ. ೦೧/೦೬/೧೫ ರಂದು ಭೂಮಿ ಪೂಜೆ ಇದೆ. Registration ನಂತರ ಇದು ವ್ಯವಸಾಯ ಭೂಮಿ ಆಗಿರುವುದರಿಂದ conversion ಆಗಬೇಕು. ಸದ್ಯಕ್ಕೆ ಕೆಲಸ ಆರಂಭವಾದರೂ ಅಲ್ಲಿ ಕೆಲಸ ಆರಂಭಿಸಲು ಎರಡು ವರ್ಷಗಳಾದರೂ ಬೇಕು. ೧ ರಿಂದ ೧೦ನೇ ತರಗತಿಯವರೆಗೆ ನಗರದಲ್ಲೇ ಮುಂದುವರೆಸುವ ಯೋಜನೆ ಇದೆ. ಇನ್ನೊಂದು ವಿಭಾಗ ಆನಂದವನದಲ್ಲಿ ಆರಂಭವಾಗುವುದು. ಪ್ರಾಯಃ ಅದು ವಸತಿಶಾಲೆ ಆಗಿರುತ್ತದೆ. ಸೋಮವಾರದಿಂದ ಶುಕ್ರವಾರ ಶಾಲೆಯಲ್ಲಿದ್ದು ಶನಿವಾರ-ಭಾನುವಾರ ನಗರಕ್ಕೆ ಬರುವಂತೆ ಯೋಜನೆ ಮಾಡಲಾಗುತ್ತಿದೆ. ನಗರದಲ್ಲಿ ಮುಂದುವರೆಸಲು ದೀರ್ಘ ಕಾಲಕ್ಕೆ ಸ್ಥಳ ಬೇಕಾಗಿದೆ. ಈಗಿರುವ ಎರಡೂ ಕಟ್ಟಡಗಳೂ ತಾತ್ಕಾಲಿಕವಾಗಿವೆ. ಪುಷ್ಪಾಂಜಲಿ ಉದ್ಯಾನದ ಬಳಿ ನೋಡಿರುವ ಒಂದು ಕಟ್ಟಡ ೩೦ ವರ್ಷಕ್ಕೆ ಸಿಕ್ಕಿದ್ದರೂ ಅಕ್ಕ ಪಕ್ಕದವರಿಂದ ಸ್ವಲ್ಪ ತಡೆಗಳು ಬಂದಿವೆ. ಈ ವರ್ಷ ಹಲವಾರು ಶೈಕ್ಷಣಿಕ ಯೋಜನೆಗಳು ರೂಪುಗೊಂಡಿವೆ, ಖಾಸಗಿ ವಾಹನದ ಸೌಲಭ್ಯ ಈ ವರ್ಷ ಸಿಗದ ಕಾರಣ ಶಾಲಾವಾಹನವನ್ನು ಖರೀದಿಸಲಾಗಿದೆ, ಶಾಲೆ ಬೆಳೆದಂತೆ ಹೊಸ ಶಿಕ್ಷಕರನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬಂದಿರುವುದರಿಂದ ಆರ್ಥಿಕವಾಗಿ ಸ್ವಲ್ಪ ತೊಂದರೆಗಳನ್ನು ಎದುರಿಸಬೇಕಾಗಿದೆ.

ಪ್ರಾಂಶುಪಾಲರ ಸೂಚನೆಗಳು:

  • ಪ್ರತಿ ಶನಿವಾರ ಪೋಷಕರು ಬಂದು ತಮ್ಮ ಮಕ್ಕಳ ಪ್ರಗತಿಯನ್ನು ಅಧ್ಯಾಪಕರ ಯೋಜನೆಗಳನ್ನು ನೋಡಬಹುದು. ಇದೊಂದು Oral report ಆಗಿರುತ್ತದೆ. ವರ್ಷಕ್ಕೆ ಎರಡು ಬಾರಿ ಮಾತ್ರ written report ಕೊಡಲಾಗುವುದು. ಪೋಷಕರು ತಮಗೆ allot ಆದ ಸಮಯದಲ್ಲಿ ಬಂದು ನೋಡಬಹುದು.
  • ಸೋಮವಾರ ಮತ್ತು ಶುಕ್ರವಾರ  ೩ ರಿಂದ ೪ ಗಂಟೆಗೆ ಪ್ರಾಂಶುಪಾಲರು ಪೋಷಕರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವರು, ಭೇಟಿಮಾಡುವರು.
  • ಕಲಿಕೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾರಿಂದ ಪೋಷಕರಿಗೂ ಎರಡು ತಿಂಗಳಿಗೊಮ್ಮೆ ನುರಿತಜ್ಞರಿಂದ ಮಾರ್ಗದರ್ಶನ ಇರುವುದು. ಎಲ್ಲರೂ ತಪ್ಪದೆ ಹಾಜರಾಗಬೇಕಾಗಿ ಕೋರುತ್ತೇವೆ. ಶಾಲೆಯು ಇಷ್ಟೆಲ್ಲ ಯೋಜನೆಗಳನ್ನು ಹಾಕಿಕೊಂಡಿರುವಾಗ ಪೋಷಕರಿಂದಲೂ ಅಂತಹದ್ದೇ ಸಹಕಾರವನ್ನು ನಿರೀಕ್ಷಿಸುತ್ತೇವೆ.
  • ಖರ್ಚು ಬೆಳೆಯುತ್ತಿರುವುದರಿಂದ ಸಹಾಯ ಮಾಡುವ ಹಸ್ತಗಳಿದ್ದರೆ ಸದಾ ಸ್ವಾಗತ ಇರುವುದು.
  • ಶಾಲಾವಾಹನದ ಸಮಯವನ್ನು ಪಾಲಿಸಲೇ ಬೇಕು. ಸಮಯಕ್ಕೆ ಸರಿಯಾಗಿ ಬಾರದ ಮಕ್ಕಳನ್ನು ಕರೆತರುವುದಿಲ್ಲ. ನಂತರ ದೂರು ನೀಡಬಾರದು. ದಯಮಾಡಿ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ತಯಾರು ಮಾಡಿ.
  • ಅಧ್ಯಾಪಕರ ತಯಾರಿಗಳನ್ನೆಲ್ಲಾ ಕೇಳಿದ ನಂತರ ಅವರಿಗೆ ಸಹಾಯವನ್ನು ಮಾಡಲು ಬಯಸುವ ಸ್ವಯಂಸೇವಕರಿದ್ದರೆ ತಿಳಿಸಿ, ಪೋಷಕರ ಸಹಾಯ ಖಂಡಿತ Environment material ತಯಾರಿಗೆ ಅಗ್ಯವಿದೆ.
  • à³®.೧೫ ಕ್ಕೆ ಮಕ್ಕಳು ಶಾಲೆಯ ಒಳಗೆ ಬಂದಿರಬೇಕು.
  • ಕೆಲವು ಶಾಲಾವಾಹನಗಳಿಗೆ ಮಕ್ಕಳನ್ನು ಹತ್ತಿಸಿಕೊಳ್ಳುವ ಸ್ಥಳವನ್ನು ಸೂಚಿಸಿಕೊಳ್ಳಲಾಗುವುದು. ಅಲ್ಲಿಗೆ ಮಕ್ಕಳನ್ನು ಕರೆತರಬೇಕಾಗಿ ಕೇಳುತ್ತೇವೆ. ಮಗುವಿನ Van fees ಎಷ್ಟೆಂದು ತಿಳಿದುಕೊಂಡು ದಯಮಾಡಿ ನಗದು ಅಥವಾ ಚೆಕ್ ಮೂಲಕ ಕೂಡಲೆ ಕೊಡುವ ವ್ಯವಸ್ಥೆ ಮಾಡಿ.
  • ಬರವಣಿಗೆ ಪುಸ್ತಕ ವ್ಯವಸ್ಥೆ ಹೊರಗಡೆ ಮಾಡಲಾಗಿದೆ. ನಿಗದಿಪಡಿಸಿರುವ ಮೊತ್ತವನ್ನು ಕೊಟ್ಟು ಅಲ್ಲಿ ಸಂಗ್ರಹಿಸಿಕೊಳ್ಳಬಹುದು. Text book ಎಂದೂ ಯಾವುದನ್ನೂ ಸೂಚಿಸಿಲ್ಲ. NCERT ಪುಸ್ತಕವನ್ನು ಮನೆಯಲ್ಲಿ reference ಗೆ ಇಟ್ಟುಕೊಳ್ಳಬಹುದು. ಅಲ್ಲದೆ ಅಧ್ಯಾಪಕರು ಈಗಾಗಲೇ ಯಾವ ಪುಸ್ತಕವನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
  • ಸಮವಸ್ತ್ರ ಈಗ ಇನ್ನಷ್ಟು ಸುಧಾರಿಸಿದೆ. ಈಗಾಗಲೇ ಅಳತೆ ತೆಗೆದುಕೊಳ್ಳಲಾಗಿದೆ. ಜುಲೈ ಮೊದಲ ವಾರದಲ್ಲಿ ಸಮವಸ್ತ್ರ ಸಿಗುವುದು.
  • ಮಕ್ಕಳಿಗೆ ಹಿತವಾಗುವ ಸಾತ್ವಿಕ ಆಹಾರವನ್ನೇ ಕಳುಹಿಸಿಕೊಡಿ. ಅವರಿಗೆ ತಿನ್ನಲು ಸಾಧ್ಯವಾದಷ್ಟನ್ನೇ ಕಳುಹಿಸಿ. ಬೇಕರಿ ಪದಾರ್ಥಗಳನ್ನು ಕಳುಹಿಸಬೇಡಿ. ಜನ್ಮದಿನದಂದು ಸಿಹಿ ಕಳುಹಿಸಬೇಕೆಂದಿದ್ದರೆ Dry fruits ಮಾತ್ರ ಕಳುಹಿಸಿ. ಅದಲ್ಲದೆ ಯಾವುದೆ ಅಧ್ಯಾಪಕರಿಗೆ ಪ್ರತ್ಯೇಕವಾಗಿ ಕೊಡುಗೆಗಳನ್ನು ಕಳುಹಿಸುವ ಸಂಪ್ರದಾಯ ನಮ್ಮ ಶಾಲೆಯಲ್ಲಿ ಇಲ್ಲ.
  • ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಅಧ್ಯಾಪಕರಿಗೆ ಈಗಾಗಲೇ ಪ್ರಥಮಚಿಕಿತ್ಸೆ ಮತ್ತು ಅಗ್ನಿಶಾಮಕ ತರಬೇತಿಯನ್ನು ನೀಡಲಾಗಿದೆ.

ಪ್ರಶ್ನೋತ್ತರ ಮತ್ತು ಪೋಷಕರ ಅಭಿಪ್ರಾಯಗಳು

೧. ನಮಗೆ ತಿಂಗಳಲ್ಲಿ ಒಂದೇ ಶನಿವಾರ ರಜೆ ಇರುವುದು? ಅಧ್ಯಾಪಕರನ್ನು ಬೇಟಿಮಾಡುವುದು ಹೇಗೆ?

ಉ: ಆ ದಿನದಂದೇ ನಿಮ್ಮ ಸರದಿ ಬರುವಂತೆ ಯೋಜಿಸಬಹುದು. ಈ ವರ್ಷದಲ್ಲಿ ಪೋಷಕರನ್ನು end result receiver ಎಂದು ಪರಿಗಣಿಸುತ್ತಿಲ್ಲ, ಎಲ್ಲಾ ಯೋಜನೆಗಳಲ್ಲಿ ನೀವು ಭಾಗವಹಿಸಬೇಕು, ತಿಂಗಳಿಗೊಮ್ಮೆ ಪೋಷಕರಿಗಾಗಿ  educative programs ಇರುವುದು, ಭಾಗವಹಿಸಿ, ಅಧ್ಯಾಪಕರೊಂದಿಗೆ ಚರ್ಚಿಸಿ ಮಕ್ಕಳ ಯೋಜನೆಯನ್ನು ರೂಪಿಸಬಹುದು. ಪೂರ್ಣಪ್ರಮತಿ ಒಂದು Learning community ಆಗಿರುವುದರಿಂದ ಪೋಷಕರೂ ಬಂದು ನುರಿತಜ್ಞರು ನಡೆಸಿಕೊಡುವ ತರಗತಿಗಳಲ್ಲಿ ಭಾಗವಹಿಸಬಹುದು.

೨. Volunteer ಕೆಲಸ ಮಾಡುವುದು ಹೇಗೆ?

ಉ: Teacher assistance, Events ಗಳಲ್ಲಿ ಸಹಾಯ ಬೇಕಾಗುವುದು, ಆನಂದವನಕ್ಕೆ resource generate ಮಾಡಬೇಕು, ಅದಕ್ಕೆ ನಿಮ್ಮ ಸಹಾಯ ಬೇಕಿದೆ, computer backend work ಗೆ ಸಹಾಯಬೇಕು. ಪ್ರಾಂಶುಪಾಲರನ್ನು ಭೇಟಿ ಮಾಡಿ ಯಾವ ರೀತಿ ಕೆಲಸಗಳಲ್ಲಿ ಸಹಾಯ ಮಾಡಬಹುದೆಂದು ತಿಳಿಯಬಹುದು.

೪. ಕ್ರೀಡೆಗಳ ಬಗ್ಗೆ ಮಾಹಿತಿ ಸಿಗಲಿಲ್ಲ? ಭೌತಶಾಸ್ತ್ರದ ಬಗ್ಗೆ ಹೇಳಿದಿರಿ. ಪ್ರಯೋಗಶಾಲೆ ಇರುವುದೇ?

ಉ: ಕಳೆದ ವರ್ಷದಂತೆ ಈ ವರ್ಷವೂ ಕ್ರೀಡೆಗಳ ಯೋಜನೆ ನಡೆದಿದೆ. ಪೂರ್ಣಸಮಯದ ಕ್ರೀಡಾ ಅಧ್ಯಾಪಕರನ್ನು ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿದೆ. ವಿವರಗಳನ್ನು ಹಂಚಿಕೊಳ್ಳಲಾಗುವುದು.

೫. ವೇಳಾಪಟ್ಟಿ ಇಲ್ಲದಿರುವುದರಿಂದ ಎಲ್ಲಾ ವಿಷಯಗಳಲ್ಲೂ ಮಗು ಹೇಗೆ ಕಲಿಯುವುದು?

ಉ: ವೇಳಾಪಟ್ಟಿ ಇಲ್ಲದ ಮಾತ್ರಕ್ಕೆ ಯಾವ ವಿಷಯವೂ ಕಲಿಯದೆ ಹೋಗುವುದಿಲ್ಲ. NCERT ಪುಸ್ತಕವನ್ನು ಅನುಸರಿಸುವುದರಿಂದ ೪೦ ನಿಮಿಷಕ್ಕೆ ಬೇರೆ ಪಾಠ ಆರಂಭವಾಗುವ ಬದಲು ಇನ್ನೂ ಹೆಚ್ಚಿನ ಸಮಯ ಒಂದು ವಿಷಯದಲ್ಲಿ ಆಸಕ್ತಿ ಇದ್ದರೆ ಕಲಿಯುವ ಅವಕಾಶವಿದೆ. ವಾರ ಮತ್ತು ತಿಂಗಳ ಯೋಜನೆಗಳಲ್ಲಿ ಎಲ್ಲಾ ವಿಷಯಗಳೂ ಸೇರುವಂತೆ ರೂಪಿಸಬಹುದು.

೬. ಮಕ್ಕಳಿಗೆ ಕಲಿಕೆಯಲ್ಲಿ ಬಹಳ ಸ್ವತಂತ್ರ ಸಿಕ್ಕಿರುವುದರಿಂದ ಅವರು ಶಿಸ್ತನ್ನು ಕಲಿಯುತ್ತಿಲ್ಲ ಎನಿಸುತ್ತಿದೆ. ಶಾಲಾದಿನಗಳಲ್ಲೇ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ ಮುಂದೆ ಕಷ್ಟವಾಗಬಹುದು.

à³­.  ಮೂರನೇ ತರಗತಿ ಮಕ್ಕಳಿಗೆ ಇರುವ ವಿಷಯಗಳೇನು? ಶಾಲಾ ವಾಹನ ಕೆಲವೊಮ್ಮೆ ಬೇಗ ಕೆಲವೊಮ್ಮೆ ತಡವಾಗಿ ಬಂದರೆ ಗೊತ್ತಾಗುವುದಿಲ್ಲ. ಆಗ ಸ್ವಲ್ಪ ತಿಳಿಸಿ. ಶಾಲೆಯಲ್ಲಿ ಮಕ್ಕಳಿಗೆ ಸ್ವಲ್ಪ ಭಯ ತರಿಸಬೇಕು. ಮನೆಯಲ್ಲಿ ಹೇಳಿದ ಮಾತು ಕೇಳುವುದಿಲ್ಲ. ಶಾಲೆಯಲ್ಲೂ ಸ್ವತಂತ್ರ ಸಿಕ್ಕಿ ಬಿಟ್ಟರೆ ಶಿಸ್ತು ಮೂಡುವುದಿಲ್ಲ.

ಉ: ಬೇರೆ ಎಲ್ಲಾ ಶಾಲೆಗಳಂತೆ ಎಲ್ಲಾ ವಿಷಯಗಳೂ ಇರುತ್ತವೆ, ಸಂಸ್ಕೃತ, ತತ್ವದರ್ಶನ ಇನ್ನೂ ಮುಂತಾದ ವಿಶೇಷ ವಿಷಯಗಳೂ ಇರುವುವು.

೮. ರಾಜರಾಜೇಶ್ವರಿ ನಗರದಿಂದ ಶಾಲಾವಾಹನ ವ್ಯವಸ್ಥೆ ಮಾಡಿ. ಮೊದಲು ಹತ್ತುವ ಮತ್ತು ಕೊನೆಯಲ್ಲಿ ಇಳಿಯುವ ಮಗು ನಮ್ಮದು. ಬಹಳ ಸುಸ್ತಾಗಿರ್ತಾನೆ. ಕಲಿಕೆಯಲ್ಲಿ ಬೇರೆ ಶಾಲೆಗೂ ಈ ಶಾಲೆಗೂ ವ್ಯತ್ಯಾಸವಿದ್ದರೂ ಶಿಸ್ತಿನಿಂದ ಮಕ್ಕಳು ಹೊರಬರುತ್ತಿದ್ದಾರೆ. ಶಾಲೆಯಲ್ಲಿ ಬಹಳ ಸ್ವತಂತ್ರ ಇರುವುದರಿಂದ ಮನೆಯಲ್ಲಿ ಪೋಷಕರು ಶಿಸ್ತನ್ನು ಕಲಿಸಿದರೆ ಅದು ಹೇರಿದಂತೆ ಆಗುತ್ತಿದೆ. ಇನ್ನು ಆನಂದವನಕ್ಕೆ ಹೋದರಂತು ನಿಮ್ಮ ಪಾಡಿಗೆ ನೀವಿರಿ, ನಾವು ಆನಂದವನದಲ್ಲಿ ಆನಂದವಾಗಿ ಇರುತ್ತೇವೆ ಎನ್ನುವ ಪರಿಸ್ಥಿತಿ ಬರಬಹುದು.

ಉ: ಜೂನ್ ೧೦ರ ಒಳಗೆ ಶಾಲಾವಾಹನದ ನಿಖರವಾದ ಸಮಯವನ್ನು ತಿಳಿಸುವರು.

೯. ಶಾಲೆಯಲ್ಲಿ ನೀವು ಏನೇ Activities ಮಾಡಿಸಿದ್ದರೂ ಮನೆಗೆ ಬಂದಾಗ Homework ಏನೂ ಕೊಡುವುದಿಲ್ಲವಾದ್ದರಿಂದ Energy ಇದ್ದರೂ ಕಲಿಯುವುದಿಲ್ಲ. TV ನೋಡಿಕೊಂಡು ಕಾಲ ಕಳೆಯುತ್ತಾರೆ.

ಉ: ಮನೆಯಲ್ಲಿ TV ಏಕೆ ಬೇಕು? ನಮ್ಮಲ್ಲಿ ಸಮಸ್ಯೆ ಇಟ್ಟುಕೊಂಡು ಮಕ್ಕಳಿಗೆ Homework ಕೊಡಬೇಕೆಂದರೆ ಏನು ಮಾಡುವುದು? ಕಲಿಕೆಗೆ ಬೇಕಾದ ವಾತಾವರಣ ಶಾಲೆಯಲ್ಲಷ್ಟೇ ಅಲ್ಲ, ಮನೆಯಲ್ಲೂ ಇರಬೇಕು. ನಾವು ಸಮಸ್ಯೆಯನ್ನು ನೇರವಾಗಿ address ಮಾಡುವುದಕ್ಕಿಂತ ತತ್ವದರ್ಶನದ ಮೂಲಕ ಏನು ಮಾಡಿದರೆ ಉತ್ತಮ ಎಂಬುದನ್ನು ಪರೋಕ್ಷವಾಗಿ ತಿದ್ದಲಾಗುತ್ತಿದೆ. Self Discipline ಮುಖ್ಯವೇ ಹೊರತು ಹೊರಗಿನಿಂದ ಹೇರಿದ ಶಿಸ್ತಲ್ಲ. ಗುರುಕುಲದಲ್ಲಿದ್ದರೆ ನಾವೇ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬಹುದು. Day school ನಲ್ಲಿ ಪೋಷಕರ ಮತ್ತು ಶಾಲೆಯ collaborative effort ತುಂಬಾ ಮುಖ್ಯ. ಅದರ ಕಡೆ ಗಮನ ಕೊಡಿ.

೧೦. ಏಳನೆಯ ತರಗತಿ ಬಂದರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂಬುದು ನನ್ನ ಆತಂಕ?

೧೧. ಎರಡು ತಿಂಗಳಿಗೆ ಬದಲಾಗಿ ಒಂದು ತಿಂಗಳಿಗೆ ಒಂದು ಗುಂಪಿನ ಪೋಷಕರೊಂದಿಗೆ ಮಕ್ಕಳ ಪ್ರಗತಿ ಮತ್ತು ಪೋಷಕರ ಪ್ರಶ್ನೆಗಳನ್ನು ಉತ್ತರಿಸುವ ವ್ಯವಸ್ಥೆ ಮಾಡಿದರೆ ಅನುಕೂಲವಾಗುವುದು. ಉಳಿದ ಪೋಷಕರಲ್ಲಿ ಒಂದು ವಿನಂತಿ ಏನೆಂದರೆ ಶಿಸ್ತಿಗೆ ಸಂಬಂಧಿಸಿದ ವಿಷಯ – ಮಕ್ಕಳಿಗೆ ತಂದೆ-ತಾಯಿ ಕಾರಣವಿಲ್ಲದೆ ಹೇಳುತ್ತಿದ್ದಾರೆ ಎಂದು ಅನಿಸಿ ನಮ್ಮ ಮಾತನ್ನು ಕೇಳುತ್ತಿಲ್ಲದಿರಬಹುದು, ನಾವೂ ಅದನ್ನು ಯೋಚಿಸಿ ಮಕ್ಕಳಿಗೆ ಹೇಗೆ ಹೇಳಬಹುದೆಂದು ಪ್ರಯೋಗ ಮಾಡಬೇಕು.

೧೨. ಬಹುಶಃ ಪೋಷಕರು ಬೇರೆ ಶಾಲೆಯ ಮಕ್ಕಳೊಂದಿಗೆ ನಮ್ಮ ಮಕ್ಕಳ ದಿನಚರಿಯನ್ನು ಹೋಲಿಸಿಕೊಂಡು ಹೆಚ್ಚು ಓದುತ್ತಿಲ್ಲ, Home work ಮಾಡುತ್ತಿಲ್ಲ ಎಂದು ಅನಿಸುವುದು. ನನಗೆ ತಿಳಿದಿರುವಂತೆ ನಾವು ಏಳನೆ ತರಗತಿಗೆ ಬರುವವರೆಗೆ ಶಾಲೆಯಲ್ಲಿ ಕಲಿತದ್ದನ್ನು ಬಿಟ್ಟರೆ ಮನೆಗೆ ಬಂದು ಮತ್ತೇನು ಓದುತ್ತಿರಲಿಲ್ಲ. ಆಟ ಆಡುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ನಮ್ಮ Mind set ಬದಲಾಗುತ್ತಿದೆ. ನಾವೇನು ಈ ವ್ಯವಸ್ಥೆಯಿಂದ ಹೆಚ್ಚೇನು ಕಳೆದುಕೊಂಡಿಲ್ಲ. ನಮ್ಮ ಮಕ್ಕಳೇಕೆ ಇಷ್ಟೆಲ್ಲಾ ಕಷ್ಟಪಡಬೇಕೆಂದು ಏಕೆ ನಿರೀಕ್ಷಿಸುತ್ತಿದ್ದೇವೆ! ದೊಡ್ಡ ತರಗತಿಗಳಿಗೆ ಹೋದಂತೆ ಸ್ವಲ್ಪ ಗಂಭೀರವಾಗಿ ಕಲಿಯಬೇಕು. ಆಗ ಅವರು Intensive ಆಗಿ ಕಲಿತರೆ ಸಾಕು. Discipline should be in terms of knowledge based, self discipline, not because of fear. ಮಗು ಹೂವಿನಂತೆ ಅರಳಲು ಬಿಡಬೇಕು. ಒಮ್ಮೆ ಹೇಳಿದರೆ ಗೊತ್ತಾಗುವುದಿಲ್ಲ. ಮತ್ತೆ ಮತ್ತೆ ಹೇಳಿ, ಉದಾಹರಣೆಗಳನ್ನು ಕೊಟ್ಟು, ನಾವು ಹಾಗೇ ನಡೆದುಕೊಂಡು ತೋರಿಸಬೇಕು. ಕ್ರಮವಾಗಿ ಮಕ್ಕಳು ಕಲಿಯುತ್ತಾರೆ. ೭-೮ ನೇ ತರಗತಿಗೆ ಬರುವವರೆಗೆ ಬಲವಂತವಾಗಿ ಅವರಿಗೆ ಶಿಸ್ತನ್ನು ತರಿಸಬೇಕೇ ಹೊರತು, ಅವರೇ ಅರಿತು ನಡೆಯುವ ಪ್ರಬುದ್ಧತೆ ಮಕ್ಕಳಿಗೆ ನಂತರವೇ ಬರುವುದು.

೧೩. ೭-೮ಕ್ಕೆ ಆ ಗಂಭೀರತೆ ಬರಬೇಕೆಂದರೆ ಮೊದಲಿನಿಂದಲೇ ತಯಾರಿ ಬೇಕು. ಒಮ್ಮೆಲೆಗೆ ಅದು ಬರಲು ಸಾಧ್ಯವಿಲ್ಲ.

೧೪. ನಾವು ಬೆಳೆದ ರೀತಿಯನ್ನು ನೋಡಿದರೆ ನಮ್ಮ ಬಾಲ್ಯದ ಕುತೂಹಲಗಳನ್ನೆಲ್ಲ ಕಳೆದುಕೊಂಡಂತೆ ಅನಿಸುತ್ತದೆ. ಮಕ್ಕಳು ೫-೬ ವರ್ಷಕ್ಕೆ ಪುಸ್ತಕಗಳನ್ನು ನೋಡಿ ಬರೆಯುವ ಅಗತ್ಯವೇನಿದೆ? ೫-೬ ಪ್ರಾಣಿಗಳ ಹೆಸರನ್ನು ಬರೆಯಿರಿ ಎಂದು ಕೊಟ್ಟಾಗ ಅದಕ್ಕಿಂತ ಹೆಚ್ಚಿನ ಪ್ರಾಣಿಗಳ ಬಗ್ಗೆ ಗೊತ್ತಿದ್ದರೆ ಅದನ್ನು ಬರೆದೇ ತೋರಿಸಬೇಕೆಂಬ ನಿರೀಕ್ಷೆ ಏಕೆ? ಬೇರೆ ಶಾಲೆಯ ಮಕ್ಕಳನ್ನು ನೋಡಿದಾಗ ಕೇವಲ ಗೊಂಬೆಗಳಂತೆ ಬಾಯಿಪಾಠ ಮಾಡಿ ಒಪ್ಪಿಸುವುದಕ್ಕಿಂತ ವಿಷಯವನ್ನು ತಿಳಿಯುವುದೇ ಮುಖ್ಯ ಎಂದು ಅನಿಸುವುದು. ಈ ಶಾಲೆಯಲ್ಲಿ ಹೀಗೆ ಮಾಡಬೇಕು, ಇದನ್ನೇ ಕಲಿಯಬೇಕು ಎಂಬ ನಿಯಮವಿಲ್ಲ. ಉತ್ಸವಗಳನ್ನು, ಬೇರೆ ದಿನಾಚರಣೆಗಳನ್ನು ನೋಡಿದಾಗ ಮಕ್ಕಳಿಗೆ ಎಷ್ಟು ವಿಷಯಗಳನ್ನು ಕಲಿಯುವ ಅವಕಾಶವಿದೆ, ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡುತ್ತಾರೆ, ಇದಕ್ಕಾಗಿ ನಾನು ಪೂರ್ಣಪ್ರಮತಿಯನ್ನು ಅಭಿನಂದಿಸಲು ಬಯಸುತ್ತೇನೆ.

ಶಿಸ್ತಿನ ಕುರಿತಾಗಿ:

ಶಿಸ್ತಿನ ಸಮಸ್ಯೆ ನಿಜಕ್ಕೂ ಇದೆ. ಹಿರಿಯರನ್ನು ಗೌರವಿಸುವ, ಸಭೆಯಲ್ಲಿ ವರ್ತಿಸುವ, ಅರಿತು ವರ್ತಿಸುವ ಆಂತರಿಕ ಶಿಸ್ತು ಮೂಡಬೇಕು. ಆದರೆ ನಾವು ಹಿಂದಿನಿಂದ ಬರುತ್ತಿದ್ದೇವೆ. ಯಾವುದೆ ಸೃಜನಶೀಲ ಕೆಲಸಕ್ಕೆ ಸೈನ್ಯದ ಮಾದರಿಯ ಶಿಸ್ತು ಸಹಾಯಕವಾಗುವುದಿಲ್ಲ. ಅದಕ್ಕೆ Internal discipline ಬೆಳೆಸಬೇಕು. ನಮ್ಮ ಒಂದು ವರ್ಷದ ತರಬೇತಿಯಲ್ಲಿ ಅಧ್ಯಾಪಕರೂ ಕೂಡ ಹೇಗೆ ಈ ಆಂತರಿಕ ಶಿಸ್ತನ್ನು ಬೆಳೆಸಿಕೊಳ್ಳುವುದು ಮತ್ತು ತನ್ಮೂಲಕ ಮಕ್ಕಳಿಗೆ ಹೇಗೆ ಕಲಿಸುವುದು ಎನ್ನುವುದರ ಬಗ್ಗೆ ಹೆಚ್ಚಿನ ಕೆಲಸ ಆಗುತ್ತಿದೆ.ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹ ತರಿಸಿದರೆ ಶಿಸ್ತು ತಾನಾಗೇ ಬರುವುದು, ವಿಶೇಷ ಸಾಧನೆಗೆ ಬೇಕಾದ ಅನೇಕ ಆಯಾಮಗಳನ್ನು ತಲುಪಿಸುವುದು ಹೇಗೆ? ಇದರ ಬಗ್ಗೆ ಹೆಚ್ಚು ಗಮನವಿದೆ. ಇದೊಂದು lifetime ಕೆಲಸ. ಸುಲಭವಾದದ್ದಲ್ಲ. ಯಾರಿಗೆ ಯಾವಾಗ ಈ ಆಂತರಿಕ ಶಿಸ್ತು ಮೂಡುವುದೋ ಗೊತ್ತಿಲ್ಲ. ನಮ್ಮ ಶಾಲೆಯಲ್ಲಿರುವ ಸಂಸ್ಕೃತಿಯ ಪ್ರಭಾವದಿಂದ ಪೋಷಕರು ಆತಂಕ ಪಟ್ಟುಕೊಂಡಿರುವ ಶಿಸ್ತಿನ ಸಮಸ್ಯೆ ಬರುವುದಿಲ್ಲ. ಆದರೆ ಹೊರಗಿನ ಪ್ರಭಾವದಿಂದ ಎಂತಹ ಸವಾಲು ಎದುರಾಗುವುದೋ ಗೊತ್ತಿಲ್ಲ. ಇಲ್ಲಿಯ ಪ್ರಭಾವ ಧನಾತ್ಮಕವಾಗೇ ಇರುವುದು. ನಮ್ಮ ಗಮನ ಆಂತರಿಕ ಶಿಸ್ತಿನ ಬಗ್ಗೆ ಇದ್ದೆ ಇರುವುದು. ಮಕ್ಕಳು ಏನು ಮಾಡಬೇಕೆಂದು ನಿಮಗೆ ಅಪೇಕ್ಷೆ ಇದೆಯೋ ಅದನ್ನು ಮೊದಲು ನೀವು ಮಾಡಿ, ಮಕ್ಕಳು ನೋಡಿ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು ಮಾಡಬಹುದಾದ ಚಿಕ್ಕ ಚಿಕ್ಕ project ಕೊಡಿ. ಈ ವರ್ಷ ಇದನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡು ಪೋಷಕರಿಗೆ ಮಕ್ಕಳನ್ನು ಪರಿಣಾಮಕಾರಿಯಾಗಿ, ಕ್ರಿಯಾತ್ಮಕವಾಗಿ ಹೇಗೆ ಕೆಲಸದಲ್ಲಿ ತೊಡಗಿಸಬಹುದು ಎಂಬುದಕ್ಕೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗುವುದು.

ಅಕ್ಷರಂ ಸಂಸ್ಥೆಯ ಸತ್ಯನಾರಾಯಣ ಅವರ ಅಭಿಪ್ರಾಯ:

ನಾವೆಲ್ಲರೂ ಸಂಸ್ಕೃತ ಬಾಂಧವರಾದ್ದರಿಂದ ಅಕ್ಷರಂ ಏನೋ ಸಹಾಯ ಮಾಡಿದೆ ಎಂದಿಲ್ಲ. ನಾವೆಲ್ಲರೂ ಒಟ್ಟಾಗಿ ಒಂದು ಒಳ್ಳೆಯ ಕೆಲಸ ಮಾಡಿದ್ದೇವೆ. ಶಾಲೆ ಒಂದು ನೆಪ, ಕಲಿಕೆ ಮನೆ ಮತ್ತು ಎಲ್ಲೆಲ್ಲೂ ಆಗಬೇಕು. ವೇದಗಳಲ್ಲಿ ಹೇಳಿದ್ದು ಶ್ರದ್ಧೆ, ನಂಬಿಕೆ, ಆತ್ಮವಿಶ್ವಾಸ, ಸ್ವಾಭಿಮಾನವನ್ನು ಮಕ್ಕಳಿಗೆ ಮನೆಯಲ್ಲೇ ಕಲಿಸಬೇಕು. ನಮ್ಮ ಮಕ್ಕಳು ಹೇಗಿರಬೇಕೆಂದು ನಾವು ನಿರೀಕ್ಷಿಸುತ್ತೇವೋ ಹಾಗೆ ಪೋಷಕರು ಇರಬೇಕೆಂಬುದು ನಮ್ಮ ಉಪನಿಷತ್ತಿನ ಸಂದೇಶವೂ ಕೂಡ. ಈಗ ನಾವು ನೋಡುವ ದೃಷ್ಟಿಯಲ್ಲಿ ಬದಲಾಗಿದೆ. ನಮ್ಮ ಪರಂಪರೆಗೆ ತಕ್ಕಂತೆ ನಡೆದರೆ ಸಮಸ್ಯೆ ಬರುವುದಿಲ್ಲ.

ಹೀಗೆ ಅತಿಥಿ ಉಪನ್ಯಾಸಕರಿಗೂ, ಪೋಷಕರಿಗೂ ಮುಂದಿನ ಯೋಜನೆಗಳ ಹಂಚಿಕೆಯನ್ನು ಮಾಡಿ ಸಭೆಗೆ ಧನ್ಯವಾದವನ್ನು ಸಮರ್ಪಿಸಲಾಯಿತು.

-೦-

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.